ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ ಯಾದವ ಇವರು ಪಾಕಿಸ್ತಾನದ ಪರ ವಹಿಸಿದ ಹೇಳಿಕೆ !
|
ಪಾಕಿಸ್ತಾನವಿರಲಿ ಅಥವಾ ಚೀನಾ ಇರಲಿ ಇಬ್ಬರೂ ಭಾರತದ ಶತ್ರು ಆಗಿದ್ದಾರೆ; ಮುಸಲ್ಮಾನರ ಮತಗಳ ಸಲುವಾಗಿ ಸಮಾಜವಾದಿ ಪಕ್ಷ ಪಾಕಿಸ್ತಾನದ ಕಡೆಗೆ ನಿರ್ಲಕ್ಷಿಸಲು ಪ್ರಯತ್ನಿಸುತ್ತಿದೆ, ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ಅದು ಪಾಕಿಸ್ತಾನದ ನುಸುಳುಕೋರರಿಗೆ ಕೆಂಪುಹಾಸು ಹಾಕಿದರೆ ಆಶ್ಚರ್ಯಪಡಬಾರದು ! ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ ! |

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಾರತದ ನಿಜವಾದ ಶತ್ರು ಪಾಕಿಸ್ತಾನವಲ್ಲ, ಚೀನಾ ಆಗಿದೆ. ಭಾಜಪ ಮಾತ್ರ ನಿರಂತರವಾಗಿ ಪಾಕಿಸ್ತಾನವನ್ನು ಗುರಿ ಮಾಡುತ್ತದೆ. ಸಮಾಜವಾದಿ ಡಾ. ರಾಮ ಮನೋಹರ ಲೋಹಿಯಾ ಮತ್ತು ಮುಲಾಯಂ ಸಿಂಹ ಯಾದವ ಇವರದ್ದೂ ಇದೇ ನಿಲುವು ಇತ್ತು, ಎಂದು ಸಮಾಜವಾದಿ ಪಕ್ಷದ ಮುಖಂಡ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ ಇವರು ಹೇಳಿದ್ದಾರೆ. ಭಾಜಪ ಅವರ ಹೇಳಿಕೆಯನ್ನು ಟೀಕಿಸಿದೆ. ‘ಯಾರು ಜಿನ್ನಾರನ್ನು ಪ್ರೀತಿಸುತ್ತಾರೆಯೋ, ಅವರು ಪಾಕಿಸ್ತಾನವನ್ನು ಹೇಗೆ ನಿರಾಕರಿಸುತ್ತಾರೆ ?’, ಎಂದು ಭಾಜಪ ವಕ್ತಾರ ಡಾ. ಸಂಬಿತ ಪಾತ್ರಾ ಇವರು ಟೀಕಿಸಿದ್ದಾರೆ.
Our real enemy is China. Pakistan is our political enemy. But BJP only targets Pakistan because of their vote politics: @samajwadiparty president @yadavakhilesh in an interview with ET’s @anshumanscribe & @GaurVatsala | https://t.co/wQ1ADnIaWp
— Economic Times (@EconomicTimes) January 24, 2022
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ