ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೧೫೪ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

ಮಾಯೆಯ ಭವ ಸಾಗರದಿಂದ ಶಿಷ್ಯರು ಹಾಗೂ ಭಕ್ತರನ್ನು ಹೂವಿನ ಹಾಗೆ ಹಗುರವಾಗಿ ಎತ್ತಿ ಹೊರತೆಗೆಯುವ, ಅವರಿಂದ ಅವಶ್ಯಕವಿರುವ ಸಾಧನೆಯನ್ನು ಮಾಡಿಸಿ ಕೊಳ್ಳುವ ಮತ್ತು ಕಷ್ಟದ ಸಮಯದಲ್ಲಿ ಅವರಿಗೆ ನಿರಪೇಕ್ಷ ಪ್ರೀತಿಯ ಆಧಾರ ನೀಡಿ ಸಂಕಟಗಳಿಂದ ಮುಕ್ತಗೊಳಿಸುವವರು ಗುರುಗಳೇ ಆಗಿರುತ್ತಾರೆ. ಇಂತಹ ಪರಮ ಪೂಜನೀಯ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ ! ಇದೇ ಕೃತಜ್ಞತಾಭಾವದಲ್ಲಿ ಹಾಗೂ ಚೈತನ್ಯಮಯ ವಾತಾವರಣದಲ್ಲಿ ಸನಾತನ ಸಂಸ್ಥೆಯ ವತಿಯಿಂದ ದೇಶದಾದ್ಯಂತ ೧೫೪ ಸ್ಥಳಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಇದರಲ್ಲಿ ದೆಹಲಿ, ಹರಿಯಾಣ, ಗುಜರಾತ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಝಾರಖಂಡ, ಗೋವಾ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ರಾಜ್ಯಗಳೂ ಸೇರಿವೆ. ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆಯನ್ನು ಮಾಡಲಾಯಿತು.  ಎಲ್ಲೆಡೆ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಗಣ್ಯ ವಕ್ತಾರರು ‘ಧರ್ಮನಿಷ್ಠ ಸಮಾಜದ ನಿರ್ಮಾಣ ಮತ್ತು ಧರ್ಮಾಧಾರಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ಮಹೋತ್ಸವದಲ್ಲಿ ಸ್ವಸಂರಕ್ಷಣಾ ಪ್ರಶಿಕ್ಷಣದ ಪ್ರಾತ್ಯಕ್ಷಿಕೆಗಳು ಉಪಸ್ಥಿತರಿಗಾಗಿ ವಿಶೇಷ ಆಕರ್ಷಣೆಯಾಗಿದ್ದವು. ಈ ಮಹೋತ್ಸವದಲ್ಲಿ ಧರ್ಮ, ಅಧ್ಯಾತ್ಮ, ಸಾಧನೆ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮೋಪಚಾರ, ಹಿಂದೂ ರಾಷ್ಟ್ರ ಮುಂತಾದ ವಿವಿಧ ವಿಷಯಗಳ ಬಗ್ಗೆ ಗ್ರಂಥಗಳ ಪ್ರದರ್ಶನ, ಹಾಗೆಯೇ ರಾಷ್ಟ್ರ-ಧರ್ಮದ ವಿಷಯದಲ್ಲಿನ ಫಲಕ ಪ್ರದರ್ಶನವನ್ನು ಹಾಕಲಾಗಿತ್ತು. ಈ ವರ್ಷ ಸನಾತನ ಸಂಸ್ಥೆಯ ವತಿಯಿಂದ ಕನ್ನಡ, ಮರಾಠಿ, ಹಿಂದಿ, ಆಂಗ್ಲ, ತಮಿಳು, ತೆಲುಗು, ಗುಜರಾತಿ, ಬಂಗಾಲಿ ಮತ್ತು ಒಡಿಯಾ ಈ ೯ ಭಾಷೆಗಳಲ್ಲಿ ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವವು ನೆರವೇರಿತು.

ಶ್ರೀ ದತ್ತಗುರುಗಳ ರೂಪದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಪಾದಪೂಜೆ !

ದತ್ತಾತ್ರೇಯ ರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಪಾದಪೂಜೆಯನ್ನು ಮಾಡುತ್ತಿರುವ ಎಡಗಡೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಫೋಂಡಾ (ಗೋವಾ) – ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪವಿತ್ರ ದಿನವೇ ಗುರುಪೂರ್ಣಿಮೆ ! ಈ ಶುಭದಿನದಂದು ಸನಾತನದ ಸಾಧಕರಿಗೆ ಗುರುದರ್ಶನದ ಅಮೂಲ್ಯ ಉತ್ಸವವು ಲಭಿಸಿತು ! ಸಪ್ತರ್ಷಿಗಳ ಆಜ್ಞೆಯಿಂದ ಗುರು ಪೂರ್ಣಿಮೆಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಶ್ರೀ ದತ್ತಗುರುಗಳ ರೂಪದಲ್ಲಿ ದರ್ಶನ ನೀಡಿದರು. ಜುಲೈ ೧೩ ರಂದು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ನೆರವೇರಿದ ಈ ಭಕ್ತಿಮಯ ಮಹೋತ್ಸವದಲ್ಲಿ ಶ್ರೀ ದತ್ತಗುರುಗಳ ರೂಪದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆ ಮಾಡ    ಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಶ್ರೀ ದತ್ತಾತ್ರೇಯರ ರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆಯನ್ನು ಮಾಡಿದರು. ಗಣಕೀಯ ವ್ಯವಸ್ಥೆಯ ಮೂಲಕ ಎಲ್ಲೆಡೆ ಇರುವ ಸನಾತನದ ಸಾಧಕರು ಶ್ರೀ ಗುರುಗಳ ಈ ಪಾವನ ಪೂಜೆಯ ಲಾಭವನ್ನು ಪಡೆದರು. ದತ್ತಗುರುಗಳ ರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂಜಾ ಸ್ಥಳಕ್ಕೆ ಆUಮಿಸಿದ ನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರವರು ಅವರಿಗೆ ಮಲ್ಲಿಗೆ ಹೂವಿನ ಹಾರ, ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರವರು ಗುಲಾಬಿ ಹೂವಿನ ಹಾರವನ್ನು ಅರ್ಪಿಸಿದರು. ಅನಂತರ ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿಯವರು ಶ್ರೀ ದತ್ತಗುರುಗಳ ರೂಪದಲ್ಲಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಚಂದನದ ಗಂಧ, ಕುಂಕುಮ ಮತ್ತು ಅಕ್ಷತೆಯನ್ನು ಅರ್ಪಿಸಿದರು. ಸಪ್ತರ್ಷಿಗಳು ಈ ಹಿಂದೆಯೇ, ‘ಪರಾತ್ಪರ ಗುರು ಡಾ. ಆಠವಲೆಯವರು ಈಗ ‘ಸಚ್ಚಿದಾನಂದ ಪರಬ್ರಹ್ಮಸ್ವರೂಪರಿದ್ದಾರೆ. ಆದುದರಿಂದ ಅವರನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಎಂದು ಸಂಬೋಧಿಸಬೇಕು ಎಂದು ಹೇಳಿದ್ದರು. ಆದುದರಿಂದ ಈ ಸಮಯದಲ್ಲಿ ಸಪ್ತರ್ಷಿಗಳ ಆಜ್ಞೆಯಿಂದ ೧೦೮ ಬಾರಿ ‘ಓಂ ಐಂ ಕ್ಲಿಂ ಶ್ರೀಂ ಶ್ರೀಂ ಶ್ರೀಂ ಸಚ್ಚಿದಾನಂದ ಪರಬ್ರಹ್ಮಣೆ ನಮಃ | ಎಂಬ ಮಂತ್ರಘೋಷವನ್ನು ಮಾಡುತ್ತ ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿಯವರು ಗುರುದೇವರ ಚರಣಗಳಲ್ಲಿ ಪುಷ್ಪಗಳನ್ನು ಅರ್ಪಿಸಿದರು. ಈ ಸಮಯದಲ್ಲಿ ಗಣಕೀಯ ವ್ಯವಸ್ಥೆಯ ಮೂಲಕ ಜೋಡಿಸಲ್ಪಟ್ಟ ಎಲ್ಲೆಡೆಯ ಸಾಧಕರೂ ಮಂತ್ರಜಪವನ್ನು ಮಾಡಿ ಶ್ರೀಗುರುಗಳಲ್ಲಿ ಮೊರೆ ಯಿಟ್ಟರು. ಶ್ರೀ ಗುರುಗಳಿಗೆ ಧೂಪ ಮತ್ತು ದೀಪಗಳಿಂದ ಆರತಿ ಬೆಳಗಿ, ಅವರಿಗೆ ನೈವೇದ್ಯವನ್ನು ಅರ್ಪಿಸಲಾಯಿತು. ಈ ಸಮಯದಲ್ಲಿ ಸಾಮವೇದದ ಮಂತ್ರಘೋಷದಲ್ಲಿ ಶ್ರೀ ದತ್ತಗುರುಗಳ ರೂಪದಲ್ಲಿರುವ ಗುರುದೇವರಿಗೆ ಆರತಿಯನ್ನು ಬೆಳಗಲಾಯಿತು. ಶ್ರೀ ಗುರುಗಳ ಪಾದಪೂಜೆಯ ಅಮೂಲ್ಯ ಕ್ಷಣವನ್ನು ಅಂತ ರ್ಮನಸ್ಸಿನಲ್ಲಿ ಸಂಗ್ರಹಿಸಿ ಸಾಧಕರು ಸನಾತನದ ಗುರುಪರಂಪರೆಯ ಪಾವನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ ವ್ಯಕ್ತಪಡಿಸಿದರು !

ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಶ್ರೀ ದತ್ತಗುರುಗಳ ರೂಪದ ದರ್ಶನದಿಂದ ಬಂದಂತಹ ವಿವಿಧ  ಅನುಭೂತಿಗಳು !

ಸಪ್ತರ್ಷಿಗಳ ಆಜ್ಞೆಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀ ದತ್ತಗುರುಗಳ ರೂಪದಲ್ಲಿ ದರ್ಶನವನ್ನು ನೀಡಿದ ನಂತರ ಸಮಾರಂಭದಲ್ಲಿ ನಿರ್ಗುಣ ಸ್ತರದ ವಾತಾ ವರಣವಿತ್ತು. ಈ ಸಮಾರಂಭದಲ್ಲಿ ಸಾಧಕರಿಗೆ ‘ಮನಸ್ಸು ನಿರ್ವಿಚಾರ ವಾಗುವುದು, ‘ಧ್ಯಾನ ತಗುಲುವುದು ಇಂತಹ ವಿವಿಧ ಉಚ್ಚ ಮಟ್ಟದ ಆಧ್ಯಾತ್ಮಿಕ ಅನುಭೂತಿಗಳು ಬಂದವು. ಸಮಾರಂಭವು ನಡೆಯುತ್ತಿರುವಾಗ ಸಾಧಕರು ನಿರ್ಗುಣ ಸ್ತರದ ಶಾಂತಿಯನ್ನು ಅನುಭವಿಸಿದರು. ಸಪ್ತರ್ಷಿಗಳೂ ಈ ಸಮಾರಂಭವು ನಿರ್ಗುಣ ಸ್ತರದಲ್ಲಿ ಆಗಿರುವುದಾಗಿ ಹೇಳಿದರು. ಸಾಧಕರಿಗೆ ಶ್ರೀಗುರುಗಳ ದತ್ತರೂಪದ ದರ್ಶನದ ಲಾಭವು ಆಧ್ಯಾತ್ಮಿಕ ಸ್ತರದಲ್ಲಾಯಿತು. ಈ ನಿಮಿತ್ತ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೂ ‘ಆಧ್ಯಾತ್ಮಿಕ ಉನ್ನತರು ದೇವತೆಗಳ ವಸ್ತ್ರಾಲಂಕಾರಗಳನ್ನು ಧರಿಸಿದ ನಂತರ ಅವರ ದೇಹ ಮತ್ತು ವಾತಾವರಣದ ಮೇಲೆ ಯಾವ ಪರಿಣಾಮಗಳಾಗುತ್ತವೆ ?, ಎಂಬ ಬಗ್ಗೆ ವೈಜ್ಞಾನಿಕ ಉಪಕರಣ ಗಳಿಂದ ಸಂಶೋಧನೆಯನ್ನು ನಡೆಸಲು ಸಾಧ್ಯವಾಯಿತು !