
‘ಸದ್ಯ ಅನೇಕ ಉತ್ಪಾದಕರು ತಮ್ಮ ಉತ್ಪಾದನೆಗಳ ಮೇಲೆ ಜನತೆಯ ಶ್ರದ್ಧಾಸ್ಥಾನದಲ್ಲಿರುವ ದೇವತೆಯ ಹೆಸರು, ಚಿತ್ರ ಅಥವಾ ಶುಭಚಿಹ್ನೆಗಳನ್ನು ಮುದ್ರಿಸುತ್ತಾರೆ. ಉತ್ಪಾದನೆಗಳ ಮೇಲೆ ದೇವತೆಯ ಹೆಸರನ್ನು ಶ್ರದ್ಧೆಯಿಂದ ಮುದ್ರಣ ಮಾಡಿದ್ದರೂ, ಸಹ ಅವುಗಳ ಬಳಕೆಯಾದ ನಂತರ ಅನೇಕಬಾರಿ ದೇವತೆಯ ಹೆಸರು ಕಾಲಡಿ ಬಿದ್ದು ತುಳಿಯಲ್ಪಡುವುದರಿಂದ ಅಥವಾ ಕಸದಬುಟ್ಟಿಯಲ್ಲಿ ಹಾಕಿದ್ದರಿಂದ ಆ ದೇವತೆಯ ಅವಮಾನವಾಗುತ್ತದೆ. ದೇವತೆಗಳ ಚಿತ್ರದಲ್ಲಿ, ಹಾಗೆಯೇ ಹೆಸರಿನಲ್ಲಿ ಅವರ ಶಕ್ತಿ ಕಾರ್ಯನಿರತವಾಗಿರುತ್ತದೆ. ನಮ್ಮ ದೇವತೆಗಳ, ಶ್ರದ್ಧಾಸ್ಥಾನಗಳಿಗೆ ಈ ರೀತಿ ಅವಮಾನವಾಗಬಾರದೆಂದು ಇದಕ್ಕಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಇಂತಹ ವಸ್ತುಗಳ ಬಳಕೆಯಾದ ನಂತರ ಆ ವಸ್ತುವಿನ ಮೇಲಿನ ದೇವತೆಯ ಹೆಸರಿನ ‘ಸ್ಟಿಕರ್’ ಅಥವಾ ಚಿತ್ರವನ್ನು ಅಗ್ನಿಯಲ್ಲಿ ವಿಸರ್ಜನೆ ಮಾಡಬೇಕು. ಆ ಸಮಯಕ್ಕೆ ಸಂಬಂಧಿತ ದೇವತೆಗೆ ‘ನನ್ನ ಮೂಲಕ ನಿನ್ನ ಅವಮಾನವಾಗಬಾರದೆಂದು ನಿನ್ನ ಚಿತ್ರವನ್ನು ಅಗ್ನಿಯಲ್ಲಿ ವಿಸರ್ಜನೆ ಮಾಡುತ್ತಿದ್ದೇನೆ ,’ ಎಂದು ಪ್ರಾರ್ಥನೆ ಮಾಡಬೇಕು. ಒಂದುವೇಳೆ ಯಾವುದಾದರೊಂದು ವಸ್ತುವನ್ನು ಅಗ್ನಿಯಲ್ಲಿ ವಿಸರ್ಜಿಸಲು ಆಗುವುದಿಲ್ಲವೋ, ಆಗ ದೇವತೆಯ ಹೆಸರಿಗೆ ಅಥವಾ ಚಿತ್ರಕ್ಕೆ ಅವಮಾನವಾಗದಂತೆ, ಸಂಪೂರ್ಣ ಕಾಳಜಿ ವಹಿಸಬೇಕು.’
– ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೨೪.೩.೨೦೨೩)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !