
ನವ ದೆಹಲಿ – ಅಂತರಾಷ್ಟ್ರೀಯ ಸಮಸ್ಯೆಯ ಬಗ್ಗೆ ಭಾರತ ತೆಗೆದುಕೊಂಡಿರುವ ನಿಲುವು ನೋಡುತ್ತಿದ್ದರೆ ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ಆಗಿದೆ. ಮೌಲ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವ ಉಕ್ರೇನಿನಲ್ಲಿ ನಮಗೆ ಇದೆ ಅರಿವಿಗೆ ಬಂದಿದೆ, ಎಂದು ಉಕ್ರೇನ್ ನ ಉಪ ವಿದೇಶಾಂಗ ಸಚಿವ ಎಮೀನ ಝಾಪರೋವಾ ಇವರು ಹೇಳಿಕೆ ನೀಡಿದರು. ಅವರು ನಾಲ್ಕು ದಿನದ ಭಾರತ ಪ್ರವಾಸದಲ್ಲಿ ಇದ್ದರೆ. ‘ಯಾವ ಭೂಮಿ ಅನೇಕ ಋಷಿಗಳು, ಸಂತರು ಮತ್ತು ಗುರುಗಳಿಗೆ ಜನ್ಮ ನೀಡಿದೆ, ಆ ಭಾರತ ಭೂಮಿಗೆ ಭೇಟಿ ನೀಡಿದ ಆನಂದ ನನಗೆ ಸಿಕ್ಕಿದೆ. ಇಂದು ಭಾರತಕ್ಕೆ ವಿಶ್ವಗುರು, ವೈಶೀಕ ಶಿಕ್ಷಕ ಮತ್ತು ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಇದೆ. ಉಕ್ರೇನಿಗೆ ಬೆಂಬಲ ನೀಡುವುದು, ಇದು ನಿಜವಾದ ‘ವಿಶ್ವಗುರು’ಗಾಗಿ ಯೋಗ್ಯ ಪರ್ಯಾಯವಾಗಿದೆ, ಎಂದು ಕೂಡ ಝಾಪರೋವಾ ಇವರು ಹೇಳಿದರು.
ಝಾಪರೋವಾ ಇವರು ವಿದೇಶಾಂಗ ಸಚಿವಾಲಯದ ಸಚಿವ ಸಂಜಯ್ ವರ್ಮಾ ಇವರನ್ನು ಭೇಟಿ ಮಾಡಿದರು. ಉಕ್ರೇನ್ ನ ರಾಷ್ಟ್ರಾಧ್ಯಕ್ಷ ಝೇಲೆಂಕ್ಸಿ ಇವರ ಶಾಂತಿ ಸೂತ್ರ ಮತ್ತು ಧಾನ್ಯ ಉಪಕ್ರಮಗಳಲ್ಲಿ ಸಹಭಾಗಿ ಆಗುವದಕ್ಕೆ ಅವರು ಭಾರತಕ್ಕೆ ಆಮಂತ್ರಿಸಿದರು. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ಪೂರ್ವ ಯುರೋಪಿಯನ್ ದೇಶದ ಮೊದಲ ಪ್ರತಿನಿಧಿಗಳ ಭಾರತಕ್ಕೆ ನೀಡಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ಝಾಪರೋವಾ ಭಾರತದ ವಿದೇಶಾಂಗ ವ್ಯವಹಾರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಉಪರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ ಮಿಸ್ತ್ರಿ ಇವರನ್ನು ಭೇಟಿ ಮಾಡಿ ಅವರೊಂದಿಗೆ ಮಹತ್ವಪೂರ್ಣ ವಿಷಯಗಳ ಮೇಲೆ ಚರ್ಚೆ ನಡೆಸಿದರು.
ಭಾರತವನ್ನು ವಿಶ್ವದ ಗುರು ಎಂದ ಉಕ್ರೇನ್ ಉಪ ವಿದೇಶಾಂಗ ಸಚಿವೆ..!#eminedzhepparhttps://t.co/8INSQYH8jC
— Zee Kannada News (@ZeeKannadaNews) April 10, 2023
(ಸೌಜನ್ಯ : ದಿ ಎಕನಾಮಿಕ್ ಟೈಮ್ಸ್)
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು