ನ್ಯಾಯಾಲಯದ ಆದೇಶವನ್ನು ನಿರಾಕರಿಸಿ ‘ಅಂಜುಮನ ಇಂತಜಾಮಿಯಾ ಮಸ್ಜೀದ ಕಮಿಟಿ’ಯ ಎಚ್ಚರಿಕೆ !

ವಾರಾಣಸಿ (ಉತ್ತರಪ್ರದೇಶ) – ವಾರಾಣಸಿಯ ದಿವಾನಿ ನ್ಯಾಯಾಲಯದಿಂದ ಮೇ ೩ ರಿಂದ ೧೦ ರವರೆಗೆ ಕಾಶೀ ವಿಶ್ವನಾಥ ದೇವಸ್ಥಾನ, ಜ್ಞಾನವಾಪಿ ಮಸೀದಿ, ಶೃಂಗಾರಗೌರಿ ದೇವಸ್ಥಾನ ಹಾಗೂ ಅಲ್ಲಿನ ಇತರ ಪರಿಸರದಲ್ಲಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಆದೇಶ ನೀಡಲಾಗಿದೆ. ನ್ಯಾಯಾಲಯವು ಮಸೀದಿಯ ಒಳಗಿನ ಭಾಗದ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಹೇಳಿದೆ; ಆದರೆ ಅದನ್ನು ‘ಅಂಜುಮನ ಇಂತಜಾಮಿಯಾ ಮಸ್ಜೀದ ಕಮಿಟಿ’ಯು ವಿರೋಧಿಸಿದೆ.
ಜಿಲ್ಲಾಡಳಿತ ಹಾಗೂ ವಾರಾಣಸಿ ಪೊಲೀಸ ಆಯುಕ್ತರು ಈ ಹಿಂದೆ ನ್ಯಾಯಾಲಯದ ಬಳಿ ಸುರಕ್ಷೆ ಹಾಗೂ ಶಾಂತಿಯ ಕಾರಣದಿಂದಾಗಿ ಸಮೀಕ್ಷೆ ಹಾಗೂ ಚಿತ್ರೀಕರಣವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿತ್ತು.
काशी विश्वनाथ मंदिर और ज्ञानवापी मस्जिद परिसर में स्थित मां श्रृंगार गौरी मंदिर समेत अन्य विग्रहों और स्थानों की वीडियोग्राफी पर थम नहीं रहा विवाद | @RoshanAajTak https://t.co/XL4ctCOQcy
— AajTak (@aajtak) April 28, 2022
ನಾವು ನ್ಯಾಯಾಲಯದ ಅವಮಾನದ ಪರಿಣಾಮವನ್ನು ಅನುಭವಿಸಲು ಸಿದ್ಧರಿದ್ದೇವೆ !
ಈ ಸಂದರ್ಭದಲ್ಲಿ ಖಟ್ಲೆಯಲ್ಲಿ ಮುಸಲ್ಮಾನ ಪಕ್ಷದವರಾದ ಅಂಜುಮನ ಇಂತಜಾಮಿಯಾ ಮಸ್ಜೀದ ಕಮಿಟಿಯ ಸಹಸಚಿವರಾದ ಸಯ್ಯದ ಮಹಮ್ಮದ ಯಾಸಿನರವರು ‘ಯಾವುದೇ ಪರಿಸ್ಥಿತಿಯಲ್ಲಿಯೂ ನ್ಯಾಯಾಲಯದ ಆಯುಕ್ತರ ಸಮೀಕ್ಷೆ ಹಾಗೂ ಚಿತ್ರೀಕರಣವನ್ನು ವಿರೋಧಿಸಲಾಗುವುದು. ಜ್ಞಾನವಾಪೀ ಮಸೀದಿಯ ಒಳಗೆ ಯಾರಿಗೂ ಹೋಗಲು ಬಿಡುವುದಿಲ್ಲ. ನಾವು ಅದನ್ನು ವಿರೋಧಿಸುವೆವು. ನ್ಯಾಯಾಲಯದ ಅವಮಾನವಾದರೂ ಕೂಡ ನಾವು ಅದರ ಪರಿಣಾಮವನ್ನು ಭೋಗಿಸಲು ಸಿದ್ಧರಿದ್ದೇವೆ; ಆದರೆ ಮಸೀದಿಯ ಒಳಗೆ ಹೋಗಲು ಬಿಡುವುದಿಲ್ಲ. ಈ ಎಲ್ಲಾ ಪ್ರಕರಣವು ಶೃಂಗಾರಗೌರಿ ದೇವಸ್ಥಾನದ್ದಾಗಿದೆ; ಆದರೆ ಹಿಂದೂಗಳಿಂದ ಅದರಲ್ಲಿ ಜ್ಞಾನವಾಪೀ ಮಸೀದಿಯ ಸೇರ್ಪಡೆಯ ಪ್ರಯತ್ನವಾಗುತ್ತಿದೆ. ಆದ್ದರಿಂದಲೇ ಆಯುಕ್ತರಿಗೆ ೨ ಬಾರಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಸಾಧ್ಯವಾಗಲಿಲ್ಲ. ಸಮೀಕ್ಷೆ ಹಾಗೂ ಚಿತ್ರೀಕರಣದ ಎಲ್ಲಾ ಪ್ರಯತ್ನಗಳು ಕೇವಲ ಧಾರ್ಮಿಕ ದ್ವೇಷ ಹಾಗೂ ರಾಜಕೀಯ ಕಾರಣಗಳಿಂದಲೇ ನಡೆಯುತ್ತಿವೆ’ ಎಂದು ಹೇಳಿದರು.
ಸಂಪಾದಕೀಯ ನಿಲುವುನ್ಯಾಯಾಲಯದ ಆದೇಶಕ್ಕೆ ಬಗ್ಗದವರ ಮೇಲೆ ಕ್ರಮಕೈಗೊಳ್ಳುವಂತೆ ಈಗ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಬೇಕು ! ಇದರಿಂದ ಭಾರತದಲ್ಲಿನ ಇಸ್ಲಾಮಿ ಸಂಸ್ಥೆಗಳು ಎಷ್ಟು ಉದ್ಧಟವಾಗಿವೆ, ಎಂಬುದು ನಮ್ಮ ಗಮನಕ್ಕೆ ಬರುತ್ತದೆ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation