ಅಯ್ಯಪ್ಪ ಭಕ್ತರಿಂದ ಶಾಲೆಯ ಎದುರು ಪ್ರತಿಭಟನೆ

ಭಾಗ್ಯನಗರ (ತೇಲಂಗಾಣ) – ಇಲ್ಲಿಯ `ಅಯ್ಯಪ್ಪ ಸ್ವಾಮಿ ಮೊಹನಸ’ ಶಾಲೆಯಲ್ಲಿ ನವೆಂಬರ 30, 2022 ರಂದು 6 ನೇ ತರಗತಿಯ ವಿದ್ಯಾರ್ಥಿಗಳಿಗೆ `ಅಯ್ಯಪ್ಪ ಮಾಲೆ’ ಧರಿಸಿದ್ದರಿಂದ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು. ವಿದ್ಯಾರ್ಥಿಗಳ ತರಗತಿಯ ಶಿಕ್ಷಕರು ಅವರಿಗೆ ಬೈಗುಳಗಳನ್ನು ಹಾಕಿದರು ಮತ್ತು ಅವರು ವಿದ್ಯಾರ್ಥಿಗಳು ಕೊರಳಿನಲ್ಲಿ ಹಾಕಿದ್ದ `ಅಯ್ಯಪ್ಪ ಮಾಲೆ’ಯನ್ನು ತೆಗೆಯುವಂತೆ ಮಾಡಿದರು. ಕೇರಳದಲ್ಲಿರುವ ಶಬರಿಮಲಾ ಯಾತ್ರೆಯ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆಯಲು 41 ದಿನಗಳ ಉಪವಾಸವನ್ನು ಮಾಡಬೇಕಾಗುತ್ತದೆ. ಈ ವ್ರತ ಮಾಡುವವರು ಕಪ್ಪು ವಸ್ತ್ರವನ್ನು ಧರಿಸಿ ತಿಲಕವನ್ನು ಹಚ್ಚುತ್ತಾರೆ. ಈ ವ್ರತವನ್ನು ವರ್ಗದಲ್ಲಿರುವ ಕೆಲವು ವಿದ್ಯಾರ್ಥಿಗಳು ಮಾಡುತ್ತಿದ್ದರು. ಈ ವಿದ್ಯಾರ್ಥಿಗಳಿಗೂ ಅವರು ಧರಿಸಿರುವ ಕಪ್ಪು ವಸ್ತ್ರವನ್ನು ತೆಗೆಯಲು ಮತ್ತು ಹಣೆಯ ಮೇಲೆ ಹಚ್ಚಿದ್ದ ತಿಲಕವನ್ನು ಅಳಿಸುವಂತೆ ಮಾಡಿದರು. ಈ ಘಟನೆಯನ್ನು ನಿಷೇಧಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು ಮತ್ತು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಒತ್ತಾಯಿಸಿದರು.
#Hyderabad – Student refused entry to school for wearing Ayyappa Mala, kicks in the school uniform debate
(Video – Reporter Input)#ayyappaswamy #ayyappamala #SchoolUniform https://t.co/7AhBeiMefa pic.twitter.com/FgTcVrFGOT
— Times Now Education (@TimesNowCareers) November 30, 2022
ಇದೇ ರೀತಿಯ ಘಟನೆ ನವೆಂಬರ 23, 2022 ರಂದು ಮಂದಾಮರಿಯ ಸಿಂಗರೇನಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಸಂದರ್ಭದಲ್ಲಿ ಜರುಗಿತ್ತು. ಅವರು ಅಯ್ಯಪ್ಪ ಮಾಲೆ ಧರಿಸಿದ್ದರಿಂದ ಶಾಲೆಯಲ್ಲಿ ಪ್ರವೇಶಿಸಲು ನಿರಾಕರಿಸಲಾಗಿತ್ತು. ಒಂದು ಸ್ಥಳಿಯ ವೃತ್ತವಾಹಿನಿ ನೀಡಿರುವ ಮಾಹಿತಿಯನುಸಾರ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಅಯ್ಯಪ್ಪ ಮಾಲೆ ಧರಿಸಿದ್ದರಿಂದ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು ಎಂದು ಆರೋಪಿಸಿದ್ದಾರೆ.
(`ಅಯ್ಯಪ್ಪ ಮಾಲೆ’ ಇದು ರುದ್ರಾಕ್ಷ, ರಕ್ತಚಂದನ, ತುಳಸಿಯಿಂದ ತಯಾರಿಸಲಾಗುತ್ತದೆ)
ಸಂಪಾದಕೀಯ ನಿಲುವು
|
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation