ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯಲ್ಲಿನ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ವ್ಯಾವಹಾರಿಕ ಕರವನ್ನು ರದ್ದುಗೊಳಿಸುವ ಆದೇಶವನ್ನು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅಲ್ಲಿನ ನಗರಪಾಲಿಕೆಗೆ ನೀಡಿದರು. ಯೋಗಿ ಆದಿತ್ಯನಾಥರು ಎರಡನೇ ಬಾರಿ ಮುಖ್ಯಮಂತ್ರಿ ಪದವಿಯನ್ನು ಸ್ವೀಕರಿಸಿದ ನಂತರ ಮೊದಲಿಗೆ ಅಯೋಧ್ಯೆಗೆ ಭೇಟಿ ನೀಡಿದರು. ಆಗ ಅವರು ಈ ನಿಣರ್ಯವನ್ನು ತೆಗೆದುಕೊಂಡರು. ಅಯೋಧ್ಯಾ ನಗರಪಾಲಿಕೆಯ ಸ್ಥಾಪನೆಯ ನಂತರ ಅಲ್ಲಿನ ದೇವಸ್ಥಾನಗಳು, ಮಠಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ವ್ಯಾವಹಾರಿಕ ಕರವನ್ನು ಭರಿಸಬೇಕಾಗುತ್ತಿತ್ತು. ಇದರಿಂದ ಲಕ್ಷಾಂತರ ರೂಪಾಯಿಗಳ ಆದಾಯ ದೊರೆಯುತ್ತಿತ್ತು. ಈ ಕರವನ್ನು ರದ್ದುಗೊಳಿಸುವ ಬಗ್ಗೆ ದೇವಸ್ಥಾನ ಹಾಗೂ ಮಠಗಳ ಪ್ರಮುಖರು ಅನೇಕ ಬಾರಿ ಮನವಿ ಮಾಡಿದ್ದರು. ಇದರಿಂದ ಈಗ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿನ ಭೂಮಿಪೂಜೆ, ಅಂದರೆ ಶಿಲಾನ್ಯಾಸದ ನಂತರ ನಡೆಯುವ ಇದೇ ಮೊದಲನೇಯ ರಾಮನವಮಿಯಾಗಿದೆ. ಆದುದರಿಂದ ಈ ರಾಮನವಮಿಯನ್ನು ವಿಜ್ರಂಭಣೆಯಿಂದ ಆಚರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಆದೇಶಿಸಿದ್ದಾರೆ. ಈ ರಾಮನವಮಿಯ ಆಯೋಜನೆಯನ್ನು ಹೇಗೆ ಮಾಡಬೇಕು ? ಎಂಬುದರ ಸಂದರ್ಭದಲ್ಲಿಅವರು ಅಧಿಕಾರಿಗಳು ಹಾಗೂ ದೇವಸ್ಥಾನದ ಪ್ರಮುಖರ ಸಭೆಯನ್ನು ನಡೆಸಿದ್ದರು.
#UttarPradesh CM #YogiAdityanath asks #Ayodhya municipal corporation not to impose commercial taxes on temples and other religious shrines. https://t.co/SpKS9y5dJ2
— Zee News English (@ZeeNewsEnglish) April 2, 2022
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು