ಉತ್ತರಪ್ರದೇಶದಲ್ಲಿ `ಲವ್ ಜಿಹಾದ’ನ ಹೊಸ ಪ್ರಕರಣ ಬೆಳಕಿಗೆ !

ಕನ್ನೋಜ (ಉತ್ತರಪ್ರದೇಶ) – ಜಿಲ್ಲೆಯ ಛಿಬ್ರಾಮಾವೂ ಕೋತವಾಲಿ ಪ್ರದೇಶದಲ್ಲಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಮೇಲೆ ಮತಾಂತರಗೊಳಿಸಿ ವಿವಾಹವಾಗುವಂತೆ ಅದೇ ಪರಿಸರದ ಓರ್ವ ಮುಸಲ್ಮಾನ ಯುವಕ ಒತ್ತಡ ಹೇರುತ್ತಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಬಳಿಕ ಆರೋಪಿ ಯುವಕನು ತನ್ನ ಕುಟುಂಬದೊಂದಿಗೆ ಸಂತ್ರಸ್ತ ಬಾಲಕಿ ಮತ್ತು ಅವಳ ಸಹೋದರನಿಗೆ ಥಳಿಸಿದನು. (ಇದರಿಂದ ಅವನ ಉದ್ಧಟತನ ಕಂಡು ಬರುತ್ತದೆ. ಕಾನೂನಿನ ಭಯ ಇಲ್ಲದಿರುವ ಇಂತಹವನ್ನು ಜೈಲಿಗಟ್ಟಬೇಕು – ಸಂಪಾದಕರು)
#कन्नौज : कक्षा नौ की छात्रा पर मुस्लिम युवक ने धर्मांतरण व निकाह करने का बनाया दवाब, शिकायत करने पर तेजाब फेंककर जान से मारने की दी धमकी देने का पीड़िता ने लगाया आरोप, परिवार ने सीएम को लिखा पत्र, कॉलेज जाते समय भी युवक करता है छेड़खानी, छिबरामऊ कोतवाली का मामला @kannaujpolice pic.twitter.com/3VL2dJO7Ew
— UttarPradesh.ORG News (@WeUttarPradesh) March 10, 2023
ಸಂತ್ರಸ್ತ ಬಾಲಕಿಯು ತನ್ನ ದೂರಿನಲ್ಲಿ, ಅವಳ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಮುಸಲ್ಮಾನ ಸಮುದಾಯದ ಒಬ್ಬ ಯುವಕನು ಶಾಲೆಗೆ ಹೋಗುವಾಗ ಅವಳ ದಾರಿಯನ್ನು ಅಡ್ಡಗಟ್ಟಿ ಪೀಡಿಸುತ್ತಿದ್ದನು. ಅವನು ಅವಳಿಗೆ ಮತಾಂತರಗೊಳಿಸಿ ವಿವಾಹವಾಗಲು ಒತ್ತಡ ಹೇರುತ್ತಿದ್ದನು. ಆರೋಪಿ ಯುವಕನು ಸಂತ್ರಸ್ತ ಬಾಲಕಿಯ ಮನೆಗೆ ಹೋಗಿಎ, `ವಿವಾಹವಾಗದಿದ್ದರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಕೊಲ್ಲುತ್ತೇನೆ’, ಎಂದು ಬೆದರಿಕೆ ಹಾಕಿದ್ದನು. ಈ ಪ್ರಕರಣದ ತನಿಖೆ ಮುಂದುವರಿದಿದೆಯೆಂದು ಪೊಲೀಸ ನಿರೀಕ್ಷಕ ಸಂತೋಷಕುಮಾರ ಕುಶವಾಹ ಹೇಳಿದ್ದಾರೆ.
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !