ದೆಹಲಿಯ ಜಹಾಂಗೀರಪುರಿಯಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ದೊಡ್ಡ ಕಾರ್ಯಾಚರಣೆ

  • ಹನುಮಾನ ಜಯಂತಿಯಂದು ಮೆರವಣಿಗೆಯ ಮೇಲೆ ದಾಳಿ ನಡೆಸಿದ ಪ್ರಕರಣ

  • ಸರ್ವೋಚ್ಚ ನ್ಯಾಯಾಲಯದಿಂದ ಕಾರ್ಯಾಚರಣೆಗೆ ಸ್ಥಗಿತ

ದೆಹಲಿ – ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಹುಳ ಭಾಗದಲ್ಲಿರುವ ಮಸೀದಿಯಿಂದ ಕಲ್ಲುತೂರಾಟ ನಡೆಸಿದ ಬಳಿಕ ಆದ ಹಿಂಸಾಚಾರದಲ್ಲಿ ಅನೇಕ ಪೊಲೀಸ ಸಿಬ್ಬಂದಿಗಳು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ೨೫ ಜನರನ್ನು ಬಂಧಿಸಲಾಗಿದ್ದು ಅವರ ಪೈಕಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರ ಸಮಾವೇಶವಿದೆ. ಈಗ ದೆಹಲಿ ಮಹಾನಗರ ಪಾಲಿಕೆಯು ಈ ಗಲಭೆ ಪೀಡಿತ ಪ್ರದೇಶದಲ್ಲಿರುವ ಅನಧಿಕೃತ ಕಟ್ಟಡಗಳ ಮೇಲೆ ಕಾರ್ಯಾಚರಣೆ ಪ್ರಾರಂಭಿಸಿದೆ. ೨ ದಿನಗಳವರೆಗೂ ಈ ಕಾರ್ಯಾಚರಣೆ ನಡೆಯುವುದಿತ್ತು; ಆದರೆ ಅದರ ವಿರುದ್ಧ ‘ಜಮೀಯತ-ಎ-ಹಿಂದ’ ಎಂಬ ಸಂಘಟನೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಏಪ್ರಿಲ ೨೧ ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ನ್ಯಾಯಾಲಯವು ಆದೇಶ ನೀಡದ ಬಳಿಕವೇ ಅಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಈ ಕುರಿತು ಪಾಲಿಕೆಯ ಆಯುಕ್ತರು, ‘ನಮಗೆ ನ್ಯಾಯಾಲಯದ ಆದೇಶದ ಪ್ರತಿ ಇನ್ನೂ ಸಿಕ್ಕಿಲ್ಲ, ಅಲ್ಲಿಯವರೆಗೂ ಈ ಕಾರ್ಯಾಚರಣೆ ನಡೆಯಲಿದೆ. ಅನಂತರ ಅವರಿಗೆ ನ್ಯಾಯಾಲಯದ ಆದೇಶ ಸಿಕ್ಕಿದ ಬಳಿಕ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.

೧. ದೆಹಲಿಯ ಭಾಜಪದ ಪ್ರದೇಶಾಧ್ಯಕ್ಷ ಆದೇಶ ಗುಪ್ತಾರವರು ಗಲಭೆಯ ಆರೋಪಿಗಳು ಜಹಾಂಗೀರಪುರಿಯಲ್ಲಿ ಹಲವು ಅಕ್ರಮ ಕಟ್ಟಡಗಳನ್ನು ನಿರ್ಮಾವಾಗಿರುವ ಬಗ್ಗೆ ಹೇಳಿ ಅದರ ಮೇಲೆ ಕಾರ್ಯಾಚರಣೆ ನಡೆಸಬೇಕೆಂದು ಬೇಡಿಕೆ ಮಾಡಿದ್ದರು. ಅನಂತರ ಪಾಲಿಕೆಯು ಅನಧಿಕೃತ ಕಟ್ಟಡಗಳ ಮೇಲೆ ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿತ್ತು. (ಅಲ್ಲಿ ಅನಧಿಕೃತ ಕಟ್ಟಡ ಕಟ್ಟುವವರೆಗೂ ಪಾಲಿಕೆಯವರು ಮಲಗಿದ್ದರೇ ? ಹಾಗೂ ಗುಪ್ತಾರವರು ಹೇಳಿದ ಬಳಿಕ ಪಾಲಿಕೆಗೆ ಎಚ್ಚರವಾಯಿತೇ ? ಪಾಲಿಕೆಯ ಕಾರ್ಯಕ್ಷೇತ್ರದಲ್ಲಿ ಇನ್ನೂ ಇಂತಹ ಎಷ್ಟು ಅನಧಿಕೃತ ಕಟ್ಟಡಗಳಿವೆ ಎಂಬುದು ಪಾಲಿಕೆಗೆ ಗೊತ್ತಿಲ್ಲ ? ಪಾಲಿಕೆಯು ಅದರ ಪಟ್ಟಿಯನ್ನು ಜನತೆಗೆ ನೀಡಬೇಕು ! – ಸಂಪಾದಕರು)

೨. ಕಾಂಗ್ರೆಸ ಮುಖಂಡ ರಾಹುಲ ಗಾಂಧಿ ಹಾಗೂ ಎಮ್.ಐ.ಎಮ್.ನ ಪ್ರಮುಖ ಅಸದುದ್ದೀನ ಒವೈಸಿಯವರು ಪಾಲಿಕೆಯ ಕಾರ್ಯಾಚರಣೆಯ ಮೇಲೆ ತೀವ್ರವಾದ ಆಕ್ಷೇಪ ತೆಗೆದುಕೊಂಡಿದ್ದಾರೆ. (ಅನಧಿಕೃತ ಕಟ್ಟಡಗಳ ಮೇಲೆ ಆಕ್ಷೇಪ ತೆಗೆದುಕೊಳ್ಳುವವರು ಸಂವಿಧಾನ ಹಾಗೂ ಕಾಯಿದೆಯ ಅವಮಾನ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಾಯಿದೆ ವಿರೋಧಿ ನಿಲುವನ್ನು ತೆಗೆದುಕೊಂಡಿರುವುದಾಗಿ ಕಾರ್ಯಾಚರಣೆ ನಡೆಯಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ದೇಶದಲ್ಲಿ ಪ್ರತಿಯೊಂದು ಅನಧಿಕೃತ ಕಟ್ಟಡದ ಮೇಲೆ ಕಾರ್ಯಾಚರಣೆ ನಡೆಯಬೇಕು, ಅದಕ್ಕಾಗಿ ಸರಕಾರ, ಪೊಲೀಸ್ ಹಾಗೂ ಆಡಳಿತಗಾರರು ಕೃತಿಶೀಲರಾಗಬೇಕು, ಎಂದು ಜನತೆಗೆ ಅನಿಸುತ್ತದೆ !

ಅನಧಿಕೃತ ಕಟ್ಟಡ ಕಾಮಗಾರಿಯ ಮೇಲೆ ಕ್ರಮವನ್ನು ನಿಲ್ಲಿಸಲು ಕಾಂಗ್ರೆಸ ಮತ್ತು ಕಮ್ಯುನಿಸ್ಟ ಪಕ್ಷದ ಪ್ರಯತ್ನ !

ಜಮಿಯತ್‌ನಿಂದ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತು ಕಾಂಗ್ರೆಸ ನಾಯಕ ಮತ್ತು ನ್ಯಾಯವಾದಿ ಕಪಿಲ ಸಿಬ್ಬಲ ಮತ್ತು ನ್ಯಾಯವಾದಿ ದುಷ್ಯಂತ ಇವರು ಯುಕ್ತವಾದ ಮಾಡಿದರು. ಅನರು ನ್ಯಾಯಾಲಯದಲ್ಲಿ ‘ಕಟ್ಟಡಕಾಮಗಾರಿ ಘಟನೆಯ ವಿರುದ್ಧ ಹಾಗೂ ಕಾನೂನು ದ್ರೋಹಿ ಕ್ರಮ ಕೈಗೊಳ್ಳಲಾಗುತ್ತಿದೆ’, ಎಂದು ಹೇಳಿದ್ದಾರೆ. ಅದೇ ರೀತಿ ಮಧ್ಯಸ್ತಿಕೆ ವಹಿಸುವಂತೆಯು ಒತ್ತಾಯಿಸಿದರು. ಈ ಬಗ್ಗೆ ನ್ಯಾಯಾಲಯವು ಕಾಯಾಛಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತು. ಇದಾದ ನಂತರವೂ ‘ನ್ಯಾಯಾಲಯದ ಲಿಖಿತ ಆದೇಶದ ಪ್ರತಿ ಸಿಕ್ಕಿಲ್ಲದ್ದರಿಂದ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದೇವೆ’, ಎಂದು ನಗರ ಪಾಲಿಕೆಯು ಹೇಳಿದನಂತರ ಕಮ್ಯುನಿಸ್ಟ ಪಕ್ಷದ ನಾಯಕಿ ವೃಂದಾ ಕಾರಟ ಅವರು ಪೊಲೀಸ ಆಯುಕ್ತ ದೀಪೇಂದ್ರ ಪಾಠಕವರನ್ನು ಭೇಟಿ ಮಾಡಿ ನ್ಯಾಯಾಲಯದ ಆದೇಶದ ಪ್ರತಿಯನ್ನು ತಮ್ಮ ಸಂಚಾರವಾಣಿಯಲ್ಲಿ ತೋರಿಸಿ ಕಾರ್ಯಾಚಾರಣೆಯನ್ನು ನಿಲ್ಲಿಸುವಂತೆ ಕೇಳಿಕೊಂಡರು. ಅದೇ ರೀತಿ ಮತ್ತೊಂದೆಡೆ ನ್ಯಾಯವಾದಿ ದವೆ ಅವರು ನ್ಯಾಯಾಲಯದ ಕಾರ್ಯಾಚರಣೆ ಇನ್ನೂ ನಿಂತಿಲ್ಲ ಎಂದು ಗಮನಕ್ಕೆ ತಂದನಂತರ ನ್ಯಾಯಾಲಯವು ಅವರ ಕಾರ್ಯಾಧ್ಯಕ್ಷರನ್ನು ಕೂಡಲೇ ಪಾಲಿಕೆಯ ಅಧ್ಯಕ್ಷ ಮತ್ತು ಮಹಾಪೌರರಿಗೆ ಆದೇಶದ ಬಗ್ಗೆ ತಿಳಿಸುವಂತೆ ಆದೇಶ ನೀಡಲಾಯಿತು.

ಸಂಪಾದಕೀಯ ನಿಲುವು

ಈ ಪಕ್ಷದ ನಾಯಕರು ಎಂದಾದರೂ ದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ಕೆಡುವುವ ಪ್ರಯತ್ನ ಮಾಡಿದ್ದಾರೆಯೇ ? ಇಲ್ಲಿನ ಹೆಚ್ಚಿನ ಅನಧಿಕೃತ ಕಟ್ಟಡ ಕಾಮಗಾರಿಗಳು ಮತಾಂಧರ ಇರುವುದರಿಂದ ಅದನ್ನು ತಡೆಯಲು ಪ್ರಯತ್ನಿಸಿದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !