ಉತ್ತರಾಖಂಡದಲ್ಲಿನ ಭಾಜಪದ ಶಾಸಕ ಬಂಶೀಧರ ಭಗತರವರ ಖೇದಕರ ಹೇಳಿಕೆ
ಹಲ್ದಾನಿ (ಉತ್ತರಾಖಂಡ) – ವಿದ್ಯೆ ಬೇಕಿದ್ದರೆ ಸರಸ್ವತಿಯನ್ನು ಪಟಾಯಿಸಿ, ಶಕ್ತಿ ಬೇಕಿದ್ದರೆ ದುರ್ಗೆಯನ್ನು ಪಟಾಯಿಸಿ ಹಾಗೂ ಹಣ ಬೇಕಿದ್ದರೆ ಲಕ್ಷ್ಮೀಯನ್ನು ಪಟಾಯಿಸಿ, ಎಂಬ ಹೇಳಿಕೆಯನ್ನು ಭಾಜಪದ ಶಾಸಕರಾದ ಬಂಶೀಧರ ಭಗತರವರು ಅಂತರಾಷ್ಟ್ರೀಯ ಬಾಲಕಿಯರ ದಿನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದವರು ಈ ಹೇಳಿಕೆಗೆ ಜೋರಾಗಿ ನಕ್ಕು ಸಮರ್ಥನೆ ನೀಡಿದರು. ಈ ಕಾರ್ಯಕ್ರಮಕ್ಕೆ ಉತ್ತರಾಖಂಡದ ಮಹಿಳಾ ವಿಕಾಸಮಂತ್ರಿಗಳಾದ ರೇಖಾ ಆರ್ಯರವರೂ ಉಪಸ್ಥಿತರಿದ್ದರು.
“विद्या चाहिए तो सरस्वती को पटाओ, धन चाहिए तो लक्ष्मी को पटाओ”
◆ हल्द्वानी में BJP MLA बंशीधर भगत ने कल ‘अंतरराष्ट्रीय बालिका दिवस’ पर दिया विवादित बयान। #Bansidharbhagat pic.twitter.com/zqI5IMfBO0
— News24 (@news24tvchannel) October 12, 2022
ಭಗತರವರು ಮುಂದುವರಿದು, ಪುರುಷರ ಬಳಿ ಏನಿರುತ್ತದೆ ? ಒಂದು ಶಿವನಿದ್ದಾನೆ (ಭಗವಾನ ಶಿವ), ಅವರು ಕಲ್ಲುಗಳ ರಾಶಿಯಲ್ಲಿ ಹೋಗಿ ಬಿದ್ದಿದ್ದಾರೆ. ಅವರ ತಲೆಯ ಮೇಲೆ ಸರ್ಪವನ್ನು ಇಡಲಾಗಿದೆ. ಭಗವಾನ ವಿಷ್ಣುವು ಆಳವಾದ ಸಮುದ್ರದಲ್ಲಿ ಅಡಗಿ ಕುಳಿತಿದ್ದಾರೆ. ಇಬ್ಬರಿಗೂ ಪರಸ್ಪರ ಮಾತನಾಡಲೂ ಆಗುತ್ತಿಲ್ಲ’ ಎಂದು ಹೇಳಿದರು.
ಸಂಪಾದಕೀಯ ನಿಲುವು
|