
ಮಂಗಳೂರು – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ೨ ದಿನಗಳ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಶಾಲೆ ಸಂಪನ್ನವಾಯಿತು. ಮಂಗಳೂರು ಮತ್ತು ಉಡುಪಿಯಲ್ಲಿ ಸನಾತನ ಸಂಸ್ಥೆಯ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಮಂಜುಳಾ ಗೌಡ ಇವರು ಮಾರ್ಗದರ್ಶನ ಮಾಡಿದರೆ ಹಾಗೂ ಶಿವಮೊಗ್ಗದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಇವರು ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಅದೇ ರೀತಿ ಮಂಗಳೂರು ಮತ್ತು ಉಡುಪಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಗುರುಪ್ರಸಾದ ಗೌಡ ಹಾಗೂ ಶಿವಮೊಗ್ಗದಲ್ಲಿ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿಜಯ ರೇವಣಕರ ಇವರು ಹಿಂದೂ ರಾಷ್ಟ್ರದ ಆವಶ್ಯಕತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಉಪಸ್ಥಿತ ಧರ್ಮಪ್ರೇಮಿಗಳು ಕಾರ್ಯಶಾಲೆಯಲ್ಲಿ ಉತ್ತಮವಾಗಿ ಸ್ಪಂದಿಸಿದರು,
ಶಿಬಿರಾರ್ಥಿಗಳ ಮನೋಗತ
೧. ಶಿಬಿರದ ಹಿಂದಿನ ದಿನ ಶಾರೀರಿಕ ಅಡಚಣೆ ಇತ್ತು. ಆದರೆ ಯಾವುದೇ ವೈದ್ಯರ ಸಹಾಯವಿಲ್ಲದೆ ಶಿಬಿರದ ಮಾಧ್ಯಮದಿಂದ ನಾನು ಗುಣಮುಖವಾಗಲು ಸಾಧ್ಯವಾಯಿತು. – ಸೌ. ಉಷಾ ರಾಜೇಶ, ಶಿಕಾರಿಪುರ
೨. ಶಿಬಿರದ ಚೈತನ್ಯದಿಂದ ಮನಸ್ಸು ಹಾಗೂ ಬುದ್ಧಿಯ ಶುದ್ಧೀಕರಣವಾಗಿ ಶಾಂತವೆನಿಸಿತು. – ಶ್ರೀ. ಧನುಷ್, ಮಂಗಳೂರು
ಹಿಂದೂ ರಾಷ್ಟ್ರದ ಬುನಾದಿ ಹಾಕುತ್ತಿರುವ ಸನಾತನ ಆಶ್ರಮದಲ್ಲಿ ನಾನು ಅದ್ಭುತ ಅನುಭೂತಿಯನ್ನು ಪಡೆದೆ ! – ಶ್ರೀ ಭಗವತ ಶರಣ ಮಹಂತ ರಾಧಾಕೃಷ್ಣ ಸ್ವಾಮಿ
ಭಾರತವನ್ನು ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರ ಎಂದು ಘೋಷಿಸಿ !- Dr. Munna Kumar Sharma
ಪಾಕಿಸ್ತಾನದೊಂದಿಗೆ ಮಾತುಕತೆ ನಿಲ್ಲಿಸಬಾರದು, ವ್ಯಾಪಾರ ಮುಂದುವರಿಸಬೇಕು; ಆದರೆ ಪುಲ್ವಾಮಾದಂತಹ ದಾಳಿಯಾದರೆ, ಪ್ರತ್ಯುತ್ತರ ನೀಡಬೇಕು !
ಮಹಾರಾಷ್ಟ್ರ ಸರಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಕ್ರಮಣಕಾರಿಯಾದಂತಹ ಔರಂಗಜೇಬನ ಸಮಾಧಿಯ ಉದಾತ್ತೀಕರಣ ಮಾಡುತ್ತಿರುವುದೇಕೆ ?
ಸನಾತನದ ಆಶ್ರಮ ರಾಮನಾಥಿಯಲ್ಲಿ ಭಾವಪೂರ್ಣ ವಾತಾವರಣದಲ್ಲಿ ಶ್ರೀ ಚಂಡಿ ಹೋಮ ಸಂಪನ್ನ
‘ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯುವುದು ಸಂವಿಧಾನ ವಿರೋಧಿ!’(ಅಂತೆ)