|
ಹಿಂದೂಗಳ ಧಾರ್ಮಿಕ ಕೃತಿಗಳ ಮೇಲೆ ಈ ರೀತಿಯಲ್ಲಿ ಶುಲ್ಕ ಹೇರುವುದೆಂದರೆ ಹೊಸ ರೀತಿಯ ಔರಂಗಜೇಬನ ‘ಜಿಝಿಯಾ ತೆರಿಗೆ’ಯೇ ಆಗಿದೆ ! ಹಿಂದೂ ಸಂಘಟನೆಗಳು ಇದನ್ನು ಪ್ರಖರವಾಗಿ ವಿರೋಧಿಸಿ ಅದನ್ನು ರದ್ದುಗೊಳಿಸಲು ಪ್ರಯತ್ನಿಸಬೇಕು ! ಸರಕಾರದಿಂದ ಒಂದೆಡೆ ಮುಸಲ್ಮಾನರ ಓಲೈಕೆಯೆಂದು ಮದರಸಾಗಳಲ್ಲಿ ಆಧುನಿಕ ಶಿಕ್ಷಣ ನೀಡಲು ಅನುದಾನ ಹಾಗೂ ಇತರ ಸೌಲಭ್ಯಗಳಿಗಾಗಿ ಹಣ ಸುರಿಯಲಾಗುತ್ತದೆ ಮತ್ತು ಇನ್ನೊಂದೆಡೆ ಹಿಂದೂಗಳ ಯಾತ್ರೆಗಳ ಮೇಲೆ ಹೆಚ್ಚುವರಿ ಪ್ರವಾಸಿ ಶುಲ್ಕವನ್ನು ಹೇರಲು ಪ್ರಯತ್ನಿಸಲಾಗುತ್ತಿದೆ. ಇದು ಭಾರತದ ‘ಜಾತ್ಯತೀತತೆ’ಯ ವ್ಯಾಖ್ಯೆಯಾಗಿದೆ ! ಜಾತ್ಯತೀತ ಸರಕಾರಿ ವ್ಯವಸ್ಥೆಯ ಈ ಅನ್ಯಾಯದ ಮೇಲೆ ಹಿಂದೂ ರಾಷ್ಟ್ರವೇ ಏಕೈಕ ಉಪಾಯವಾಗಿದೆ, ಎಂಬುದನ್ನು ಗಮನದಲ್ಲಿಡಿ ! |

ಗಯಾ (ಬಿಹಾರ) – ಗಯಾ ನಗರಪಾಲಿಕೆಯಿಂದ ನಗರದ ಪಿಂಡದಾನ ಮಾಡುವ ೫೦ ‘ಪಿಂಡ ವೇದಿ’ ಯ ಜಾಗಗಳಲ್ಲಿ ಪಿಂಡದಾನ ಮಾಡಲು ಬರುವ ಪ್ರತಿಯೊಬ್ಬರಿಂದ ೫ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಿದೆ. ಪಾಲಿಕೆಯಿಂದ ಈ ‘ಪಿಂಡ ವೇದಿ’ಯ ಪರಿಸರದ ಸ್ವಚ್ಛತೆ ಮತ್ತು ನಿರ್ವಹಣೆಗಾಗಿ ಸಂಸ್ಥೆಗೆ ವರ್ಷಕ್ಕೆ ಐದೂವರೆ ಲಕ್ಷ ರೂಪಾಯಿಗಳ ಗುತ್ತಿಗೆ ನೀಡಲಾಗುತ್ತಿದೆ. ಆದರೆ ಇಲ್ಲಿನ ಪುರೋಹಿತರು ಮತ್ತು ಅವರ ಸಂಘಟನೆಗಳು ಈ ನಿರ್ಣಯವನ್ನು ವಿರೋಧಿಸಿವೆ. ‘ಇದರ ಪರಿಣಾಮವನ್ನು ಎದುರಿಸಬೇಕಾಗಬಹುದು’, ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
बिहार के गया में पिंड देने वाले श्रद्धालुओं से नगर निगम वसूल रहा शुल्क, पंडा समाज के विरोध के बाद मेयर ने कहा – फैसला सरकार का#Gaya #Biharhttps://t.co/Iw1P85n3Uo
— ऑपइंडिया (@OpIndia_in) January 2, 2022
೧. ಅಲ್ಲಿನ ಪಂಡಾ ಸಮಾಜ ಮತ್ತು ವಿಷ್ಣುಪದ ಪ್ರಬಂಧಕಾರಿಣಿ ಸಮಿತಿಯು ವಿರೋಧಿಸುತ್ತ ‘ಪಾಲಿಕೆಯು ಈ ರೀತಿಯಲ್ಲಿ ಶುಲ್ಕ ವಸೂಲಾತಿ ಮಾಡುತ್ತಿದ್ದರೆ ತೀರ್ಥಯಾತ್ರಿಗಳ ದೃಷ್ಟಿಯಲ್ಲಿ ತೀರ್ಥಸ್ಥಳವು ವಸೂಲಿಯ ಅಡ್ಡೆಯಾಗುವುದು. ಈ ರೀತಿಯಲ್ಲಿ ಶುಲ್ಕ ಸಂಗ್ರಹಿಸುವುದು ಒಂದು ರೀತಿಯಲ್ಲಿ ಹಣಗಳಿಸುವ ಒಂದು ಆಕರವಾಗಬಾರದು. ಈ ನಿರ್ಣಯವನ್ನು ತಕ್ಷಣ ಹಿಂದೆ ಪಡೆಯಬೇಕು’ ಎಂದು ಹೇಳಿದೆ.
೨. ವಿಷ್ಣುಪದ ಪ್ರಬಂಧಕಾರಿಣಿ ಸಮಿತಿಯ ಅಧ್ಯಕ್ಷರಾದ ಶಂಭೂಲಾಲ ವಿಠ್ಠಲರವರು ‘ಇಂತಹ ನಿರ್ಣಯದಿಂದ ಜನರಲ್ಲಿ ನಿರಾಸೆಯ ವಾತಾವರಣ ನಿರ್ಮಾಣವಾಗಿದೆ. ಈ ನಿರ್ಣಯದ ಮೇಲೆ ಪಾಲಿಕೆ ಮತ್ತು ಸರಕಾರವು ಪುನಃ ವಿಚಾರ ಮಾಡಬೇಕಿದೆ’ ಎಂದು ಹೇಳಿದ್ದಾರೆ.
೩. ಗಯಾ ನಗರಪಾಲಿಕೆಯು ಈ ವಿಷಯದಲ್ಲಿ ‘ಪಿಂಡ ವೇದಿ’ಯಲ್ಲಿನ ಸೀತಾಕುಂಡ ಮತ್ತು ಅಕ್ಷಯ ವಟ ದೇವಸ್ಥಾನಗಳ ಪರಿಸರದಲ್ಲಿನ ಸ್ವಚ್ಛತೆ ಮತ್ತು ವ್ಯವಸ್ಥಾಪನೆಗಾಗಿ ಗುತ್ತಿಗೆ ನೀಡಲಾಗಿದೆ. ಅನಂತರವೇ ಇಲ್ಲಿ ಶುಲ್ಕ ವಸೂಲಿ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದೆ.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ