ಶ್ರೀ ಕ್ಷೇತ್ರ ಬಗಂಬಿಲ ಶ್ರೀ ಸತ್ಯನಾರಾಯಣ ಮಂದಿರದ ವತಿಯಿಂದ ಧಾರ್ಮಿಕ ಕಾರ್ಯಕ್ರಮ !

ಮಂಗಳೂರು – ‘ಮನುಷ್ಯಜನ್ಮ ಇರುವುದೇ ಈಶ್ವರಪ್ರಾಪ್ತಿಗಾಗಿ’ ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವುದು ಈಗಿನ ಕಾಲದ ಅವಶ್ಯಕತೆ ಆಗಿದೆ. ಹಿಂದೂ ರಾಷ್ಟ್ರದಲ್ಲಿ ಸುನಿಯೋಜಿತ ಆದರ್ಶ ವ್ಯವಸ್ಥೆ ಇರುತ್ತದೆ. ಅದಕ್ಕೆ ಎಲ್ಲ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಕಾರ್ಯದಲ್ಲಿ ಸಹಭಾಗಿ ಆಗಬೇಕು. ‘ಸರ್ವೇ ಜನಃ ಸುಖಿನೋ ಭವಂತು’ ಹಾಗೂ ‘ವಸುಧೈವ ಕುಟುಂಬಕಂ’ ಎಂದು ಹೇಳುವ ಹಿಂದೂ ಧರ್ಮದ ಆಧಾರದಲ್ಲಿ ನಡೆಯುವ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು ಅತೀ ಅವಶ್ಯಕವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಗುರುಪ್ರಸಾದ ಗೌಡ ಇವರು ಹೇಳಿದ್ದಾರೆ. ಅವರು ಜುಲೈ ೧೦ ಶ್ರೀ ಕ್ಷೇತ್ರ ಬಗಂಬಿಲ ನಿತ್ಯಾನಂದನಗರದ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಸತ್ಯನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಶ್ರೀ. ನಾರಾಯಣ ಗಟ್ಟಿ, ಅಧ್ಯಕ್ಷರಾದ ಶ್ರೀ. ಪ್ರವೀಣ ಬಿ.ಎನ್. ಲೆಕ್ಕ ಪರಿಶೋಧಕರಾದ ಶ್ರೀ. ವೇಣುಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುನಿತಾ ನಾರಾಯಣ ಹಾಗೂ ‘ಶ್ರೀ ಗೌರಿ ಗಣೇಶ ಉತ್ಸವ ಸಮಿತಿ’ಯ ಅಧ್ಯಕ್ಷರಾದ ವಿನೋದ ಕುಲಾಲ್ ಉಪಸ್ಥಿತರಿದ್ದರು.
ಶಿಡ್ಲು ಪತ್ರಿಕೆಯ ೫೨ ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ !![]() ಬೆಂಗಳೂರು : ‘ಸ್ವಾತಂತ್ರ್ಯಯೋಧರಾದ ಲಿಂ. ಶ್ರೀ. ಜಿ.ಪಿ. ಮಹಾನುಭಾವಿಮಠ ಅವರಿಂದ ಸ್ಥಾಪಿತಗೊಂಡ ‘ಶಿಡ್ಲು’ ಪತ್ರಿಕೆಯ ೫೨ ನೇ ವಾರ್ಷಿಕೋತ್ಸವವನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿರುವ ಮಾರುತಿ ವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಾಹಿತಿಗಳಾದ ಹರಿದಾಸ ಬಿ.ಎನ್. ಇವರು ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ೨ ಹಾಗೂ ೩ ಜುಲೈ ೨೦೨೨ ರ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ‘ಏಕರೂಪ ನಾಗರಿಕ ಸಂಹಿತೆ’ (Common civil code) ವಿಷಯಗಳ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯಾ ಗೌಡ ಇವರು ಮಾತನಾಡುತ್ತಾ, ದೇಶದ ಹಿತದೃಷ್ಟಿಯಿಂದ ಸಮಾನ ನಾಗರಿಕ ಕಾಯ್ದೆಯು ಅತ್ಯಾವಶ್ಯಕವಾಗಿದೆ. ಇಂದು ಗೋವಾ ರಾಜ್ಯದಲ್ಲಿ ಸಮಾನ ನಾಗರಿಕ ಕಾಯ್ದೆಯು ಅನ್ವಯವಾದಂತೆ ದೇಶವ್ಯಾಪಿ ಅನ್ವಯ ಮಾಡಬೇಕು, ಇದರಿಂದ ಎಲ್ಲರಿಗೂ ಸಮಾನತೆ ಸಿಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಿಡ್ಲು ಪತ್ರಿಕೆ ಮುಖ್ಯ ಸಂಪಾದಕರಾದ ಶ್ರೀ. ಮಹಾನುಭಾವಿಮಠ, ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜಮೆಂಟ್ನ ನಿರ್ದೇಶಕ ಡಾ. ಮಾನಸಾ, ಮಾರುತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ, ವರದಿಗಾರರಾದ ಸೌ. ವರ್ಷಾ ಹಾಗೂ ಹಲವಾರು ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು. |

ಹಿಂದೂ ರಾಷ್ಟ್ರದ ಬುನಾದಿ ಹಾಕುತ್ತಿರುವ ಸನಾತನ ಆಶ್ರಮದಲ್ಲಿ ನಾನು ಅದ್ಭುತ ಅನುಭೂತಿಯನ್ನು ಪಡೆದೆ ! – ಶ್ರೀ ಭಗವತ ಶರಣ ಮಹಂತ ರಾಧಾಕೃಷ್ಣ ಸ್ವಾಮಿ
ಭಾರತವನ್ನು ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರ ಎಂದು ಘೋಷಿಸಿ !- Dr. Munna Kumar Sharma
ಪಾಕಿಸ್ತಾನದೊಂದಿಗೆ ಮಾತುಕತೆ ನಿಲ್ಲಿಸಬಾರದು, ವ್ಯಾಪಾರ ಮುಂದುವರಿಸಬೇಕು; ಆದರೆ ಪುಲ್ವಾಮಾದಂತಹ ದಾಳಿಯಾದರೆ, ಪ್ರತ್ಯುತ್ತರ ನೀಡಬೇಕು !
ಮಹಾರಾಷ್ಟ್ರ ಸರಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಕ್ರಮಣಕಾರಿಯಾದಂತಹ ಔರಂಗಜೇಬನ ಸಮಾಧಿಯ ಉದಾತ್ತೀಕರಣ ಮಾಡುತ್ತಿರುವುದೇಕೆ ?
ಸನಾತನದ ಆಶ್ರಮ ರಾಮನಾಥಿಯಲ್ಲಿ ಭಾವಪೂರ್ಣ ವಾತಾವರಣದಲ್ಲಿ ಶ್ರೀ ಚಂಡಿ ಹೋಮ ಸಂಪನ್ನ
‘ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯುವುದು ಸಂವಿಧಾನ ವಿರೋಧಿ!’(ಅಂತೆ)