|

ಬುಲಂದಶಹರ (ಉತ್ತರಪ್ರದೇಶ) – ಸಮಾಜಕಂಟಕರು ೪ ದೇವಸ್ಥಾನದಲ್ಲಿನ ಅನೇಕ ಮೂರ್ತಿಗಳನ್ನು ಬಗ್ನಗೊಳಿಸಿದ್ದಾರೆ. ಬುಲಂದಶಹರದಲ್ಲಿನ ಗುಲಾವಟಿಯಲ್ಲಿ ಬರಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ನಂತರ ಹಿಂದುತ್ವನಿಷ್ಠ ಸಂಘಟನೆಗಳ ಸಹಿತ ಎಲ್ಲಾ ಹಿಂದೂಗಳು ಅಸಮಾಧಾನ ವ್ಯಕ್ತಪಡಿಸುತ್ತಾ ದೇವಸ್ಥಾನಗಳಿಗೆ ಸಂರಕ್ಷಣೆ ನೀಡಲು ಒತ್ತಾಯಿಸಿದ್ದಾರೆ.
ಮೇ ೩೧ ರಂದು ರಾತ್ರಿ ಈ ಘಟನೆ ನಡೆದಿದೆ. ಮರುದಿನ ಬೆಳಿಗ್ಗೆ ಯಾವಾಗ ಭಕ್ತರು ಅದರಲ್ಲಿನ ಒಂದು ದೇವಸ್ಥಾನಕ್ಕೆ ಪೂಜಾ ಅರ್ಚನೆಗಾಗಿ ಹೋಗಿದ್ದರೋ ಆಗ ಅವರಿಗೆ ದೇವತೆಗಳ ಮೂರ್ತಿಯು ಭಗ್ನವಾಗಿರುವುದು ಕಂಡು ಬಂದಿದೆ. ಇದೇ ರೀತಿ ಇನ್ನೂ ೩ ದೇವಸ್ಥಾನಗಳಲ್ಲಿ ನಡೆದಿರುವುದು ಗಮನಕ್ಕೆ ಬಂದಿದೆ. ಕೆಲವು ಕ್ಷಣದಲ್ಲಿ ಈ ಮಾಹಿತಿ ಸಂಪೂರ್ಣ ಗ್ರಾಮದಲ್ಲಿ ಕಾಳಗಿಚ್ಚಿನಂತೆ ಹರಡಿದೆ. ಅದರ ನಂತರ ಸ್ಥಳೀಯ ಹಿಂದೂ ಗ್ರಾಮಸ್ಥರು ಹಾಗೂ ಹಿಂದುತ್ವನಿಷ್ಠ ಸಂಘಟನೆಯ ಪ್ರತಿನಿಧಿಗಳು ಘಟನಾಸ್ಥಳಕ್ಕೆ ಬಂದರು ಮತ್ತು ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಈ ೪ ದೇವಸ್ಥಾನಗಳಲ್ಲಿ ಒಂದು ದೇವಸ್ಥಾನ ೧೦೦ ವರ್ಷಗಳಷ್ಟು ಹಳೆಯದಾಗಿದೆ.
Uttar Pradesh: 4 Hindu temples, one of them 100 years old, 12 murtis found vandalized in Bulandshahr, locals demand actionhttps://t.co/39JO4EJocK
— OpIndia.com (@OpIndia_com) June 1, 2023
ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವೆವು ! – ಪೊಲೀಸ್ ಅಧಿಕ್ಷಕ ಸುರೇಂದ್ರನಾಥ ತಿವಾರಿ
ಈ ಘಟನೆಯ ನಂತರ ಪೊಲೀಸರು ಈ ದೇವಸ್ಥಾನಗಳನ್ನು ಮುಚ್ಚಿದ್ದಾರೆ. ಪೋಲಿಸ್ ಅಧಿಕ್ಷಕ ಸುರೇಂದ್ರನಾಥ ತಿವಾರಿ ಇವರು ಆರೋಪಿಯನ್ನು ಹುಡುಕಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿಂದೂಗಳಿಗೆ ಆಶ್ವಾಸನೆ ನೀಡಿದರು. ಪ್ರಸ್ತುತ ಘಟನ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ