ಸಾಸಾರಾಮ (ಬಿಹಾರ)ದಲ್ಲಿ ಮುಸಲ್ಮಾನರು ನಡೆಸಿದ ದಂಗೆಯ ನಂತರ ಹಿಂದೂಗಳ ಪಲಾಯನ !

ಸಾಸಾರಾಮ (ಬಿಹಾರ) – ಶ್ರೀರಾಮನವಮಿಯ ಸಮಯದಲ್ಲಿ ನಡೆದ ದಂಗೆಯ ನಂತರ ಇಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಪಲಾಯನ ಮಾಡಿದ್ದಾರೆ. ಇಲ್ಲಿಯವರೆಗೂ ಒತ್ತಡದ ಸ್ಥಿತಿಯಿದೆ. ನಾಲಂದದಲ್ಲಿಯೂ ಇದೆ ಸ್ಥಿತಿಯಿದೆ. ಎರಡೂ ನಗರಗಳಲ್ಲಿ ೧೪೪ ಜ್ಯಾರಿಗೊಳಿಸಲಾಗಿದೆ. ಪೊಲೀಸರು ಗಸ್ತು ಹೊಡೆಯುತ್ತಿದ್ದರೂ ಹಿಂದೂಗಳು ಪಲಾಯನ ಮಾಡುತ್ತಿದ್ದಾರೆ. ಇಲ್ಲಿನ ಹಿಂದೂಗಳು `ನಮ್ಮ ರಕ್ಷಣೆ ಮಾಡಲು ಯಾರೂ ಇಲ್ಲದಿರುವಾಗ ನಾವು ಇಲ್ಲಿ ಇರುವುದಾದರೂ ಹೇಗೆ ?’ ಎಂದು ಹೇಳುತ್ತಾರೆ.

ಮೊದಲು ನೀವು ನಿಮ್ಮ ಜೀವ ಉಳಿಸಿ, ಜೀವ ಉಳಿದರೆ ಅನೇಕ ಮನೆಗಳು ಸಿಗುವವು ! – ಸಹಾಯ ಕೇಳಿದ ಹಿಂದೂಗಳಿಗೆ ಪೋಲೀಸರ ಉತ್ತರ

ಪಲಾಯನ ಮಾಡುವ ಓರ್ವ ಹಿಂದೂ ಮಹಿಳೆಯು `ಆಡಳಿತದ ಎದುರಿನಲ್ಲಿಯೇ ನಮ್ಮೆಲ್ಲರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ನಮ್ಮ ವಸ್ತುಗಳು ಸುಟ್ಟು ಬೂದಿಯಾದವು. ನಾವು ಪೊಲೀಸರಲ್ಲಿ ಸಹಾಯ ಕೇಳಿದಾಗ ಅವರು `ಮೊದಲು ನೀವು ನಿಮ್ಮ ಜೀವ ಉಳಿಸಿ, ಜೀವ ಉಳಿದರೆ ಅನೇಕ ಮನೆಗಳು ಸಿಗುವವು’ ಎಂದು ಹೇಳಿದರು. ಆದುದರಿಂದ ನಮಗೆ ಪಲಾಯನ ಮಾಡಬೇಕಾಯಿತು’ ಎಂದು ಹೇಳಿದರು. (ಹಿಂದೂಗಳ ರಕ್ಷಣೆ ಮಾಡುವ ಬದಲು ಇಂತಹ ಸಲಹೆಗಳನ್ನು ನೀಡುವ ಪೊಲೀಸರನ್ನು ಹಿಂದೂಗಳ ಕರದಿಂದ ಏಕೆ ಸಾಕಬೇಕು ?)

(ಸೌಜನ್ಯ: ಇಂಡಿಯನ್ ಟುಡೇ)

ಸಂಪಾದಕರ ನಿಲುವು

  • ಬಿಹಾರದಲ್ಲಿ ಪುನಃ ಅರಾಜಕತೆ ! ಹಿಂದೂಗಳ ಈ ಸ್ಥಿತಿಯು ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ದರ್ಶಿಸುತ್ತಿದೆ !
  • ಭಾರತದಲ್ಲಿ ಮುಸಲ್ಮಾನರಲ್ಲ ಹಿಂದೂಗಳು ಅಸುರಕ್ಷಿತರಾಗಿದ್ದರೆ. ಇದು ಇಂತಹ ಘಟನೆಗಳಿಂದ ಆಗಾಗ ಸಾಬೀತಾಗುತ್ತದೆ. ಈ ಬಗ್ಗೆ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು ತುಟಿಬಿಚ್ಚುವರೇ ?