ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ಕಾಲಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ; ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು.

೧. ಉದಕುಂಭ (ಉದಕಕುಂಭದ) ದಾನ

ಈ ದಿನ ದೇವರು ಮತ್ತು ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಉದಕಕುಂಭದ ದಾನ ಮಾಡಬೇಕು.

೨. ಮಹತ್ವ

ಉದಕಕುಂಭವನ್ನೇ ಸರ್ವಸಮಾವೇಶಕ ಸ್ತರದ ‘ನಿರ್ಗುಣ ಪಾತ್ರ’ ಎಂದು ಸಂಬೋಧಿಸಲಾಗುತ್ತದೆ.

೩. ಉದ್ದೇಶ

ಅ. ಉದಕಕುಂಭದ ದಾನ ಮಾಡುವುದು, ಅಂದರೆ ತನ್ನ ಎಲ್ಲ ರೀತಿಯ ದೇಹಸದೃಶ್ಯ, ಹಾಗೆಯೇ ಕರ್ಮಸದೃಶ್ಯ ವಾಸನೆಗಳ ಸ್ಥೂಲ ಹಾಗೂ ಸೂಕ್ಷ್ಮ ಲಹರಿಗಳು ಕುಂಭದಲ್ಲಿನ ಜಲವನ್ನು ಪವಿತ್ರವೆಂದು ತಿಳಿದು ಅದರಲ್ಲಿ ವಿಸರ್ಜನೆ ಮಾಡುವುದು ಮತ್ತು ಈ ರೀತಿ ತನ್ನ ದೇಹ ಆಸಕ್ತಿರಹಿತ ಕರ್ಮದಿಂದ ಶುದ್ಧಗೊಳಿಸಿ ಬಳಿಕ ಉದಕಕುಂಭಯೋಗದಿಂದ ಈ ಸಕಲ ವಾಸನೆಗಳನ್ನು ಪಿತೃಗಳು ಮತ್ತು ದೇವರ ಚರಣಗಳಿಗೆ ಬ್ರಾಹ್ಮಣನೆಂದು ಗ್ರಹಿಸಿ ಅರ್ಪಣೆ ಮಾಡಬೇಕು.

ಆ. ಪಿತೃಗಳ ಚರಣಗಳಲ್ಲಿ ಉದಕಕುಂಭವನ್ನು ದಾನ ಮಾಡುವುದರಿಂದ ಪಿತರರು ಮಾನವಯೋನಿಗೆ ಸಂಬಂಧಪಟ್ಟಿದ್ದರಿಂದ ಅವರು ನಮ್ಮ ಸ್ಥೂಲ ವಾಸನೆಗಳನ್ನು ನಾಶಗೊಳಿಸುತ್ತಾರೆ.

ಇ. ದೇವರ ಕೃಪಾಶೀರ್ವಾದವು ನಮ್ಮ ಪ್ರಾರಬ್ಧಜನ್ಯ ಸೂಕ್ಷ್ಮ ಕರ್ಮದಲ್ಲಿನ ಪಾಪವನ್ನು ನಾಶಗೊಳಿಸುತ್ತಿರುವುದರಿಂದ ಸೂಕ್ಷ್ಮ ಕರ್ಮಜನ್ಯ ವಾಸನೆಗಳನ್ನು ದೇವರ ಚರಣಗಳಲ್ಲಿ ಈ ದಾನದ ಮೂಲಕ ಅರ್ಪಣೆ ಮಾಡಲಾಗುತ್ತದೆ.

೪. ಉದಕಕುಂಭ ದಾನದ ಮಂತ್ರ

ಬ್ರಾಹ್ಮಣನಿಗೆ ಉದಕಕುಂಭದ ದಾನ ಕೊಡುವಾಗ ಮುಂದಿನ ಮಂತ್ರ ಹೇಳಬೇಕು.

ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |

ಅಸ್ಯ ಪ್ರದಾನಾತ್ ತೃಪ್ಯನ್ತು ಪಿತರೋಽಪಿ ಪಿತಾಮಹಾಃ |೧|

ಗನ್ಧೋದಕತಿಲೈರ್ಮಿಶ್ರಂ ಸಾನ್ನಂ ಕುಮ್ಭಂ ಫಲಾನ್ವಿತಮ್ |

ಪಿತೃಭ್ಯಃ ಸಮ್ಪ್ರದಾಸ್ಯಾಮಿ ಅಕ್ಷಯ್ಯಮುಪತಿಷ್ಠತು ||  – ಧರ್ಮಸಿನ್ಧು

ಅರ್ಥ : ಯಾವುದರಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವ ಇವರು ಸಮಾವೇಶಗೊಂಡಿರುವರೊ ಅಂತಹ ಈ ಧರ್ಮಘಟವನ್ನು ನಾನು ಬ್ರಾಹ್ಮಣನಿಗೆ ದಾನ ಮಾಡಿದ್ದೇನೆ. ಈ ದಾನದಿಂದಾಗಿ ನನ್ನ ಪಿತೃಗಳು ಮತ್ತು ದೇವತೆಗಳು ತೃಪ್ತರಾಗಲಿ. ಗಂಧ, ಉದಕ, ಎಳ್ಳು, ಯವ ಮತ್ತು ಫಲ ಇವುಗಳಿಂದ ಕೂಡಿದಂತಹ ಈ ಕುಂಭವನ್ನು ನಾನು ಪಿತೃಗಳಿಗೆ ಕೊಡುತ್ತಿದ್ದೇನೆ. ಈ ಕುಂಭವು ನನಗಾಗಿ ಸದಾ ಅಕ್ಷಯ (ಕ್ಷೀಣವಾಗದಂತಹ) ವಾಗಿರಲಿ.

೫. ಶಾಸ್ತ್ರ

ಅಕ್ಷಯ ತದಿಗೆಯ ದಿನದಂದು ಬ್ರಹ್ಮಾಂಡದಲ್ಲಿ ಅಖಂಡವಾದ, ಹಾಗೆಯೇ ಒಂದೇ ಸಮನಾದ ಗತಿಯುಳ್ಳದ್ದನ್ನು ತೋರಿಸುವ ಸತ್ತ್ವ-ರಜ ಲಹರಿಗಳ ಪ್ರಭಾವ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಈ ಲಹರಿಗಳ ಪ್ರವಾಹದ ಮೂಲಕ ಪಿತೃಗಳು ಮತ್ತು ದೇವತೆಗಳನ್ನು ಉದ್ದೇಶಿಸಿ ಬ್ರಾಹ್ಮಣನಿಗೆ ಮಾಡಿದ ದಾನವು ಪುಣ್ಯಪ್ರದ ಮತ್ತು ಹಿಂದಿನ ಜನ್ಮದ ಕೊಡುಕೊಳ್ಳುವ ಲೆಕ್ಕಕ್ಕನುಸಾರ ಕರ್ಮ-ಅಕರ್ಮವನ್ನುಂಟು ಮಾಡುವಂತಹದು ಆಗುತ್ತಿರುವುದರಿಂದ ಇದು ಯಾವತ್ತೂ ಕ್ಷಯಗೊಳ್ಳದ ಲಹರಿಗಳ ಪ್ರಭಾವದ ಸಹಾಯದಿಂದ ಮಾಡಿದ ದಾನವಾಗಿದ್ದರಿಂದ ಶ್ರೇಷ್ಠವಾಗಿರುತ್ತದೆ.

೬. ಪೂರ್ವಜರು

೬ ಅ. ಮಹತ್ವ : ಅಕ್ಷಯ ತದಿಗೆಯಂದು ಪೂರ್ವಜರು ಪೃಥ್ವಿಯ ಸಮೀಪಕ್ಕೆ ಬರುವುದರಿಂದ ಮಾನವನಿಗೆ ಅಧಿಕ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಮಾನವನು ತನ್ನ ಮೇಲಿರುವ ಪೂರ್ವಜರ ಋಣ ತೀರಿಸಲು ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ಇದಕ್ಕಾಗಿ ಅಕ್ಷಯ ತದಿಗೆಯಂದು ಪೂರ್ವಜರಿಗೆ ಗತಿ ದೊರಕಬೇಕೆಂದು ಎಳ್ಳುತರ್ಪಣೆ ಮಾಡಬೇಕು.

೬ ಆ. ಪದ್ಧತಿ : ಪೂರ್ವಜರಿಗೆ ಎಳ್ಳು ಅರ್ಪಣೆ ಮಾಡುವ ಮೊದಲು ಎಳ್ಳಿನಲ್ಲಿ ಶ್ರೀವಿಷ್ಣು ಮತ್ತು ಬ್ರಹ್ಮ ಇವರ ತತ್ತ್ವ ಬರಲು ದೇವರಿಗೆ ಪ್ರಾರ್ಥನೆ ಮಾಡಬೇಕು. ಅನಂತರ ಪೂರ್ವಜರು ಸೂಕ್ಷ್ಮದಲ್ಲಿ ಬಂದಿರುತ್ತಾರೆ ಮತ್ತು ನಾವು ಅವರ ಚರಣಗಳಲ್ಲಿ ಎಳ್ಳು ಮತ್ತು ಜಲ ಅರ್ಪಣೆ ಮಾಡುತ್ತಿದ್ದೇವೆ, ಎಂಬ ಭಾವ ಇಡಬೇಕು. ಎರಡು ನಿಮಿಷಗಳ ನಂತರ ದೇವತೆಗಳ ತತ್ತ್ವದಿಂದ ಭರಿತವಾಗಿದ್ದ ಎಳ್ಳು ಮತ್ತು ಅಕ್ಷತೆಯನ್ನು ಪೂರ್ವಜರಿಗೆ ಅರ್ಪಣೆ ಮಾಡಬೇಕು. ಸಾತ್ತ್ವಿಕವಾಗಿರುವ ಎಳ್ಳು ಕೈಯಲ್ಲಿ ತೆಗೆದುಕೊಂಡು ಅದರ ಮೇಲೆ ತಟ್ಟೆಯಲ್ಲಿ ನಿಧಾನವಾಗಿ ನೀರು ಬಿಡಬೇಕು. ಆಗ ದತ್ತ ಅಥವಾ ಬ್ರಹ್ಮ ಅಥವಾ ವಿಷ್ಣು ಇವರಿಗೆ ಪೂರ್ವಜರಿಗೆ ಗತಿ ನೀಡಲು ಪ್ರಾರ್ಥನೆ ಮಾಡಬೇಕು.

೬ ಇ. ಪರಿಣಾಮ : ಎಳ್ಳಿನಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸಿ ರಜ-ತಮ ನಾಶಗೊಳಿಸುವ ಕ್ಷಮತೆ ಅಧಿಕವಿದೆ.

ಸಾಧಕನ ಭಾವಕ್ಕನುಸಾರ ಎಳ್ಳುತರ್ಪಣೆ ಮಾಡುವಾಗ ಸೂಕ್ಷ್ಮವಾಗಿ ತಟ್ಟೆಯಲ್ಲಿ ಬಂದಿರುವ ಪೂರ್ವಜರ ಪ್ರತಿಕಾತ್ಮಕ ಸೂಕ್ಷ್ಮ-ದೇಹದ ಮೇಲಿನ ಕಪ್ಪು ಶಕ್ತಿಯ ಆವರಣವು ದೂರವಾಗಿ ಅವರ ಸೂಕ್ಷ್ಮ-ದೇಹದಲ್ಲಿನ ಸಾತ್ತ್ವಿಕತೆ ಹೆಚ್ಚಾಗುತ್ತದೆ ಮತ್ತು ಅವರಿಗೆ ಮುಂದಿನ ಲೋಕಕ್ಕೆ ಹೋಗಲು ಆವಶ್ಯಕ ಶಕ್ತಿ ದೊರಕುತ್ತದೆ.

– ಓರ್ವ ವಿದ್ವಾಂಸರು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಓರ್ವ ವಿದ್ವಾಂಸ’ ಎಂಬ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ.) (೧೦.೪.೨೦೦೯)

ಎಳ್ಳು ತರ್ಪಣೆ ಮಾಡುವುದರ ಪದ್ಧತಿ ಹಾಗೂ ಪರಿಣಾಮ

೧. ಅರ್ಥ ಮತ್ತು ಭಾವಾರ್ಥ

ಅ. ಎಳ್ಳುತರ್ಪಣೆ ಅಂದರೆ ದೇವತೆ ಮತ್ತು ಪೂರ್ವಜರಿಗೆ ಎಳ್ಳು ಮತ್ತು ಜಲ ಅರ್ಪಣೆ ಮಾಡುವುದು. ಎಳ್ಳು ಇದು ಸಾತ್ತ್ವಿಕತೆಯ ಪ್ರತೀಕವಾಗಿದ್ದರೆ ಜಲವು ಶುದ್ಧ ಭಾವದ ಪ್ರತೀಕವಾಗಿದೆ.

ಆ. ದೇವರಲ್ಲಿ ಎಲ್ಲವೂ ಇದೆ. ಆದುದರಿಂದ ನಾವು ಅವನಿಗೆ ಏನು ಅರ್ಪಣೆ ಮಾಡಬಹುದು ? ಹಾಗೆಯೇ ‘ನಾನು ದೇವರಿಗೆ ಏನಾದರೂ ಅರ್ಪಣೆ ಮಾಡುತ್ತೇನೆ’, ಎಂಬ ಅಹಂ ಸಹ ಬೇಡ. ಇದಕ್ಕಾಗಿ ಎಳ್ಳು ಅರ್ಪಣೆ ಮಾಡುವಾಗ ‘ದೇವರೆ ನನ್ನಿಂದ ಎಲ್ಲವನ್ನೂ ಮಾಡಿಸಿಕೊಳ್ಳುತ್ತಿದ್ದಾನೆ’, ಎಂಬ ಭಾವ ಇಡಬೇಕು. ಇದರಿಂದ ಎಳ್ಳುತರ್ಪಣೆ ಮಾಡುವಾಗ ಸಾಧಕನಲ್ಲಿ ಅಹಂ ಹೆಚ್ಚಾಗದೇ ಭಾವ ವೃದ್ಧಿಯಾಗಲು ಸಹಾಯವಾಗುತ್ತದೆ. ಎಳ್ಳು ತರ್ಪಣೆ ಮಾಡುವುದು ಅಂದರೆ ದೇವರಿಗೆ ಎಳ್ಳಿನ ರೂಪದಲ್ಲಿ ಕೃತಜ್ಞತೆಯ ಮತ್ತು ಶರಣಾಗತಿಯ ಭಾವ ಅರ್ಪಣೆ ಮಾಡುವುದು ಎಂದರ್ಥ.

೨. ಎಳ್ಳುತರ್ಪಣೆ ಯಾರಿಗೆ ಮಾಡಬೇಕು ?

೨ ಅ. ದೇವತೆ

೨ ಅ ೧. ಪದ್ಧತಿ : ಮೊದಲಿಗೆ ದೇವತೆಯನ್ನು ಆವಾಹನೆ ಮಾಡಬೇಕು. ತಾಮ್ರದ ಅಥವಾ ಯಾವುದೇ ಸಾತ್ತ್ವಿಕ ಧಾತುವಿನ ತಟ್ಟೆ ತೆಗೆದುಕೊಳ್ಳಬೇಕು. ಬ್ರಹ್ಮ ಅಥವಾ ಶ್ರೀವಿಷ್ಣು ಇವರ ಅಥವಾ ಅವರ ಒಟ್ಟಿಗಿನ ರೂಪದ, ಅಂದರೆ ದತ್ತಾತ್ರೇಯನ ಸ್ಮರಣೆ ಮಾಡಿ ಅವರಿಗೆ ತಟ್ಟೆಯಲ್ಲಿ ಬರಲು ಆವಾಹನೆ ಮಾಡಬೇಕು. ಅನಂತರ ದೇವತೆಗಳು ಸೂಕ್ಷ್ಮದಲ್ಲಿ ಅಲ್ಲಿ ಬಂದಿರುತ್ತಾರೆ, ಎಂಬ ಭಾವ ಇಡಬೇಕು. ಆ ಬಳಿಕ ಅವರ ಚರಣಗಳಲ್ಲಿ ಎಳ್ಳು ಅರ್ಪಣೆ ಮಾಡುತ್ತಿದ್ದೇವೆ, ಎಂಬ ಭಾವ ಇಡಬೇಕು.

೨ ಅ ೨. ಪರಿಣಾಮ : ಪ್ರಥಮ (ಸೂಕ್ಷ್ಮದಲ್ಲಿ ಬಂದಿರುವ ದೇವತೆಗಳ ಚರಣಗಳಲ್ಲಿ) ಎಳ್ಳು ಅರ್ಪಣೆ ಮಾಡಿದ್ದರಿಂದ ಎಳ್ಳಿನಲ್ಲಿ ದೇವತೆಗಳಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕತೆಯು ಅಧಿಕ ಪ್ರಮಾಣದಲ್ಲಿ ಗ್ರಹಿಸಲಾಗುತ್ತದೆ ಮತ್ತು ಜಲ ಅರ್ಪಣೆ ಮಾಡಿದ ನಂತರ ಅರ್ಪಣೆ ಮಾಡುವವರ ಭಾವ ಜಾಗೃತವಾಗುತ್ತದೆ. ಭಾವ ಜಾಗೃತಿಯಾಗಿದ್ದರಿಂದ ದೇವತೆಗಳಿಂದ ಎಳ್ಳಿನಲ್ಲಿ ಸೆಳೆಯಲ್ಪಟ್ಟ ಸಾತ್ತ್ವಿಕತೆ ಎಳ್ಳುತರ್ಪಣೆ ಮಾಡುವವರಿಗೆ ಅಧಿಕ ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ.