ಮಕರ ಸಂಕ್ರಾಂತಿ

ಸಂಕ್ರಾಂತಿ

ತಿಥಿ

ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗಿ ಆಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ ೮೦ ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ೧ ದಿನ ಮುಂದೂಡಲಾಗುತ್ತದೆ. ಇತ್ತೀಚೆಗೆ ಮಕರ ಸಂಕ್ರಾಂತಿ ಯು ಜನವರಿ ೧೪ ಕ್ಕೆ ಬರುತ್ತದೆ.

ಇತಿಹಾಸ

ಸಂಕ್ರಾಂತಿ ಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿ ಯು ಸಂಕರಾಸುರನೆAಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ.

ಮಹತ್ವ

ಈ ದಿನ ಪಂಚಾಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ.

ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಾಧನೆಯ ದೃಷ್ಟಿಯಿಂದ ಮಹತ್ವ

ಈ ದಿನ ಪಂಚಾಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಚೈತನ್ಯದ ಲಾಭವಾಗುತ್ತದೆ.

ದಾನ

ಅ. ‘ಪರ್ವಕಾಲದಲ್ಲಿ ದಾನದ ಮಹತ್ವ : ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.

ಆ. ದಾನ ಕೊಡುವ ವಸ್ತುಗಳು : ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’ ಮುತ್ತೈದೆಯರು ಅರಿಶಿನ-ಕುಂಕುಮದ ಕಾರ್ಯಕ್ರಮವನ್ನು ಮಾಡಿ ನೀಡುವ ದಾನಕ್ಕೆ ‘ಬಾಗಿನ ನೀಡುವುದು’ ಎಂದು ಹೇಳುತ್ತಾರೆ.

ಆ ೧. ಬಾಗಿನ ನೀಡುವುದರ ಮಹತ್ವ : ‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.

ಆ ೨. ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು ? : ಇತ್ತೀಚೆಗೆ ಸಾಬೂನು, ಪ್ಲಾಸ್ಟಿಕ್‌ನ ವಸ್ತುಗಳಂತಹ ಅಧಾರ್ಮಿಕ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಾಗಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು.

ಇ. ಮಡಕೆ : ‘ಸಂಕ್ರಾಂತಿಯ ಹಬ್ಬಕ್ಕೆ ಸಣ್ಣ ‘ಮಣ್ಣಿನ ಮಡಕೆಗಳು’ ಬೇಕಾಗುತ್ತವೆ.  ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನ ಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ  ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆಯನ್ನು ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನವೆಂದು (ಬಾಗಿನ) ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.

ಎಳ್ಳಿನ ಉಪಯೋಗ

ಸಂಕ್ರಾಂತಿಗೆ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾ. ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).

ಎಳ್ಳಿನ ಮಹತ್ವ

ಅ. ಎಳ್ಳನ್ನು ಉಪಯೋಗಿಸುವುದರಿಂದ ಪಾಪಕ್ಷಾಲನೆಯಾಗುವುದು : ‘ಈ ದಿನ ಎಳ್ಳೆಣ್ಣೆ ಮತ್ತು ಉಟಣೆಯನ್ನು ಮೈಗೆ ಹಚ್ಚುವುದು, ಎಳ್ಳುಮಿಶ್ರಿತ ಜಲದಿಂದ ಸ್ನಾನ ಮಾಡುವುದು, ಎಳ್ಳುಮಿಶ್ರಿತ ನೀರು ಕುಡಿಯುವುದು, ಎಳ್ಳಿನ ಹೋಮ ಮಾಡುವುದು ಮತ್ತು ಎಳ್ಳನ್ನು ದಾನ ಮಾಡುವುದು. ಈ ಪದ್ಧತಿಯಿಂದ ಎಳ್ಳನ್ನು ಉಪಯೋಗಿಸುವವರ ಎಲ್ಲ ಪಾಪಗಳು ನಾಶವಾಗುತ್ತವೆ.’

ಆ. ಆಯುರ್ವೇದಕ್ಕನುಸಾರ ಮಹತ್ವ : ಚಳಿಗಾಲದಲ್ಲಿ ಬರುವ ಸಂಕಾಂತ್ರಿಯಂದು ಎಳ್ಳನ್ನು ತಿನ್ನುವುದು ಲಾಭದಾಯಕವಾಗಿರುತ್ತದೆ.

ಇ. ಅಧ್ಯಾತ್ಮಕ್ಕನುಸಾರ ಮಹತ್ವ

೧. ಎಳ್ಳಿನಲ್ಲಿ ಸತ್ವ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುವುದರಿಂದ ಎಳ್ಳುಬೆಲ್ಲವನ್ನು ಸೇವಿಸುವುದರಿಂದ ಅಂತಃಶುದ್ಧಿಯಾಗಿ ಸಾಧನೆಯು ಒಳ್ಳೆಯ ರೀತಿಯಿಂದಾಗಲು ಸಹಾಯವಾಗುತ್ತದೆ. ಎಳ್ಳುಬೆಲ್ಲವನ್ನು ಒಬ್ಬರಿಗೊಬ್ಬರು ಹಂಚುವುದರಿಂದ ಸಾತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.

೨. ‘ಶ್ರಾದ್ಧದಲ್ಲಿ ಎಳ್ಳನ್ನು ಉಪಯೋಗಿಸಿದರೆ ಅಸುರ ಮುಂತಾದವರು ಶ್ರಾದ್ಧದಲ್ಲಿ ವಿಘ್ನವನ್ನುಂಟು ಮಾಡುವುದಿಲ್ಲ.

ಗಾಳಿಪಟವನ್ನು ಹಾರಿಸಬೇಡಿ !

ಸದ್ಯ ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಮನೋರಂಜನೆಗಾಗಿ ಗಾಳಿಪಟವನ್ನು ಹಾರಿಸುವುದೆಂದರೆ, ‘ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸುತ್ತಿದ್ದನು’, ಎಂಬಂತೆ ಆಗುವುದು. ಗಾಳಿಪಟ ಹಾರಿಸುವ ಸಮಯವನ್ನು ರಾಷ್ಟ್ರದ ವಿಕಾಸಕ್ಕಾಗಿ ಉಪಯೋಗಿಸಿದರೆ, ಬೇಗನೇ ರಾಷ್ಟ್ರದ ಪ್ರಗತಿಯಾಗುವುದು ಹಾಗೂ ಸಾಧನೆ ಮತ್ತು ಧರ್ಮಕಾರ್ಯಗಳಿಗಾಗಿ ಉಪಯೋಗಿಸಿದರೆ, ತನ್ನೊಂದಿಗೆ ಸಮಾಜದ ಕಲ್ಯಾಣವೂ ಆಗುವುದು.

ಕಿಂಕ್ರಾಂತಿ ಅಥವಾ ಕರಿದಿನ

ಇದು ಸಂಕ್ರಾಂತಿಯ ಮಾರನೆಯ ದಿನವಾಗಿದೆ. ಈ ದಿನ ದೇವಿಯು ಕಿಂಕರಾಸುರನನ್ನು ವಧಿಸಿದ್ದಳು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)

ಹಿಂದೂಗಳೇ, ವ್ಯಾಸಪೀಠದ ಗೌರವ ಕಾಪಾಡುವುದು ನಮ್ಮ ಧರ್ಮವಾಗಿದೆ ಎಂಬುದನ್ನು ಗಮನದಲ್ಲಿಡಿ !

‘ಮುಖ್ಯ ಅಥಿತಿ, ನಿರೂಪಕರು ಹಾಗೂ ವ್ಯಾಸಪೀಠದ ಮೇಲೆ ಕುಳಿತುಕೊಳ್ಳುವ ಮಹನೀಯ ಅತಿಥಿಗಳು ಮತ್ತು ವಿಶಿಷ್ಟ ಜನರು ಇವರಲ್ಲಿ ಶೇ. ೮೦ ರಷ್ಟು ಜನರು ವ್ಯಾಸಪೀಠದ ಮೇಲೆ ಪಾದರಕ್ಷೆ ಹಾಕಿಕೊಂಡೆ ಕುಳಿತುಕೊಳ್ಳುತ್ತಾರೆ. ಇಂದು ಸಾಧನೆಯ ಅಭಾವದಿಂದ ಹಿಂದೂಗಳ ಅಹಂಕಾರ ಉತ್ತುಂಗಕ್ಕೇರಿದೆ. ಅದರಲ್ಲೂ ವ್ಯಾಸಪೀಠದಲ್ಲಿ ಆಸೀನರಾಗಿರುವ ಅತಿಥಿಗಳಿಗೆ ನಮ್ರತೆಯಿಂದ ಅವರ ತಪ್ಪಿನ ಅರಿವು ಮಾಡಿಸಿದರೆ ಅವರ ಅಹಂಗೆ ತಕ್ಷಣ ಪೆಟ್ಟಾಗುತ್ತದೆ. ಇಂದಿನ ಬಹಿರ್ಮುಖ ಹಿಂದೂ ತನ್ನ ತಪ್ಪುಗಳನ್ನು ಕೇಳಲು ಸಿದ್ಧರಿರುವುದಿಲ್ಲ ಈ ಸ್ಥಿತಿಯಿದೆ’. (ಕೃಪೆ : ಮಾಸಿಕ ‘ವೈದಿಕ ಉಪಾಸನಾ’)