ಇದರ ವರದಿಯನ್ನು ಸಾದರಪಡಿಸುವಂತೆ ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಗೆ ಕೇರಳ ಉಚ್ಚ ನ್ಯಾಯಾಲಯದಿಂದ ಆದೇಶ

ಕೊಚ್ಚಿ (ಕೇರಳ) – ಕೇರಳದಲ್ಲಿನ ಶಬರಿಮಲಾ ದೇವಸ್ಥಾನದಿಂದ ‘ಅರಾವಣಾ’ ಮತ್ತು ‘ಉನ್ನಿಯಪ್ಪಂ’ ಎಂಬ ಪ್ರಸಾದದ ತಯಾರಿಯಲ್ಲಿ ‘ಹಲಾಲ್ ಬೆಲ್ಲ’ವನ್ನು ಬಳಸಲಾಗುತ್ತದೆ. ಈ ಪ್ರಸಾದದಲ್ಲಿ ಹಲಾಲ್ ಬೆಲ್ಲದ ಬಳಕೆಯನ್ನು ತಡೆಯಲು ಎಸ್.ಜೆ .ಆರ್ ಕುಮಾರರವರು ಕೇರಳದ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯವು ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಗೆ ಇದರ ವರದಿಯನ್ನು ಸಾದರಪಡಿಸುವ ಆದೇಶ ನೀಡಿದೆ.
‘Using Halal jaggery at Sabarimala Temple’: Kerala HC seeks report https://t.co/D5bw3J2FcD
— TOI Cities (@TOICitiesNews) November 17, 2021
1. ಅರ್ಜಿಯಲ್ಲಿ ಈ ಪ್ರಸಾದಗಳ ವಿತರಣೆಯನ್ನು ತಕ್ಷಣ ತಡೆಯಬೇಕು ಮತ್ತು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದವನ್ನು ತಯಾರಿಸಲು ಈ ಬೆಲ್ಲವನ್ನು ಬಳಸಬಾರದು ಎಂಬ ಆದೇಶವನ್ನು ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಮತ್ತು ಅನ್ನ ಸುರಕ್ಷಾ ಆಯುಕ್ತರಿಗೆ ನೀಡುವಂತೆ ಬೇಡಿಕೆಯನ್ನು ಸಲ್ಲಿಸಲಾಗಿದೆ.
2. ಅರ್ಜಿಯ ಆಲಿಕೆಯ ಸಮಯದಲ್ಲಿ ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಮತ್ತು ಅನ್ನ ಸುರಕ್ಷಾ ಆಯುಕ್ತರು ನ್ಯಾಯಾಲಯಕ್ಕೆ ‘ಅರಾವಣಾ’ ಮತ್ತು ‘ಉನ್ನಿಯಪ್ಪಂ’ ಪ್ರಸಾದವನ್ನು ತಯಾರಿಸಲು ಬಳಸಲಾಗುವ ಬೆಲ್ಲದ ಮತ್ತು ಈ ಎರಡು ಪ್ರಸಾದಗಳ ವಿತರಣೆಯ ಮೊದಲು ಅವುಗಳ ಗುಣಮಟ್ಟವನ್ನು ಪ್ರಯೋಗಶಾಲೆಯಲ್ಲಿ ತಪಾಸಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
3. ಶಬರಿಮಲಾ ದೇವಸ್ಥಾನದಲ್ಲಿ ಎರಡು ತಿಂಗಳುಗಳ ವರೆಗೆ ನಡೆಯುವ ವಾರ್ಷಿಕ ‘ಮಂಡಲಮ್- ಮಕರವಿಳಕ್ಕು ಯಾತ್ರೆ’ಯು ಆರಂಭವಾಗಿದೆ. ಈ ಯಾತ್ರೆಯಲ್ಲಿ ಸಾವಿರಾರು ನಾಗರಿಕರು ಸಹ ಭಾಗಿಗಳಾಗುತ್ತಾರೆ. ಈ ಸಮಯದಲ್ಲಿ ಮೇಲಿನ ಪ್ರಸಾದವನ್ನು ಹಂಚಲಾಗುತ್ತದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ