ಶ್ರೀ. ಈಶ್ವರ ಪೂಜಾರಿ ಹಾಗೂ ಶ್ರೀ. ವಿನಯ ಪ್ರಭು ಇವರ ಸಂದರ್ಭದಲ್ಲಿ ಮನವಿ !

ಶ್ರೀ. ಈಶ್ವರ ಪೂಜಾರಿ ಇವರು ಹಿಂದೂ ಜನಜಾಗೃತಿ ಸಮಿತಿಯ ಧರ್ಮಶಿಕ್ಷಣವರ್ಗ ಅಥವಾ ಕೆಲವು ಉಪಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಅವರ ಜೊತೆಗೆ ಅವರ ಸ್ನೇಹಿತ ಶ್ರೀ. ವಿನಯ ಪ್ರಭು ಇವರು ಸಹ ಹಿಂದೂ ಜನಜಾಗೃತಿ ಸಮಿತಿಯ ಕೆಲವು ಉಪಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಇವರಿಬ್ಬರು ಸಹ ‘ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯಿಂದ ನಾವು ಹೊರಬಂದಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಅವರೇ ಹೇಳಿರುವಂತೆ ‘ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಯಾವುದೇ ಉಪಕ್ರಮಗಳ ಜೊತೆಗೆ ಇವರಿಬ್ಬರ ಸಂಬಂಧ ಇರುವುದಿಲ್ಲ’ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಇವರಿಬ್ಬರೂ ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಹೆಸರಿನಿಂದ ಯಾರನ್ನಾದರೂ ಸಂಪರ್ಕಿಸಿದರೆ, ಅದು ಅವರಿಬ್ಬರ ವೈಯಕ್ತಿಕ ಸ್ತರದಲ್ಲಿರುತ್ತದೆ. ಅದರಿಂದ ಸನಾತನ ಸಂಸ್ಥೆಯ ಅಥವಾ ಹಿಂದೂ ಜನಜಾಗೃತಿ ಸಮಿತಿಯೊಟ್ಟಿಗೆ ಯಾವುದೇ ಸಂಬಂಧ ಇರುವುದಿಲ್ಲ.