ಸಾಧಕರಿಗೆ ಸೂಚನೆ

‘ಸದ್ಯ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (೧೦ ಸೆಪ್ಟೆಂಬರ್ ರಿಂದ ೨೫ ಸೆಪ್ಟೆಂಬರ್ ೨೦೨೨ ಈ ಅವಧಿಯಲ್ಲಿ) ಈ ತೊಂದರೆ ಹೆಚ್ಚಾಗುವುದರಿಂದ ಆ ಕಾಲಾವಧಿಯಲ್ಲಿ ಪ್ರತಿದಿನ ಮಾಡಬೇಕಾದ ಸುಧಾರಿತ ನಾಮಜಪ ‘ಓಂ ಓಂ ಶ್ರೀ ಗುರುದೇವ ದತ್ತ ಓಂ |’ ಈ ರೀತಿ ಇದೆ. ಇದಕ್ಕೂ ಮೊದಲು ಪ್ರಕಟಿಸಲಾದ ನಾಮಜಪಕ್ಕನುಸಾರ ಕೊನೆಯಲ್ಲಿ ೨ ಸಲ ‘ಓಂ’ ಎಂದು ಹೇಳಲಾಗಿತ್ತು ಆದರೆ ಈಗ ಒಂದೇ ಸಲ ‘ಓಂ’ ಹೇಳಬೇಕು. ಈ ಸುಧಾರಿತ ನಾಮಜಪವನ್ನು sanatan.org ಈ ಜಾಲತಾಣದಲ್ಲಿ ಲಭ್ಯಮಾಡಿಕೊಡಲಾಗಿದೆ
ಈ ಸುಧಾರಿತ ನಾಮಜಪಕ್ಕಾಗಿ ಲಿಂಕ್ –
https://www.sanatan.org/kannada/265.html
ಈ ನಾಮಜಪವನ್ನು ಕನಿಷ್ಠ ೧ ಗಂಟೆ ಮಾಡಬೇಕು. ಯಾವ ಸಾಧಕರು ತಮಗಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಯನ್ನು ದೂರ ಮಾಡಲು ಆಧ್ಯಾತ್ಮಿಕ ಉಪಾಯವನ್ನು ಮಾಡುತ್ತಾರೆಯೋ, ಅವರು ತಮ್ಮ ಉಪಾಯಗಳ ನಾಮಜಪದ ಹೊರತಾಗಿ ದತ್ತನ ನಾಮಜಪವನ್ನು ಕನಿಷ್ಠ ೧ ಗಂಟೆ ಮಾಡಬೇಕು. ದತ್ತನ ನಾಮಜಪವನ್ನು ಮಾಡುವಾಗ ಕೈಗಳ ಐದೂ ಬೆರಳುಗಳ ತುದಿಗಳನ್ನು ಜೋಡಿಸಿ ಅನಾಹತಚಕ್ರ ಮತ್ತು ಮಣಿಪುರಚಕ್ರದ ಸ್ಥಳದಲ್ಲಿ ನ್ಯಾಸ ಮಾಡಬೇಕು.
ಯಾವ ಸಾಧಕರು ಆಧ್ಯಾತ್ಮಿಕ ಉಪಾಯ ಮಾಡುವುದಿಲ್ಲವೋ, ಅವರು ವೈಯಕ್ತಿಕ ತಯಾರಿ, ಸ್ನಾನ, ಸ್ವಚ್ಛತೆ-ಸೇವೆ ಮುಂತಾದ ಸಮಯದಲ್ಲಿ ದತ್ತನ ನಾಮಜಪವನ್ನು ಕನಿಷ್ಠ ೧ ಗಂಟೆಯಾಗುವಂತೆ ನೋಡಬೇಕು; ಆದರೆ ಪೂರ್ವಜರ ತೊಂದರೆಯ ಅರಿವಾದರೆ ಅವರು ಸಹ ಕುಳಿತು ಮತ್ತು ಮುದ್ರೆ ಮಾಡಿ ದತ್ತನ ನಾಮಜಪವನ್ನು ಮಾಡಬೇಕು.
– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೯.೨೦೨೨)
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !