ಮಹಾವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳಿಗೆ ಸಂಬಂಧಿಸಿದಂತೆ ಆಗುವ ಕಾರ್ಯ !

ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯವಿಟ್ಟುಕೊಂಡು ಅಖಂಡ ಕಾರ್ಯನಿರತವಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಕು. ಮಧುರಾ ಭೋಸಲೆ

ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿಗೆ ಸಂಬಂಧಿಸಿದ ಧರ್ಮ ಮತ್ತು ಅಧ್ಯಾತ್ಮ ಇವುಗಳಿಗೆ ಸಂಬಂಧಿಸಿದ ಹೊಸ ಗ್ರಂಥಗಳ ನಿರ್ಮಿತಿಯಾಗುವುದು, ಸ್ಥಿತಿಯ ಅಂತರ್ಗತ ಭೀಕರ ಆಪತ್ಕಾಲದಲ್ಲಿ ವಿಶ್ವದ ವಿವಿಧ ಸಾತ್ತ್ವಿಕ ಜೀವಗಳ ರಕ್ಷಣೆಯಾಗಿ ಅವರಿಂದ ಕಾಲಾನುಸಾರ ಆವಶ್ಯಕವಿರುವ ವ್ಯಷ್ಟಿ ಮತ್ತು ಸಮಷ್ಟಿ ಸ್ತರದ ಧರ್ಮಾಚರಣೆ ಮತ್ತು ಸಾಧನೆ ನಡೆಯುತ್ತಿರುವುದು ಹಾಗೂ ಲಯದ ಕಾರ್ಯದ ಅಂತರ್ಗತ ಅದರಿಂದ ಪಾತಾಳ ಮತ್ತು ನರಕದ ದೊಡ್ಡ ಕೆಟ್ಟ ಶಕ್ತಿಗಳು ನಾಶವಾಗುವುದು, ಸೂಕ್ಷ್ಮ ಯುದ್ಧವಾಗಿ ದೊಡ್ಡ ಕೆಟ್ಟ ಶಕ್ತಿಗಳ ಸಂಹಾರವಾಗುವುದು ಇತ್ಯಾದಿ ಕಾರ್ಯಗಳಾಗುತ್ತಿವೆ ಮತ್ತು ಮುಂದೆಯೂ ಆಗಲಿರುವುದು. ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಪ್ರಕಾರದ ಕಾರ್ಯಗಳು ಪೃಥ್ವಿಯ ಮೇಲೆ ಸೂಕ್ಷ್ಮ ಹಾಗೂ ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಧರ್ಮಸಂಸ್ಥಾಪನೆ ಅಂದರೆ ‘ಹಿಂದೂ ರಾಷ್ಟ್ರ ಸ್ಥಾಪನೆ’ ಮಾಡುವ ಅವತಾರಿ ಕಾರ್ಯದ ಅಂತರ್ಗತ ಆಗುತ್ತಿದೆ.

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩) (ಸೂಕ್ಷ್ಮದಿಂದ ದೊರೆತ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೧.೨೦೨)