ಈ ಹಿಂದೆ, ಸರ್ವೋಚ್ಚ ನ್ಯಾಯಾಲಯವು ಹಲವಾರು ಬಾರಿ ಹಾಗೂ ವಿವಿಧ ಉಚ್ಚ ನ್ಯಾಯಾಲಯಗಳ ವಿವಿಧ ಅರ್ಜಿಗಳನ್ನು ಆಲಿಸುವಾಗ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಸಲಹೆ ನೀಡಿದೆ; ಆದರೆ ಇದುವರೆಗೆ ಯಾವುದೇ ಪಕ್ಷದ ಸರಕಾರವು ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗಿನ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ !- ಸಂಪಾದಕರು

ಪ್ರಯಾಗರಾಜ (ಉತ್ತರಪ್ರದೇಶ) – ದೇಶಕ್ಕೆ ಸಮಾನ ನಾಗರಿಕ ಕಾನೂನಿನ ಅಗತ್ಯವಿದೆ ಮತ್ತು ಸಂವಿಧಾನದ 44 ನೇ ಕಲಮ್ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಅಂತರ್ಧರ್ಮೀಯ ವಿವಾಹಕ್ಕೆ ಸಂಬಂಧಿಸಿದ 17 ಅರ್ಜಿಗಳ ಆಲಿಕೆಯ ಸಮಯದಲ್ಲಿ ಅಭಿಪ್ರಾಯಪಟ್ಟಿದೆ. ‘ಕೇಂದ್ರ ಸರ್ಕಾರವು ಕಲಮ್ 44 ರ ನಿಬಂಧನೆಗಳನ್ನು ಜಾರಿಗೆ ತರಲು ಒಂದು ಸಮಿತಿಯನ್ನು ಸ್ಥಾಪಿಸಲು ವಿಚಾರ ಮಾಡಬೇಕು. ನಾಗರಿಕರಿಗೆ ಒಂದೇ ರೀತಿಯ ಕಾನೂನನ್ನು ನಿರ್ಧರಿಸಲು ರಾಜ್ಯವು ಪ್ರಯತ್ನಿಸಲಿದೆ’, ಎಂದು ನ್ಯಾಯಾಲಯ ಹೇಳಿದೆ.
Allahabad HC asserts ‘Uniform Civil Code is mandatorily required’; asks Centre to act https://t.co/0rOTXGV9w4
— Republic (@republic) November 19, 2021
ಉಚ್ಚ ನ್ಯಾಯಾಲಯವು, ಅಂತಧರ್ಮೀಯ ವಿವಾಹವಾಗುವವರನ್ನು ಅಪರಾಧಿಗಳಂತೆ ವರ್ತಿಸಬಾರದು, ಅದಕ್ಕಾಗಿ ಮೊದಲು ಸಂಸತ್ತಿನಲ್ಲಿ ಒಂದು ಕೌಟುಂಬಿಕ ಕಾನೂನು ರೂಪಿಸುವುದು ಕಾಲಕ್ಕೆ ಅಗತ್ಯವಿದೆ ಸಂಸತ್ತು ಇದರಲ್ಲಿ ಮಧ್ಯಪ್ರವೇಶಿಸಬೇಕು. ದೇಶದಲ್ಲಿ ವಿವಿಧ ಮದುವೆ ಮತ್ತು ನೋಂದಣಿ ಕಾನೂನುಗಳ ಅಗತ್ಯವಿದೆಯೇ ? ಅಥವಾ ಒಂದು ಕೌಟುಂಬಿಕ ಕಾನೂನಿನ ವ್ಯಾಪ್ತಿಗೆ ಇವೆಲ್ಲವೂ ಬರಬೇಕು, ಈ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿದೆ.
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ