|

ಪ್ರಯಾಗರಾಜ (ಉತ್ತರಪ್ರದೇಶ) – ಈದ್ನ ನಿಮಿತ್ತ ನ್ಯಾಯನಗರ ಪಬ್ಲಿಕ್ ಸ್ಕೂಲ್, ಝೂಂಸಿ ಈ ಶಾಲೆಯು ವಿದ್ಯಾರ್ಥಿಗಳಿಗೆ ಕುರ್ತಾ, ಪಾಯಜಾಮ ಮತ್ತು ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುತ್ತಿರುವಾಗ ವಿಡಿಯೋ ಮಾಡಿ ಶಾಲೆಯ ಗುಂಪಿನಲ್ಲಿ ಪ್ರಸಾರ ಮಾಡುವ ಫತವಾ ತೆಗೆದಿತ್ತು. ಇದರೊಂದಿಗೆ ವಿದ್ಯಾರ್ಥಿನಿಯರಿಗೆ ಸಲವಾರ, ಕುರ್ತಾ, ದುಪಟ್ಟಾ ಧರಿಸಿ ಇದೇ ರೀತಿಯಲ್ಲಿ ಕೃತಿ ಮಾಡಲು ಹೇಳಲಾಗಿತ್ತು. ‘ಈ ಉಪಕ್ರಮದಲ್ಲಿ ಸಹಭಾಗಿಯಾಗುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಕೆಲವು ಅಂಕಗಳನ್ನು ನೀಡಲಾಗುವುದು, ಎಂದು ಶಾಲೆಯ ಸೂಚನಾಪತ್ರದಲ್ಲಿ ಹೇಳಲಾಗಿದೆ. ಇದರ ಮೇಲೆಯೂ ಪಾಲಕರು ಆಕ್ಷೇಪವೆತ್ತಿದ್ದಾರೆ.
प्रयागराज के एक स्कूल में असाइनमेंट के तौर पर इस्लामिक टोपी पहनने के मसले पर विवाद हो गया है.
मो. मोईन @moinallahabad की रिपोर्ट #Prayagraj #UttarPradesh #IslamicCaphttps://t.co/F3KuZ4h11L
— ABP Ganga (@AbpGanga) May 3, 2022
೧. ಈ ಪ್ರಕರಣದಲ್ಲಿ ಸಂದೀಪ ಪಾಠಕರವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಜಿಲ್ಲಾಧಿಕಾರಿ ಮತ್ತು ಪೊಲೀಸರ ಬಳಿ ದೂರನ್ನು ದಾಖಲಿಸಿದ್ದಾರೆ. ಇದನ್ನು ತಕ್ಷಣ ಪರಿಗಣಿಸಿ ಪ್ರಯಾಗರಾಜ ಪೊಲೀಸರು ಝೂಂಸಿ ಪೊಲೀಸ ಠಾಣೆಯ ನಿರೀಕ್ಷರಿಗೆ ತನಿಖೆ ನಡೆಸಿ ಆವಶ್ಯಕವಾದ ಕಾರ್ಯಾಚರಣೆಯನ್ನು ಮಾಡಲು ಸೂಚಿಸಿದ್ದಾರೆ.
೨. ಶಾಲೆಯ ಮುಖ್ಯಾಧ್ಯಾಪಕರಾದ ಬುಶರಾ ಮುಸ್ತಫಾರವರು ದಸರಾ, ದೀಪಾವಳಿ, ಸ್ವಾತಂತ್ರ್ಯದಿನ, ಗಣರಾಜ್ಯದಿನಗಳಂತಹ ಎಲ್ಲ ಹಬ್ಬಗಳ ದಿನದಂದು ಶಾಲೆಯಲ್ಲಿ ಹೆಚ್ಚುವರಿ ಉಪಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದೇ ರೀತಿಯಲ್ಲಿ ಈ ವರ್ಷದಂದು ಈದ್ನ ನಿಮಿತ್ತವಾಗಿ ಮಕ್ಕಳಿಗೆ ‘ಈದ್ ಮುಬಾರಕ’ ಎಂದು ಹೇಳುತ್ತಿರುವಾಗ ವಿಡಿಯೋ ತಯಾರಿಸಲು ಹೇಳಲಾಗಿತ್ತು. (ದಸರಾ, ದೀಪಾವಳಿಯ ದಿನದಂದು ‘ಶುಭ ದಸರಾ’ ಅಥವಾ ‘ಶುಭ ದೀಪಾವಳಿ’ ಎಂದು ಹೇಳುತ್ತ ಅಲ್ಪಸಂಖ್ಯಾತ ಸಮಾಜದಲ್ಲಿನ ವಿದ್ಯಾರ್ಥಿಗಳಿಗೆ ವಿಡಿಯೋ ತಯಾರಿಸಿ ಕಳಿಸಲು ಈ ಹಿಂದೆ ಏಕೆ ಹೇಳಲಾಗಿಲ್ಲ? ಮುಖ್ಯಾಧ್ಯಾಪಕರು ಇದರ ಉತ್ತರ ನೀಡಬೇಕು ! – ಸಂಪಾದಕರು) ಯಾವ ಪಾಲಕರಿಗೆ ಒಪ್ಪಿಗೆ ಇಲ್ಲ ಅವರು ತಮ್ಮ ಮಕ್ಕಳನ್ನು ಶಾಲೆಯಿಂದ ತೆಗೆಯಬಹುದು. (ಹಿಂದೂ ಪಾಲಕರು ತಮ್ಮ ಮಕ್ಕಳನ್ನು ಇಂತಹ ಉದ್ಧಟ ಮತಾಂಧರ ಶಾಲೆಗೆ ಏಕೆ ಕಳುಹಿಸಬೇಕು ? ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ? – ಸಂಪಾದಕರು)
| ಜಾತ್ಯಾತೀತತೆಯ ಹೆಸರಿನಡಿಯಲ್ಲಿ ಇಂತಹ ಫತವಾ ತೆಗೆಯುವ ಶಾಲೆಯು ಹಿಂದೂಗಳ ಹಬ್ಬಗಳ ಸಮಯದಲ್ಲಿ ಹಿಂದೂ ಪದ್ಧತಿಯಿಂದ ಬಟ್ಟೆಗಳನ್ನು ಧರಿಸಿ ಶುಭಾಶಯಗಳನ್ನು ನೀಡುವ ಬಗ್ಗೆ ಯಾವಾಗಲಾದರೂ ಸೂಚಿಸಿದೆಯೇ ? |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath