ಮಂದಿರದಲ್ಲಿ ಜನಸಂದಣಿ ಆಗದೆ ಇರುವ ಹಾಗೆ, ಮಂದಿರ ವ್ಯವಸ್ಥಾಪನೆಯವರು ಎಚ್ಚರಿಕೆ ವಹಿಸಬೇಕು !- ಸಂಪಾದಕರು

ಮಥೂರಾ (ಉತ್ತರ ಪ್ರದೇಶ) – ಇಲ್ಲಿನ ಶ್ರೀ ಬಾಂಕೆ ಬಿಹಾರಿ ಮಂದಿರದಲ್ಲಿ ಫೆಬ್ರವರಿ 12 ರಂದು ಏಕಾದಶಿಯ ದಿನ ಲಕ್ಷ್ಮಣ ಎಂಬ 65 ವಯಸ್ಸಿನ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆದರೆ ಮಂದಿರ ವ್ಯವಸ್ಥಾಪನೆಯ ಅವರು ಮಾತ್ರ `ಪ್ರಸ್ತುತ ನಮ್ಮ ಹತ್ತಿರ ಯಾವುದೇ ಭಕ್ತನ ಸಾವಿನ ಮಾಹಿತಿ ಇಲ್ಲ’, ಎಂದು ಹೇಳಿದ್ದಾರೆ. ಶ್ರೀ ಬಾಂಕೆ ಬಿಹಾರಿ ಮಂದಿರದ ಭಕ್ತನ ಸಾವು ಘಟಿಸುವುದು ಇದು ಮೊದಲನೆಯ ಘಟನೆಯಲ್ಲ. ಈ ಮೊದಲು ಈ ರೀತಿಯ ಅನೇಕ ಘಟನೆಗಳು ಬೆಳಕಿಗೆ ಬಂದಿವೆ, ಅದರಲ್ಲಿ ಜನಸಂದಣಿಯಿಂದ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಮಂದಿರದಲ್ಲಿ ಪ್ರಚಂಡ ಜನಸಂದಣಿ ಇರುವುದರಿಂದ ಮತ್ತು ಯೋಗ್ಯ ವ್ಯವಸ್ಥೆ ಇಲ್ಲದಿರುವುದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಏಕಾದಶಿಯ ದಿನದಂದು ಮಥುರಾದಲ್ಲಿ ಅಷ್ಟೆಯಲ್ಲದೇ ದೂರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಂದಿರಕ್ಕೆ ದರ್ಶನಕ್ಕಾಗಿ ಬರುತ್ತಿರುತ್ತಾರೆ.
A 65-year-old man died of suffocation in Banke Bihari Mandir in #UttarPradesh’s #Mathura yesterday.https://t.co/kjU6pApdF2
— IndiaToday (@IndiaToday) February 13, 2022
ಮೃತರ ಸಂಬಂಧಿಕರು, ಯಾವಾಗ ಅವರು ಪ್ರಾರ್ಥನೆ ಮಾಡಲು ಮಂದಿರದ ಒಳಗೆ ತಲುಪಿದರು, ಆಗ ಬಹಳ ಜನಸಂದಣಿ ಇತ್ತು. ಆದ್ದರಿಂದ ಲಕ್ಷ್ಮಣ ಇವರ ಉಸಿರುಗಟ್ಟಿತು. ಅವರಿಗೆ ತಕ್ಷಣ ಅಲ್ಲಿಂದ ಹೊರಕರೆತರಲಾಯಿತು; ಆದರೆ ಮಂದಿರದ ಹೊರಗೆ ಬರುವಷ್ಟರಲ್ಲಿ ಅವರು ಪ್ರಜ್ಞೆ ತಪ್ಪಿದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಡಾಕ್ಟರರು ಅವರನ್ನು ಮೃತಪಟ್ಟಿದ್ದಾರೆಂದು ಹೇಳಿದರು.
ಬಟ್ಟೆ ಅಂಗಡಿಯ ‘ಟ್ರಯಲ್ ರೂಮ್’ನಲ್ಲಿ ಬಟ್ಟೆ ಬದಲಾಯಿಸುವ ಮಹಿಳೆಯರ ರಹಸ್ಯ ವಿಡಿಯೋ ಚಿತ್ರೀಕರಿಸುತ್ತಿದ್ದ ಶಾರುಖ್ನ ಬಂಧನ : Trial room camera
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ