ಶೃಂಗೇರಿಯಲ್ಲಿನ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾರಾಜರ ಉತ್ತರಾಧಿಕಾರಿಯಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾರಾಜರು ನೀಡಿರುವ ಶಂಕರಾಚಾರ್ಯರ ಆಶೀರ್ವಾದರೂಪಿ ಶುಭಸಂದೇಶ !

`ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಂದಿನಿಂದ ೭ ದಿನಗಳ ವರೆಗೆ ಗೋಮಂತಕದಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವವನ್ನು ಆಯೋಜಿಸಲಾಗಿದೆ. ಇಲ್ಲಿ `ಸನಾತನ ಹಿಂದೂ ಧರ್ಮದ ಆಚರಣೆ ಮತ್ತು ಅದರ ಮಹತ್ವ’ದ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದು ಅತ್ಯಂತ ಆನಂದದ ಸಂಗತಿಯಾಗಿದೆ. ನಮ್ಮ ಸನಾತನ ಧರ್ಮವು ಸರ್ವ ಶ್ರೇಷ್ಠ ಧರ್ಮವಾಗಿದೆ. ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಈ ಲೋಕದಲ್ಲಿ (ಭೂಲೋಕದಲ್ಲಿ), ಪರಲೋಕದಲ್ಲಿ ಹಾಗೂ ಮುಂದಿನ ಜೀವನದ ಕಲ್ಯಾಣ ಮಾಡಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ಮಾರ್ಗದಶನ ಸಿಗುತ್ತದೆ. ಈ ಜನ್ಮದಲ್ಲಿ ನಾವು ಅನೇಕ ರೀತಿಯ ದುಃಖಗಳನ್ನು ಸಹಿಸುತ್ತಿರುತ್ತೇವೆ. ಇಂತಹ ದುಃಖಮಯ ಸಂಸಾರದಿಂದ ಹೇಗೆ ಮುಕ್ತರಾಗುವುದು, ಎಂಬುದರ ಬಗ್ಗೆ ಕೇವಲ ಸನಾತನ ಧರ್ಮದಲ್ಲಿಯೇ ಯೋಗ್ಯವಾದ ಮಾರ್ಗದರ್ಶನ ದೊರೆಯುತ್ತದೆ. ನಮ್ಮ ಸನಾತನ ಧರ್ಮದ ಮೂಲವಾಗಿರುವ ವೇದ, ಶಾಸ್ತ್ರ, ಪುರಾಣಗಳು, ಇತಿಹಾಸವು ಅಮೂಲ್ಯವಾಗಿವೆ. ಈ ಗ್ರಂಥಗಳಲ್ಲಿ ನಮ್ಮ ಎಲ್ಲ ರೀತಿಯ ಪ್ರಶೆಗಳಿಗೆ ಯೋಗ್ಯವಾದ ಉತ್ತರ ದೊರೆಯುತ್ತದೆ.
ಪರಕೀಯ ಆಕ್ರಮಣಗಳಿಂದ ಹಿಂದೂಗಳ ಮನಸ್ಸಿನಲ್ಲಿರುವ ಶ್ರದ್ಧೆಗೆ ಹೊಡೆತ !
ಭಾರತದಲ್ಲಿ ಅನಾದಿ ಕಾಲದಿಂದಲೂ ಈ ಧರ್ಮದ ಆಚರಣೆ ನಡೆಯುತ್ತ ಬಂದಿದೆ. ಇದರಲ್ಲಿ ಪ್ರತಿಯೊಂದು ಕೃತಿಯ ಹಿಂದೆ ವಿಶೇಷ ಕಾರಣವಿರುತ್ತದೆ. ಇವುಗಳಲ್ಲಿನ ಕೆಲವು ಕಾರಣಗಳನ್ನು ನಾವು ತಿಳಿದುಕೊಳ್ಳಬಹುದು ಆದರೆ ನಮ್ಮಲ್ಲಿ ಕೆಲವನ್ನು ಅರಿಯುವ ಕ್ಷಮತೆಯಿರುವುದಿಲ್ಲ. ಮಹರ್ಷಿಗಳು ದಿವ್ಯದೃಷ್ಟಿಯನ್ನು ಸಾಧಿಸಿ ನಮಗೆ ಈ ಆಚರಣೆಗಳ ಬಗ್ಗೆ ಉಪದೇಶಿಸಿದ್ದಾರೆ. ನಮ್ಮಲ್ಲಿ ಕೆಲವು ಕಾರಣಗಳನ್ನು ತಿಳಿದುಕೊಳ್ಳುವ ಕ್ಷಮತೆಯಿದೆ ಮತ್ತು ಕೆಲವು ಕಾರಣಗಳನ್ನು ತಿಳಿಯುವ ಕ್ಷಮತೆಯಿಲ್ಲ. ನಮ್ಮ ಪೂರ್ವಜರಿಗೆ ಧರ್ಮ ಮತ್ತು ಅದರ ಆಚರಣೆಯ ಮೇಲೆ ಅಪಾರ ಶ್ರದ್ಧೆಯಿತ್ತು. ಅಂದಾಜು ೧೫೦ ರಿಂದ ೨೦೦ ವರ್ಷಗಳ ಹಿಂದೆ ಈ ವಿಷಯದ ಬಗ್ಗೆ ಜನರ ಮನಸ್ಸಿನಲ್ಲಿ ಅಪಾರ ಶ್ರದ್ಧೆಯಿತ್ತು. ಏಕೆಂದರೆ ಅವರಿಗೆ ಧರ್ಮಾಚರಣೆಯ ಹಿಂದಿನ ಕಾರಣಗಳು ತಿಳಿದಿದ್ದವು. ಆದುದರಿಂದ ಅವರು ಅವುಗಳನ್ನು ಶ್ರದ್ಧೆಯಿಂದ ಅನುಷ್ಠಾನಕ್ಕೆ ತರುತ್ತಿದ್ದರು. ಕೆಲವು ವರ್ಷಗಳಿಂದ ಜನರ ಮನಸ್ಸಿನಲ್ಲಿದ್ದ ಈ ಕ್ಷಮತೆಯು ಕ್ಷೀಣಿಸುತ್ತಿದೆ. ಇದರಿಂದಾಗಿ ಕೆಲವರು ಹೊರಗಿನಿಂದ ಬಂದು ನಮ್ಮ ಧರ್ಮದ ಮೇಲೆ ಆಕ್ರಮಣ ಮಾಡುತ್ತಿದ್ದಾರೆ ಹಾಗೂ ಅವರು ಇಲ್ಲಿನ ಜನರನ್ನು ತಪ್ಪು ದಾರಿಗೆ ಒಯ್ಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಭಾರತೀಯರಲ್ಲಿ ಧರ್ಮದ ಬಗೆಗಿನ ಶ್ರದ್ಧೆಯು ಕ್ಷೀಣಿಸತೊಡಗಿದೆ. ಈಗ ನಾವು ಈ ಶ್ರದ್ಧೆಯನ್ನು ಜಾಗೃತಗೊಳಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಇಂತಹ ಅಧಿವೇಶನಗಳ ಅಪಾರ ಅವಶ್ಯಕತೆಯಿದೆ. ಇಂತಹ ಕೆಲಸಗಳು ಪ್ರತಿಯೊಂದು ಕಡೆಗಳಲ್ಲಿ ನಡೆಯಬೇಕಿದೆ.
ಇಂತಹ ಕಾರ್ಯಕ್ರಮಗಳ ಆಯೋಜನೆ ನಡೆಯುತ್ತಿರಬೇಕು !
ಎಲ್ಲ ಸನಾತನ ಧರ್ಮೀಯರಲ್ಲಿ ಏಕವಾಕ್ಯತೆ (ಐಕ್ಯಮತ) ಬರಬೇಕಿದೆ. ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯನ್ನು ಹೆಚ್ಚಿಸಲು ಹಾಗೂ ಹಿಂದೂಗಳಿಂದ ಧರ್ಮಾಚರಣೆಯಾಗಿ ಧರ್ಮದ ರಕ್ಷಣೆಯಾಗಲು ಇಂತಹ ಅಧಿವೇಶನಗಳು ಅತ್ಯಂತ ಆವಶ್ಯಕವಾಗಿವೆ. `ವಿಶ್ವದ ಕಲ್ಯಾಣಕ್ಕಾಗಿ ಸನಾತನ ಧರ್ಮದಲ್ಲಿನ ಅತ್ಯಾವಶ್ಯಕ ತತ್ತ್ವಗಳ ಬಗ್ಗೆ ಈ ಅಧಿವೇಶನದಲ್ಲಿ ಚರ್ಚೆಯಾಗಬೇಕು, ಈ ಬಗ್ಗೆ ಜನರ ಮನಸ್ಸಿನಲ್ಲಿ ಜಾಗೃತಿ ಮೂಡಬೇಕು ಹಾಗೂ ಇಂತಹ ಕಾರ್ಯಕ್ರಮಗಳ ಆಯೋಜನೆಯು ಯಾವಾಗಲೂ ನಡೆಯುತ್ತಿರಬೇಕು, ಎಂದು ನಾವು ಆಶೀರ್ವದಿಸುತ್ತೇವೆ. ಹಿಂದೂ ಧರ್ಮೀಯರಲ್ಲಿ ಜಾಗೃತಿ ಮೂಡಿಸಲು ಈ ಪವಿತ್ರ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಭಾಗಿಯಾದ ಎಲ್ಲರಿಗೂ ನಾರಾಯಣಸ್ಮರಣಪೂರ್ವಕ ಆಶೀರ್ವದಿಸುತ್ತೇವೆ. ದಕ್ಷಿಣ ದಿಶೆಗೆ ದಕ್ಷಿಣಾಮ್ನಾಯ ಶೃಂಗೇರಿಯ ಶಾರದಾಪೀಠದ ೩೬ನೇ ಆಚಾರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಕೃಪೆಯಿಂದ ಈ ಎಲ್ಲ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಸಂಪನ್ನವಾಗಬೇಕು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಸಹಭಾಗಿಯಾದ ಎಲ್ಲರ ಕಲ್ಯಾಣವಾಗಬೇಕು.
ಶುಭಮಸ್ತು !
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara