ಪತ್ರಿಕಾಗೋಷ್ಠಿಯಲ್ಲಿ ನಟಿ ಶ್ವೇತಾ ತಿವಾರಿ ಇವರಿಂದ ಖೇದಕರ ಹೇಳಿಕೆ
ಮಧ್ಯಪ್ರದೇಶದ ಗೃಹ ಸಚಿವರಿಂದ ಹೇಳಿಕೆ ನೀಡಿದ ಬಗ್ಗೆ ವಿಚಾರಣೆಯ ಆದೇಶ
ಹಿಂದೂಗಳು ಸಂಘಟಿತರಲ್ಲದ ಕಾರಣ ಯಾರೂ ಬೇಕಾದರೂ ಆಗಾಗ ದೇವತೆಗಳನ್ನು ಅವಮಾನಿಸುತ್ತಾರೆ ! ಹಿಂದೂಗಳು ಸಂಘಟಿತರಾಗಿ ಇದರ ವಿರುದ್ಧ ತೀವ್ರವಾಗಿ ಮತ್ತು ನ್ಯಾಯಸಮ್ಮತವಾಗಿ ಖಂಡಿಸಬೇಕು ಮತ್ತು ಸಂಬಂಧಪಟ್ಟ ನಟಿಯ ಕ್ಷಮೆಯಾಚಿಸುವಂತೆ ಮಾಡಬೇಕು !

ಭೋಪಾಲ – ದೇವರು ನನ್ನ ಒಳಉಡುಪುಗಳ ಅಳತೆ ತೆಗೆದುಕೊಳ್ಳುತ್ತಿದ್ದಾರೆ, ಎಂದು ನಟಿ ಶ್ವೇತಾ ತಿವಾರಿ ಭೋಪಾಲ್.ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮುಂಬರುವ ‘ವೆಬ್ ಸರಣಿ’ಯನ್ನು (ಇಂಟರನೆಟನಲ್ಲಿನ ಆನ್ಲೈನ್ ವಾಹಿನಿಗಳ ಮೂಲಕ ಪ್ರಸಾರವಾಗುವ ಸರಣಿ) ಘೋಷಿಸುವಾಗ ತಿವಾರಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ತಿವಾರಿ ಕ್ಷಮೆಯಾಚಿಸಬೇಕು, ಎಂದು ಜನರು ಒತ್ತಾಯಿಸಿದ್ದಾರೆ.
Actor #ShwetaTiwari landed into controversy after she made an indecent remark on God during a promotional event#Viral https://t.co/Oe8pKrILOW
— DNA (@dna) January 27, 2022
ಈ ಸುದ್ದಿಯನ್ನು ನೀಡುವಾಗ, ‘ಈ ಕಾರ್ಯಕ್ರಮದಲ್ಲಿ ನಟಿಯು ತಮಾಷೆಯಿಂದ ನೀಡಿದ ಹೇಳಿಕೆಗಾಗಿ ಅವರನ್ನು ಟ್ರೋಲ್ (ಟೀಕೆ) ಮಾಡುತ್ತಿದ್ದಾರೆ’, ಎಂದು ಅನೇಕ ಸುದ್ದಿವಾಹಿನಿಗಳು ವರದಿ ಮಾಡಿವೆ. (ಪತ್ರಿಕೆಗಳು ದೇವರು ಮತ್ತು ಧರ್ಮದ ಬಗ್ಗೆ ಕಿಂಚಿತ್ತೂ ಸಂವೇದನಾಶೀಲ ಇಲ್ಲದ್ದರಿಂದ, ನಟಿಯ ಗಂಭೀರ ಹೇಳಿಕೆಯನ್ನು ತಮಾಷೆಯಂತೆ ನೋಡುತ್ತಿವೆ ! – ಸಂಪಾದಕರು) ಈ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಇದನ್ನು ಸಹಿಸುವುದಿಲ್ಲ. ಭೋಪಾಲನ ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆ ನಡೆಸಿ ೨೪ ಗಂಟೆಯೊಳಗೆ ವರದಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ