|

ಸಂಭಾಜಿನಗರ – ನಾವು ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧಿಸುತ್ತಿಲ್ಲ; ಆದರೆ ಈ ಹಿಂದೆ ಕೂಡ ನಾನು ಸಂಭಾಜಿ ನಗರ ಹೆಸರಿಗೆ ವಿರೋಧಿಸಿದ್ದೇನೆ ಮತ್ತು ಮುಂದೆ ಕೂಡ ಮಾಡುತ್ತೇನೆ, ಎಂದು ಜಿಲ್ಲೆಯ ಶಾಸಕ ಮತ್ತು ಎಂ.ಐ.ಎಂ. ಪಕ್ಷದ ನಾಯಕ ಇಮ್ತಿಯಾಜ್ ಜಲೀಲ್ ಇವರು ಹಿಂದೂದ್ವೇಷಿ ಹೇಳಿಕೆ ನೀಡಿದರು. ಫೆಬ್ರುವರಿ ೨೪ ರಂದು ಕೇಂದ್ರ ಸರಕಾರವು ಔರಂಗಾಬಾದ ನಗರವನ್ನು ‘ಛತ್ರಪತಿ ಸಂಭಾಜಿ ನಗರ’ ಮತ್ತು ಉಸ್ಮನಾಬಾದದನ್ನು ‘ಧಾರಾಶಿವ’ ಮಾಡುವ ಮಹಾರಾಷ್ಟ್ರ ಸರಕಾರದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಕಳೆದ ಅನೇಕ ವರ್ಷಗಳ ಕಾಲ ಈ ಮರುನಾಮಕರಣ ಮುಸಲ್ಮಾನರ ಓಲೈಕೆಯಿಂದ ನಿಂತಿತ್ತು.
ಜಲೀಲ್ ಮಾತು ಮುಂದುವರಿಸಿ, ”ನಾವು ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಂಭಾಜಿ ಮಹಾರಾಜ, ಮಹಾತ್ಮ ಪುಲೆ, ಶಾಹು ಮಹಾರಾಜ , ಡಾ. ಬಾಬಾ ಸಾಹೇಬ ಅಂಬೇಡ್ಕರ್, ಇವರೆಲ್ಲರನ್ನು ಗೌರವಿಸುತ್ತೇವೆ; ಆದರೆ ಅವರ ಹೆಸರು ಹೇಳಿ ನಾವು ಎಂದೂ ರಾಜಕೀಯ ಮಾಡಲಿಲ್ಲ. ಸರಕಾರವು ನಗರಗಳ ಹೆಸರು ಬದಲಾಯಿಸಿದೆ; ಆದರೆ ಜಿಲ್ಲೆಯ ಹೆಸರು ಇನ್ನೂ ಕೂಡ ಔರಂಗಬಾದವೆ ಇದೆ. ಅದು ಬದಲಾಯಿಸಲು ಆಗುವುದಿಲ್ಲ. ಸರಕಾರ ತೆಗೆದುಕೊಂಡಿರುವ ನಿರ್ಣಯ ನನಗೆ ಒಪ್ಪಿಗೆ ಇಲ್ಲ, ಆಗ ಅದಕ್ಕೆ ನಾನು ವಿರೋಧ ಮಾಡಬಹುದು. ಅದು ನನ್ನ ಅಧಿಕಾರವಾಗಿದೆ.” ಎಂದು ಹೇಳಿದರು.
ಸಂಪಾದಕೀಯ ನಿಲುವುಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧ ಇಲ್ಲವೆಂದು ಹೇಳಿ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುವ ಔರಂಗಜೇಬನ ಕೃತ್ಯಕ್ಕೆ ಎಂದಾದರೂ ತಪ್ಪು ಎಂದು ಹೇಳುವರೇ, ಇದನ್ನು ತಿಳಿದುಕೊಳ್ಳಿ ! |
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ