ಛತ್ತೀಸಗಡದ ಭಾಜಪ ಪ್ರಧಾನ ಕಾರ್ಯದರ್ಶಿ ಪ್ರಬಲ ಪ್ರತಾಪ ಸಿಂಹ ಜುದೇವ ಇವರಿಂದ ಟೀಕೆ !

  • ತಮಿಳುನಾಡಿನಲ್ಲಿ ಮತಾಂತರಕ್ಕಾಗಿ ಕಾನ್ವೆಂಟ್ ಶಾಲೆ ನಡೆಸಿದ ದೌರ್ಜನ್ಯದಿಂದ ಹಿಂದೂ ವಿದ್ಯಾರ್ಥಿನಿಯ ಆತ್ಮಹತ್ಯೆಯ ಪ್ರಕರಣ

  • ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ !

ರಾಯಪುರ (ಛತ್ತೀಸಗಡ) – ತಮಿಳುನಾಡಿನ ತಂಜಾವರದಲ್ಲಿ ಮತಾಂತರಕ್ಕೆ ಒಪ್ಪದಿದ್ದರಿಂದ ಕಾನ್ವೆಂಟ್ ಶಾಲೆಯೊಂದು ನಡೆಸಿದ ದೌರ್ಜನ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ೧೨ ನೇ ತರಗತಿಯಲ್ಲಿ ಕಲಿಯುತ್ತಿದ್ದ ೧೭ ವರ್ಷದ ಲಾವಣ್ಯಳ ಬಗ್ಗೆ ಛತ್ತಿಸಗಡದ ಭಾಜಪದ ಪ್ರಧಾನ ಕಾರ್ಯದರ್ಶಿ ಹಾಗೂ ‘ಅಖಿಲ ಭಾರತೀಯ ಘರವಾಪಸಿ’ಯ ಮುಖ್ಯಸ್ಥ ಆಗಿರುವ ಪ್ರಬಲ ಪ್ರತಾಪ ಸಿಂಹ ಜುದೇವ ಇವರು ಟ್ವೀಟ ಮಾಡುತ್ತಾ, ‘ನಮ್ಮ ಹೆಣ್ಣು ಮಗಳ ಬಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ. ಅದನ್ನು ವಿರೋಧಿಸುವುದೊಂದೇ ಏಕೈಕ ಪರಿಹಾರವಾಗಿದೆ,’ ಎಂದು ಪ್ರತಿಕ್ರಿಯಿಸಿದ್ದಾರೆ.