|

ಸೋನಭದ್ರ (ಉತ್ತರಪ್ರದೇಶ) – ಭಾರತದ ಎಲ್ಲ ನ್ಯಾಯಾಲಯಗಳಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಹಾಗೂ ಕಣ್ಣಿನ ಮೇಲೆ ಕಪ್ಪುಪಟ್ಟಿ ಕಟ್ಟಿರುವ ಮಹಿಳೆಯ ಮೂರ್ತಿ ಇರುತ್ತದೆ. ಈ ಮೂರ್ತಿ ಗ್ರೀಕ್ ಸಮಾಜ ಸೇವಕಿ ಡಿಕಿ ಇವರದ್ದಾಗಿದೆ. ಈ ಮೂರ್ತಿ ತೆರವುಗೊಳಿಸಿ ಆ ಸ್ಥಾನದಲ್ಲಿ ಹಿಂದೂಗಳ ದೇವತೆ ಭಗವಾನ್ ಚಿತ್ರಗುಪ್ತ ಇವರ ಮೂರ್ತಿ ಸ್ಥಾಪಿಸಬೇಕು, ಎಂಬ ಬೇಡಿಕೆಯನ್ನು ಉತ್ತರ ಪ್ರದೇಶದ ಜಂಟಿ ವಕೀಲರ ಒಕ್ಕೂಟ ದ ಪ್ರದೇಶಾಧ್ಯಕ್ಷ ರಾಕೇಶ ಶರಣ ಮಿಶ್ರಾ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರದ ತಲಾ ಒಂದು ಪ್ರತಿಯನ್ನು ರಶ್ಟ್ರಪತಿ, ಉಪರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು ಮುಂತಾದವರಿಗೆ ಕಳುಹಿಸಲಾಗಿದೆ.
ಈ ಪತ್ರದಲ್ಲಿ ಮಿಶ್ರಾ ಅವರು, ಡಿಕಿ ಹಾಗೂ ಭಾರತೀಯ ಸಂಸ್ಕೃತಿಗೆ ಯಾವುದೇ ಸಂಬಂಧವಿಲ್ಲ. ಈ ಮೂರ್ತಿ ಕೇವಲ ಬ್ರಿಟಿಷರ ಗುಲಾಮಗಿರಿಯ ಪ್ರತೀಕವಾಗಿ ಅದು ನೋಡಿದರೆ ಸತತ ಅದರ ಅರಿವಾಗುತ್ತದೆ.
ಭಾರತೀಯ ಹಿಂದೂ ಧರ್ಮದ ಪ್ರಕಾರ ಮತ್ತು ಶಾಸ್ತ್ರಗಳಲ್ಲಿ ಬರೆದಿರುವ ಪ್ರಕಾರ ಭಗವಾನ್ ಚಿತ್ರಗುಪ್ತ ಪರಮ ನ್ಯಾಯಾಧೀಶರಾಗಿದ್ದಾರೆ. ಆದ್ದರಿಂದ ಡಿಕಿಯ ಮೂರ್ತಿ ತೆರವುಗೊಳಿಸಿ ಅದರ ಜಾಗದಲ್ಲಿ ಚಿತ್ರಗುಪ್ತರ ಮೂರ್ತಿ ಸ್ಥಾಪಿಸಬೇಕು.
ಸಂಪಾದಕೀಯ ನಿಲುವುಈ ರೀತಿಯ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರ ತಾನಾಗಿ ಈ ರೀತಿ ವಿಚಾರ ಮಾಡಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಬೇಕು ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation