`ಹಿಂದುತ್ವವನ್ನು ಸುಳ್ಳಿನ ಆಧಾರದಲ್ಲಿ ಕಟ್ಟಲಾಗಿದೆ’, ಎಂದು ಟ್ವೀಟ ಮಾಡಿದ ಕನ್ನಡ ನಟ ಚೇತನ ಕುಮಾರ ಬಂಧನ

ನಟ ಚೇತನ್ ಕುಮಾರ್

ಬೆಂಗಳೂರು – ಹಿಂದುತ್ವವಿರೋಧಿ ಟ್ವೀಟ ಮಾಡಿದ್ದರಿಂದ ಕನ್ನಡ ನಟ ಚೇತನ ಕುಮಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚೇತನ ಕುಮಾರ `ಹಿಂದುತ್ವವು ಸುಳ್ಳಿನ ಆಧಾರದಲ್ಲಿ ಕಟ್ಟಲಾಗಿದೆ’, ಎಂದು ಟ್ವೀಟ ಮಾಡಿದ್ದನು. ಬಜರಂಗ ದಳದ ಶಿವಕುಮಾರ ಇವರು ನೀಡಿದ ದೂರಿನ ಬಳಿಕ ಕ್ರಮ ಕೈಕೊಳ್ಳಲಾಗಿದೆ.

(ಸೌಜನ್ಯ – Public TV)

ಚೇತನ ಕುಮಾರ ಮೇಲೆ ಸಮಾಜದ ವಿವಿಧ ವರ್ಗಗಳ ನಡುವೆ ವೈಮನಸ್ಸು ಹೆಚ್ಚಿಸುವ ಮತ್ತು ಧರ್ಮ ಅಥವಾ ಧಾರ್ಮಿಕ ಶ್ರದ್ಧೆಗಳಿಗೆ ಅಗೌರವ ತೋರಿಸಿದ್ದಾನೆಂದು ಆರೋಪಿಸಲಾಗಿದೆ. ಚೇತನ ಕುಮಾರ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆ ಅವನನ್ನು ಈ ಹಿಂದೆಯೂ ಬಂಧಿಸಲಾಗಿತ್ತು. ಅದರಲ್ಲಿ ಅವನಿಗೆ ಜಾಮೀನು ದೊರಕಿತ್ತು. (ನಿರಂತರವಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವವರಿಗೆ ಆದಷ್ಟು ಬೇಗನೆ ಕಠಿಣ ಶಿಕ್ಷೆಯನ್ನು ವಿಧಿಸಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರಕಾರ ಪ್ರಯತ್ನಿಸುವ ಆವಶ್ಯಕತೆಯಿದೆ – ಸಂಪಾದಕರು)

ಸಂಪಾದಕರ ನಿಲುವು

ದ್ವೇಷಕ್ಕಾಗಿ ಯಾರಾದರೂ ಹಿಂದುತ್ವವನ್ನು ವಿರೋಧಿಸುತ್ತಿದ್ದರೆ, ಇಂತಹ ಕ್ರಮ ಕೈಕೊಳ್ಳುವು ಆವಶ್ಯಕವಾಗಿದೆ.