
ರಾಮನಾಥಿ (ಗೋವಾ) – ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯ ಸನಾತನದ ಆಶ್ರಮದ ಚೈತನ್ಯಮಯ ವಾತಾವರಣದಲ್ಲಿ ೬ ಜನವರಿ ೨೦೨೩ ರಂದು ಕನ್ನಡ ಭಾಷೆಯ ಸಾಧನಾ ಶಿಬಿರವು ಜರುಗಿತು. ೩ ದಿನಗಳ ಕಾಲ ನಡೆದ ಈ ಶಿಬಿರವನ್ನು ಶಂಖನಾದದಿಂದ ಆರಂಭಿಸಲಾಯಿತು. ಬಾಗಲಕೋಟೆಯ ಹಿತಚಿಂತಕರಾದ ಶ್ರೀ. ಶಿವನ ಗೌಡ ಬರಮಗೌಡರ (ಆಧ್ಯಾತ್ಮಿಕ ಮಟ್ಟ ಶೇ. ೬೩) ಮತ್ತು ಸನಾತನದ ಸಾಧಕಿ ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೬) ಇವರ ಹಸ್ತದಿಂದ ದೀಪ ಪ್ರಜ್ವಲನೆ ಮಾಡಲಾಯಿತು. ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಜ್ಞಾಸುಗಳು ಮತ್ತು ಹಿತಚಿಂತಕರು ಸಹಭಾಗಿಯಾಗಿದ್ದರು. ಇದರಲ್ಲಿ ಆಧ್ಯಾತ್ಮಿಕ ಸಾಧನೆಯ ಮಹತ್ವ, ಸ್ವಭಾವದೋಷ ನಿರ್ಮೂಲನೆ, ಹಿಂದೂ ರಾಷ್ಟ್ರದ ಅವಶ್ಯಕತೆ, ಸಂಕಟಕಾಲದ ತಯಾರಿ ಮುಂತಾದ, ವಿಷಯಗಳನ್ನು ಕಲಿಸಲಾಯಿತು.
ಅಭಿಪ್ರಾಯ
೧. ಸನಾತನ ಸಂಸ್ಥೆಯ ಆಶ್ರಮವೆಂದರೆ ಹಿಂದೂ ರಾಷ್ಟ್ರದ ಮಾದರಿಯಾಗಿದೆ. ಎಲ್ಲಾ ಕಡೆ ಇಂತಹ ಆದರ್ಶ ಸ್ಥಾಪನೆ ಮಾಡಲು ಪ್ರಯತ್ನಿಸುವೆ. – ಶ್ರೀ. ಅಭಿಷೇಕ, ಬೆಂಗಳೂರು.
೨. ವ್ಯಷ್ಟಿ, ಸಮಷ್ಟಿ ಸಾಧನೆ ತಿಳಿಯಿತು. ರಾಮನಾಥಿ ಆಶ್ರಮ ಎಂದರೆ ಭೂವೈಕುಂಠವಾಗಿದೆ. ಇಲ್ಲಿ ಗುರುದೇವರೆಂದರೆ ಸಾಕ್ಷಾತ್ ಶ್ರೀಕೃಷ್ಣ – ಕು. ಲತಾ ನಾಯ್ಕೋಡಿ, ವಿಜಯಪುರ
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !
ಹಿಂದೂ ರಾಷ್ಟ್ರದ ಬುನಾದಿ ಹಾಕುತ್ತಿರುವ ಸನಾತನ ಆಶ್ರಮದಲ್ಲಿ ನಾನು ಅದ್ಭುತ ಅನುಭೂತಿಯನ್ನು ಪಡೆದೆ ! – ಶ್ರೀ ಭಗವತ ಶರಣ ಮಹಂತ ರಾಧಾಕೃಷ್ಣ ಸ್ವಾಮಿ