ರಾಜ್ಯದಲ್ಲಿ ಮದರಸಾಗಳು ಕೇವಲ ಕಾಗದದಲ್ಲಿ ಮಾತ್ರ !
ಮದರಸಾಗಳ ಆಧುನೀಕರಣದ ಮೇಲೆ ಸರಕಾರವು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆ; ಆದರೆ ಅದರ ಫಲನಿಷ್ಪತ್ತಿ ಏನು ? ಇದರಲ್ಲಿ ಮದರಸಾಗಳಿಗೆ ಸಿಗುವ ಹಣವನ್ನು ನುಂಗಲಾಗುತ್ತಿರುವುದೂ ಬಹಿರಂಗವಾಗುತ್ತಿದೆ. ಈ ಎಲ್ಲ ಸಂಗತಿಗಳನ್ನು ನೋಡಿ ಮದರಸಾಗಳಿಗೆ ಬೀಗ ಜಡಿಯಿರಿ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಸುವ ಬಗ್ಗೆ ರಾಜ್ಯಸರಕಾರವು ಆದೇಶ ನೀಡಿದೆ. ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಕೇವಲ ಸರಕಾರಿ ಕಾಗದಗಳ ಮೇಲೆಯೇ ಮದರಸಾಗಳು ಕಂಡುಬರುತ್ತಿದ್ದು ಪ್ರತ್ಯಕ್ಷದಲ್ಲಿ ಅವುಗಳ ಅಸ್ತಿತ್ವ ಇಲ್ಲದಿರುವ ದೂರುಗಳು ದೊರೆತಿವೆ. ಅನಂತರ ಈ ಆದೇಶವನ್ನು ನೀಡಲಾಗಿದೆ.
ಕೇಂದ್ರಸರಕಾರದಿಂದ ಮದರಸಾಗಳ ಆಧುನೀಕರಣಕ್ಕಾಗಿ ಒಂದು ವಿಶೇಷ ಯೋಜನೆಯನ್ನು ನಡೆಸಲಾಗುತ್ತದೆ. ಇದರ ಅನ್ವಯ ಅಲ್ಲಿನ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಪ್ರತಿಯೊಂದು ಮದರಸಾದಲ್ಲಿ ೩ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಅದರಲ್ಲಿ ಪದವಿಧರ ಶಿಕ್ಷಕನಿಗೆ ೬ ಸಾವಿರ, ಪದವ್ಯೋತ್ತರ ಪದವಿಧರ ಶಿಕ್ಷಕನಿಗೆ ೧೨ ಸಾವಿರ ರೂಪಾಯಿ ನೀಡಲಾಗುತ್ತದೆ. ಉತ್ತರಪ್ರದೇಶ ಸರಕಾರವೂ ಈ ಶಿಕ್ಷಕರಿಗೆ ಹೆಚ್ಚುವರಿ ಮಾನಧನವನ್ನು ನೀಡುತ್ತದೆ. ಸದ್ಯ ಮದರಸಾಗಳಲ್ಲಿ ಒಟ್ಟೂ ೨೧ ಸಾವಿರದ ೧೨೬ ಶಿಕ್ಷಕರು ಕಲಿಸುತ್ತಿದ್ದಾರೆ. ಕೇವಲ ಸರಕಾರಿ ಕಾಗದಗಳ ಮೇಲೆಯೇ ನಡೆಯುತ್ತಿರುವ ಮದರಸಾಗಳ ಈ ಪ್ರಶ್ನೆಯು ಹಳೆಯದಾಗಿದೆ. ೨೦೧೩ರಲ್ಲಿಯೂ ರಾಜ್ಯದಲ್ಲಿ ಕೇವಲ ಕಾಗದದಲ್ಲಿಯೇ ಅಸ್ತಿತ್ವದಲ್ಲಿದ್ದ ೧೧೮ ಕಾನೂನು ಬಾಹಿರ ಮದರಸಾಗಳು ಕಂಡುಬಂದಿದ್ದವು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !