`ಅಲ್ ಕಾಯ್ದಾ’ದಿಂದ ಇಸ್ಲಾಮಿ ದೇಶಗಳಿಗೆ ಕರೆ !

ನವದೆಹಲಿ – ಜಿಹಾದಿ ಭಯೋತ್ಪಾದಕ ಸಂಘಟನೆ `ಅಲ್ ಕಾಯ್ದಾ’ವು ಇಸ್ಲಾಮಿ ದೇಶಗಳಲ್ಲಿ ವಾಸಿಸುವ ಮುಸಲ್ಮಾನರಿಗೆ ಅಲ್ಲಿಯ ಹಿಂದುಗಳ ಮೇಲೆ ಹಾಗೂ ಭಾರತದ ಉತ್ಪಾದನೆಗಳ ಮೇಲೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದೆ. ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮುಸಲ್ಮಾನರಿಂದ ಸಹಾಯ ಕೇಳಲಾಗಿದೆ. `ಅಲ್ ಕಾಯ್ದಾ’ದ ನಿಯತಕಾಲಿಕೆಯಲ್ಲಿ ಒಂದು ಲೇಖನ ಪ್ರಕಾಶಿತಗೊಳಿಸಲಾಗಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾಜಪದ ಮಾಜಿ ವಕ್ತಾರರು ನೂಪುರ್ ಶರ್ಮಾ ಇವರನ್ನು ಟೀಕಿಸಲಾಗಿದೆ.
ಈ ಲೇಖನದಲ್ಲಿ,
೧. ಮುಸಲ್ಮಾನರು ಜಗತ್ತಿನಲ್ಲಿ ಸುಮ್ಮನಿರುವುದರಿಂದ ಭಾರತದಲ್ಲಿನ ಹಿಂದುತ್ವನಿಷ್ಠ ಸರಕಾರದಿಂದ ಮರ್ಯಾದೆಯನ್ನು ಉಲ್ಲಂಘಿಸುತ್ತಾ ಮಹಂಮದ್ ಪೈಗಂಬರರನ್ನು ಅವಮಾನಿಸಿದ್ದಾರೆ. ನಾವು ಈ ಹಿಂದೂ ಸರಕಾರದ ವಿರುದ್ಧ ಸಂಘಟಿತವಾಗುವುದಕ್ಕಾಗಿ ಮತ್ತು ಭಾರತದಲ್ಲಿನ ಬಂಧು ಭಗಿನಿಯರಿಗೆ ಸಹಾಯ ಮಾಡಲು ಕರೆ ನೀಡುತ್ತೇನೆ, ಅದರಿಂದ ಅಲ್ಲಾನ ಶತ್ರು ನಮ್ಮ ಪೈಗಂಬರನ ಅವಮಾನಿಸುವ ಧೈರ್ಯ ಮತ್ತೆ ಮಾಡಲು ಸಾಧ್ಯವಾಗುವುದಿಲ್ಲ.
೨. ನಾವೆಲ್ಲ ಮುಸಲ್ಮಾನರು ವಿಶೇಷವಾಗಿ ವ್ಯಾಪಾರಿಗಳಿಗೆ ಭಾರತೀಯ ಉತ್ಪಾದನೆಗಳನ್ನು ಬಹಿಷ್ಕಾರಿಸಿ, ಹಿಂದೂ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿ ಮತ್ತು ಇಸ್ಲಾಮಿ ದೇಶದಿಂದ ಅವರನ್ನು ಓಡಿಸಲು ಕರೆ ನೀಡುತ್ತೇವೆ. ಮೋದಿ ಇವರ ಬೆಂಬಲಿಗರಿಗೆ ಪೈಗಂಬರನ ದೇಶದಲ್ಲಿ ವಾಸಿಸಲು ಬಿಡುವುದು, ಇದು ಅವಮಾನವಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವು
|
ಯುದ್ಧದಲ್ಲಿ ಅಮೆರಿಕಾವನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ! – ಇರಾನ
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!