ಚರ್ಚಿಸದೆ ಕಾನೂನು ರದ್ದು, ಮಾಡಿದ್ದರಿಂದ ವಿಪಕ್ಷಗಳಿಂದ ಗಲಾಟೆ !
ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !- ಸಂಪಾದಕರು

ನವ ದೆಹಲಿ – ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನವು ನವೆಂಬರ್ 29 ರಿಂದ ಆರಂಭವಾಯಿತು. ಕಲಾಪ ಮೊದಲನೇ ದಿನವೇ ಸಂಸತ್ತಿನಲ್ಲಿ ಕೇಂದ್ರ ಸರಕಾರವು ಈ ಮೊದಲು ಸಂಮ್ಮತಿಸಿರುವ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡುವ ಪ್ರಸ್ತಾಪಕ್ಕೆ ಸಮ್ಮತಿಸಲಾಯಿತು; ಆದರೆ ಈ ಪ್ರಸ್ತಾಪವು ಚರ್ಚಿಸದೆ ಸಂಮ್ಮತಿಸಿರುವುದರಿಂದ ವಿರೋಧಕರು ಕೋಲಾಹಲವುಂಟು ಮಾಡಿದರು. ಈ ಕೃಷಿ ಕಾನೂನು ರದ್ದುಪಡಿಸಲು ಕಳೆದ ವರ್ಷದಿಂದ ರೈತರಿಂದ ಆಂದೋಲನ ನಡೆಯುತ್ತಿತ್ತು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಕಾನೂನು ರದ್ದುಪಡಿಸಿರುವ ಘೋಷಣೆ ಮಾಡಿದ್ದರು. ತದನಂತರ ಕೇಂದ್ರೀಯ ಮಂತ್ರಿಮಂಡಲದ ಸಭೆಯಲ್ಲಿ ಇದಕ್ಕೆ ಸಮ್ಮತಿ ನೀಡಲಾಗಿತ್ತು.
ಸಂಸತ್ ಅಧಿವೇಶನ: ನಾಲ್ಕೇ ನಿಮಿಷದಲ್ಲಿ ಅನುಮೋದನೆ ಪಡೆದ ‘ಕೃಷಿ ಕಾಯ್ದೆಗಳ ರದ್ದು ವಿಧೇಯಕ”
#parliamentwintersession2021 https://t.co/RxCZr44JXX— vijaykarnataka (@Vijaykarnataka) November 29, 2021
ಕಾಂಗ್ರೆಸ್ನ ನಾಯಕ ಮತ್ತು ವಕ್ತಾರರಾದ ರಣದೀಪ ಸಿಂಗ ಸುರ್ಜೇವಾಲಾ ಇವರು ಟ್ವೀಟ್ ಮಾಡಿ, ಚರ್ಚಿಸದೆ ಮೂರು ಕಾನೂನು ರದ್ದು ಮಾಡಲಾಗಿದೆ. ಏನಾದರೂ ಚರ್ಚೆ ನಡೆದಿದ್ದರೆ ಅದಕ್ಕೆ ಉತ್ತರ ನೀಡಬೇಕಾಗುತ್ತಿತ್ತು’ ಎಂದು ಹೇಳಿದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್