

‘ಒಮ್ಮೆ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗವು ಲಭಿಸಿತು. ಆಗ ನಮ್ಮಲ್ಲಾದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.
೧. ಪ್ರತಿಯೊಂದು ಪ್ರಸಂಗವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುವ ಕು. ಪ್ರಾರ್ಥನಾ !
ಕು. ಪ್ರಾರ್ಥನಾ ಪಾಠಕ : ‘ಪರಮ ಪೂಜ್ಯ, ನಾನು ಈ ಸತ್ಸಂಗಕ್ಕೆ ಬರುವಾಗ ತುಂಬಾ ಮಳೆ ಬರುತ್ತಿತ್ತು. ಆಗ ನನಗೆ ‘ವರುಣದೇವನು ತಮ್ಮ ಸತ್ಸಂಗಕ್ಕೆ ಬಂದಿದ್ದಾನೆ ಮತ್ತು ತಮ್ಮ ಆಶೀರ್ವಾದವನ್ನು ಪಡೆಯುತ್ತಿದ್ದಾನೆ’, ಎಂದೆನಿಸಿತು.
ಪರಾತ್ಪರ ಗುರು ಡಾ. ಆಠವಲೆ : ದೈವೀ ಬಾಲಕರು ಎಲ್ಲ ಪ್ರಸಂಗಗಳ ಕಡೆಗೆ ಹೇಗೆ ಸಕಾರಾತ್ಮಕ ದೃಷ್ಟಿಯಿಂದ ನೋಡುತ್ತಾರಲ್ಲ ! ನಾವಾದರೆ, ‘ಜೋರಾಗಿ ಮಳೆ ಬರುತ್ತಿದೆ, ಸತ್ಸಂಗಕ್ಕೆ ಹೇಗೆ ಹೋಗುವುದು ?’ ಎಂಬ ವಿಚಾರ ಮಾಡುತ್ತಿದ್ದೆವು. ತುಂಬಾ ಚೆನ್ನಾಗಿದೆ !
೨. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಕು. ಪ್ರಾರ್ಥನಾ ಪಾಠಕ ಇವಳಲ್ಲಿ ಇರುವ ಅಪಾರ ಭಾವ
೨ ಅ. ಕು. ಪ್ರಾರ್ಥನಾ ‘ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿಯೊಂದು ಯುಗದಲ್ಲಿರುತ್ತಾರೆ; ಆದ್ದರಿಂದ ನಾನು ಅವರ ಜೊತೆಗೆ ಇರುತ್ತೇನೆ’, ಎಂದು ಹೇಳುವುದು
ಕು. ಪ್ರಾರ್ಥನಾ ಪಾಠಕ : ಸತ್ಯ, ತ್ರೇತಾ ಮತ್ತು ದ್ವಾಪರ ಈ ಯುಗಗಳಲ್ಲಿ ತಾವು ನಮ್ಮ ಜೊತೆಯಲ್ಲಿಯೇ ಇದ್ದೀರಿ.
ಪರಾತ್ಪರ ಗುರು ಡಾ. ಆಠವಲೆ : ಆದರೆ ನೀವು ಪುನಃ ಪುನಃ ಏಕೆ ಜನ್ಮ ಪಡೆಯುತ್ತೀರಿ ? ಮೋಕ್ಷಕ್ಕೆ ಏಕೆ ಹೋಗುವುದಿಲ್ಲ ?
ಕು. ಪ್ರಾರ್ಥನಾ ಪಾಠಕ : ನೀವು ಇರುವುದರಿಂದ ನಾನು ಬರುತ್ತೇನೆ.
೨ ಆ. ಪ್ರಾರ್ಥನಾಳಿಗೆ ಅರಿವಾದ ಪ್ರತಿಯೊಂದು ಯುಗದಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ರೂಪ ಮತ್ತು ಸಾಧಕರ ರೂಪಗಳು
ಕು. ಪ್ರಾರ್ಥನಾ ಪಾಠಕ : ತ್ರೇತಾಯುಗದಲ್ಲಿ ಎಲ್ಲ ಸಾಧಕರು ವಾನರಸೇನೆಗಳಿದ್ದರು.
ಪರಾತ್ಪರ ಗುರು ಡಾ. ಆಠವಲೆ : ಅರೆ, ಪ್ರಾರ್ಥನಾ ಹೇಗೆ ಯೋಗ್ಯವಾದುದನ್ನೇ ಮಾತನಾಡುತ್ತಾಳಲ್ಲ, ಶ್ರೀರಾಮನ ತ್ರೇತಾಯುಗ !
ಕು. ಪ್ರಾರ್ಥನಾ ಪಾಠಕ : ನನಗೆ ‘ನಾನು ಒಂದು ಚಿಕ್ಕ ಅಳಿಲು ಆಗಿದ್ದೇನೆ’, ಎಂದೆನಿಸುತ್ತದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನಿದ್ದನು. ಆಗ ನಾವೆಲ್ಲರೂ ಗೋಪ-ಗೋಪಿಯರಾಗಿದ್ದೆವು. ಈಗ ಕಲಿಯುಗದಲ್ಲಿ ನಾವೆಲ್ಲರೂ ಸಾಧಕರಿದ್ದೇವೆ ಮತ್ತು ತಾವು ವಿಷ್ಣು ಆಗಿರುವಿರಿ.
ಪರಾತ್ಪರ ಗುರು ಡಾ. ಆಠವಲೆ : ವಯಸ್ಸಿನಲ್ಲಿ ದೊಡ್ಡವನಾಗಿರುವ ಯಾರಾದರೊಬ್ಬ ಸಾಧಕನು ಹೀಗೆ ವಿಚಾರವನ್ನು ಮಾಡಬಹುದೇ ?
– ಕು. ಪ್ರಾರ್ಥನಾ ಪಾಠಕ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೧೧), ಪುಣೆ.
ಮನೆಯ ಕೆಲಸಗಳನ್ನು ಆಶ್ರಮಸೇವೆಯೆಂದು ಮಾಡುವ ಮತ್ತು ಗುರುದೇವರ ಬಗ್ಗೆ ಶ್ರದ್ಧೆ ಇರುವ ಮಂಗಳೂರಿನ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಮೋಕ್ಷಾ ವಿಜಯೇಂದ್ರ ಕುಡ್ವ (ವಯಸ್ಸು ೧೫ ವರ್ಷ) !
ವ್ಯಷ್ಟಿ ಸಾಧನೆ ಭಾವಪೂರ್ಣವಾಗಿ ಮಾಡುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಂಗಳೂರಿನ ಕು. ಮನ್ವಿತಾ ಪ್ರಕಾಶ (ವಯಸ್ಸು ೮ ವರ್ಷ) !
ದೈವೀ ಬಾಲಕರನ್ನು ರೂಪಿಸುವ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಮಾರ್ಗದರ್ಶನ
ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಧಾರವಾಡದ ಚಿ. ಶ್ರೀಹರಿ ಬಸವರಾಜ ಗೋರವರ (ವಯಸ್ಸು ೫ ವರ್ಷ) !
ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಶಿವಮೊಗ್ಗದ ಕು. ವಿದ್ಯಾಶ್ರೀ ಮುಕುಂದ ಮೊಗೆರ (ವಯಸ್ಸು ೯ ವರ್ಷ) !
ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ರಾಯಚೂರು ಜಿಲ್ಲೆಯ ಚಿ. ನೀಲಲೋಹಿತ ಮಾರುತಿ ನಾಯಕ (ವಯಸ್ಸು ೯ ವರ್ಷ) !