man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !

ಮನ್ ಕಿ ಬಾತ್’ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪುನರುಚ್ಚಾರ

ನವ ದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 28 ರಂದು ‘ಮನ್ ಕಿ ಬಾತ್’ ತಮ್ಮ ಮಾಸಿಕ ಕಾರ್ಯಕ್ರಮದ 135 ನೇ ಭಾಗದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡುವಾಗ ‘ಇಂಧನವನ್ನು ಉಳಿತಾಯ ಮಾಡಿ ಮತ್ತು ಕೆಲವು ಕಾಲಾವಧಿಯ ವರೆಗೆ ಚಿನ್ನದ ಖರೀದಿಯನ್ನು ಸೀಮಿತವಾಗಿಡಿ’ ಎಂಬ ಕರೆಗೆ ಪುನರುಚ್ಚಾರ ಮಾಡಿದರು. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಗರಿಕರು ನೀಡಿದ ಸಹಕಾರಕ್ಕಾಗಿ ಅವರು ದೇಶದ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದರು.

ಪ್ರಧಾನಮಂತ್ರಿಯವರು ಮಾತನ್ನು ಮುಂದುವರೆಸುತ್ತಾ, ‘‘ನಾನು ಈ ಹಿಂದೆ ನೀಡಿದ್ದ ಕರೆಗೆ ದೇಶಾದ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕ ಕುಟುಂಬಗಳು ಇಂಧನ ಉಳಿತಾಯಕ್ಕಾಗಿ ವಿವಿಧ ಮಾರ್ಗಗಳನ್ನು ಅಳವಡಿಸಿಕೊಂಡಿವೆ. ಪ್ರಯಾಣಕ್ಕಾಗಿ ಹಂಚಿಕೆ ವಾಹನಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಇಂಧನ ಉಳಿತಾಯ, ಸಂಚಾರ ದಟ್ಟಣೆ ಕಡಿಮೆಯಾಗುವುದು ಮತ್ತು ಪರಿಸರ ಸಂರಕ್ಷಣೆಗೂ ಸಹಾಯವಾಯಿತು,’’ ಎಂದು ಹೇಳಿದರು.