ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ಎಲ್ಲೆಡೆಯ ಅರ್ಪಣೆದಾರರಿಗೆ ದಾನದ ಸುವರ್ಣಾವಕಾಶ !

‘ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳಿಗಾಗಿ ಕಟಿಬದ್ಧವಾಗಿದೆ. ಸನಾತನದ ಆಶ್ರಮ ಹಾಗೂ ಸೇವಾಕೇಂದ್ರಗಳ ಮೂಲಕ ಧರ್ಮಪ್ರಸಾರ ಕಾರ್ಯವನ್ನು ನಡೆಸಲಾಗುತ್ತದೆ. ಪ್ರಸ್ತುತ ಧರ್ಮಗ್ಲಾನಿಯ ಕಾಲವಾಗಿದ್ದರಿಂದ ಕಾಲಾನುಸಾರ ‘ಧರ್ಮಪ್ರಸಾರ’ ಮಾಡುವುದು ಆವಶ್ಯಕ ಕಾರ್ಯವಾಗಿದೆ. ‘ಧರ್ಮಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳಿಗೆ ಆಹಾರ-ಧಾನ್ಯಗಳನ್ನು ದಾನ ಮಾಡುವುದು’ ಸರ್ವಶ್ರೇಷ್ಠ ದಾನವಾಗಿದೆ.

ಪ್ರಸ್ತುತ ಕಾಲದಲ್ಲಿ, ರಾಷ್ಟ್ರ ಮತ್ತು ಧರ್ಮ ಇವುಗಳ ಸೇವೆಯ ಮಹತ್ವವನ್ನು ಗಮನದಲ್ಲಿರಿಸಿ ಸಾಧಕರು ಆಶ್ರಮದಲ್ಲಿದ್ದು ಪೂರ್ಣವೇಳೆ ಸೇವೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಸನಾತನದ ರಾಮನಾಥಿ ಆಶ್ರಮಕ್ಕೆ ಧಾನ್ಯಗಳ ಆವಶ್ಯಕತೆಯಿದೆ. ಆರು ತಿಂಗಳಿಗಾಗಿ ಆಶ್ರಮದ ಸಾಧಕರಿಗೆ ಬೇಕಾಗುವ ಧಾನ್ಯಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳ ಪಟ್ಟಿಯನ್ನು ಪಕ್ಕದಲ್ಲಿ ನೀಡಲಾಗಿದೆ.

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಧಾನ್ಯಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳನ್ನು ಅರ್ಪಣೆಯ ರೂಪದಲ್ಲಿ ನೀಡಬಯಸುವರೋ ಅಥವಾ ಅದನ್ನು ಖರೀದಿಸಲು ಧನದ ರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವರೋ ಅವರು ಈ ಮುಂದಿನ ಸಂಖ್ಯೆಗೆ ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ವಿ-ಅಂಚೆ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಛಿ/o ‘ಸನಾತನ ಆಶ್ರಮ’ದ, ೨೪/ಬಿ, ರಾಮನಾಥಿ, ಬಾಂದಿವಡೆ, ಪೋಂಡಾ, ಗೋವಾ. ಪಿನ್-೪೦೩೪೦೧

ಇದಕ್ಕೆ ಧನಾದೇಶ ನೀಡಲಿಕ್ಕಿದ್ದರೆ ‘ಸನಾತನ ಸಂಸ್ಥಾ’ ಹೆಸರಿನಲ್ಲಿ ನೀಡಬೇಕು.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೬.೧೨.೨೦೨೧)