|
ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ಈ ಪ್ರಕರಣದ ವಿಚಾರಣೆ ನಡೆಸಿ ಸತ್ಯವನ್ನು ಹಿಂದೂಗಳ ಮುಂದಿಡಬೇಕು, ಎಂಬುದು ಹಿಂದೂಗಳ ಬೇಡಿಕೆಯಾಗಿದೆ !
ವಿದಿಶಾ (ಮಧ್ಯಪ್ರದೇಶ) – ಇಲ್ಲಿನ ಗಂಜ ಬಸೋಡಾನಲ್ಲಿರುವ ‘ಸೆಂಟ ಜೊಸೆಫ’ ಎಂಬ ಕ್ಯಾಥೊಲಿಕ ಶಾಲೆಯಲ್ಲಿ ಹಿಂದೂ ವಿಧ್ಯಾರ್ಥಿನಿಯರನ್ನು ಮತಾಂತರಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಕಲ್ಲುತೂರಾಟದ ಪ್ರಕರಣದಲ್ಲಿ ಪೊಲೀಸರು ೪ ಜನರನ್ನು ವಶ ಪಡಿಸಿಕೊಂಡಿದ್ದು ಉಳಿದವರನ್ನು ಪತ್ತೆ ಹಚ್ಚ ಲಾಗುತ್ತಿದೆ. ಈ ಶಾಲೆ ೧೧ ವರ್ಷಗಳ ಹಿಂದೆ ಆರಂಭವಾಗಿತ್ತು. ಭೂಪಾಲದ ‘ಮಲಬಾರ ಮಿಶನರಿ ಸೊಸೈಟಿ’ನಿಂದ ಶಾಲೆ ನಡೆಸಲಾಗುತ್ತಿದೆ. ೧ ಸಾವಿರ ೫೦೦ ವಿಧ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಅವರ ಪೈಕಿ ಹೆಚ್ಚಿನ ವಿಧ್ಯಾರ್ಥಿಗಳು ಹಿಂದೂಗಳಾಗಿದ್ದಾರೆ.
೧. ಡಿಸಂಬರ ೬ ರಂದು ಮಧ್ಯಾಹ್ನ ಸುಮಾರು ೩೦೦ ಜನರು ಆ ಶಾಲೆಯ ಹೊರಗೆ ಜಮಾಯಿಸಿದರು ಮತ್ತು ಆಂದೋಲನ ಮಾಡಲಾರಂಭಿಸಿದರು. ಈ ಸಮಯದಲ್ಲಿ ಶಾಲೆಯ ೧೨ನೇಯ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿತ್ತು. ಸ್ವಲ್ಪ ಸಮಯದ ಬಳಿಕ ಈ ಗುಂಪು ಆಕ್ರಮಣಕಾರಿ ಆಯಿತು. ಮತ್ತು ಶಾಲೆಯ ಮೇಲೆ ಕಲ್ಲುತೂರಾಟ ನಡೆಸಿತು.
೨. ಶಾಲೆಯ ಮುಖ್ಯೋಪಾಧ್ಯಾಯರಾದ ಬ್ರದರ ಆಂಥನೀ ಟಾಯನ್ಮಯುಮಕಲ್ರವರು, ಈ ಗುಂಪಿನವರ ಬಳಿ ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿದ್ದವು. ಶಾಲೆಯ ಮೇಲೆ ಕಲ್ಲುತೂರಾಟ ನಡೆಸುವಾಗ ಈ ಗುಂಪಿನವರು ‘ಜಯ ಶ್ರೀರಾಮ’ನ ಘೋಷಣೆಗಳನ್ನು ನೀಡುತ್ತಿದ್ದರು. ನಾವು ಪೊಲೀಸರಲ್ಲಿ ಸುರಕ್ಷೆ ಒದಗಿಸಿಕೊಡಲು ಬೇಡಿಕೆ ನೀಡಿದ್ದೆವು; ಆದರೆ ಅವರು ನಮಗೆ ಆ ಗುಂಪು ಕೇವಲ ಘೋಷಣೆ ಕೂಗುತ್ತಾರೆ ಮತ್ತು ಶಾಂತಿಯಿಂದ ಹೋಗುವರು; ಎಂದು ಹೇಳಿದರು. ಆದರೆ ಗುಂಪು ಧ್ವಂಸ ಮಾಡಿ ಹೋದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದರು ಎಂದು ಹೇಳಿದರು.
೩. ಬ್ರದರ ಆಂಥನೀಯವರ ಆರೋಪವನ್ನು ತಳ್ಳಿಹಾಕಿ ಗಂಜ ಬಸೋಡದ ಉಪವಿಭಾಗ ಪೊಲೀಸ್ ಅಧಿಕಾರಿಗಳಾದ ಭರತ ಭೂಷಣರವರು, ಅದು ಶಾಂತಿಯುತವಾದ ಆಂದೋಲನವಾಗಿತ್ತು; ಆದರೆ ಕೆಲವು ಸಮಾಜಕಂಟಕರು ಅವಕಾಶವನ್ನು ಬಳಸಿಕೊಂಡು ಶಾಲೆಯ ಮೇಲೆ ಕಲ್ಲುತೂರಾಟ ನಡೆಸಿದರು. ಆದ್ದರಿಂದ ಶಾಲೆಯ ಕಟ್ಟಡದಲ್ಲಿ ಕೆಲವು ಗಾಜುಗಳು ಮುರಿಯಿತು. ಶಾಲೆಗೆ ಪೊಲೀಸು ಸಂರಕ್ಷಣೆ ಒದಗಿಸಲಾಗಿದ್ದು ಆರೋಪಿಗಳ ಮೇಲೆ ಕಾರ್ಯಾಚರಣೆ ಮಾಡಲಾಗಿದೆ. ಬಜರಂಗ ದಳದ ೪ ಜನರನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ
ಶಾಲೆಯಲ್ಲಿ ೮ ಹಿಂದೂ ಹೆಣ್ಣುಮಕ್ಕಳ ಮತಾಂತರ !
ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ನಿಲೇಶ ಅಗ್ರವಾಲರವರು ಈ ಆಂದೋಲನದ ಮುಂದಾಳತ್ವ ವಹಿಸಿದ್ದರು. ಅವರು, ಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ, ಅಕ್ಟೋಬರ್ ೩೧ ರಂದು ಶಾಲೆಯಲ್ಲಿರುವ ೮ ಹಿಂದು ಹೆಣ್ಣು ಮಕ್ಕಳನ್ನು ಮತಾಂತರಿಸಲಾಗಿತ್ತು. ಮಕ್ಕಳ ಹಕ್ಕು ಸಂರಕ್ಷಣೆಗೋಸ್ಕರ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಪಿರ್ಯಾಂಕ ಕನುಗೊರವರು ಈ ವಿಷಯವಾಗಿ ವಿದಿಶಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕೂಡ ಬರೆದಿದ್ದರು ಎಂದು ಹೇಳಿದ್ದಾರೆ
ಅಗ್ರವಾಲರವರ ಈ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಬ್ರದರ್ ಆಂಥನಿ, ಮತ್ತು ಪೊಲೀಸ್ ಅಧಿಕಾರಿಗಳಾದ ಭೂಷಣರವರು ತಳ್ಳಿಹಾಕಿದ್ದು ಇದು ಸುಳ್ಳು ಮಾಹಿತಿಯಾಗಿದೆ ಎಂದು ಹೇಳಿದ್ದಾರೆ.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ