
‘ಸಾಧಕರ ಸಾಧಕತ್ವವು ಅವರ ನಡತೆ-ಮಾತುಗಳಿಂದ ವ್ಯಕ್ತವಾಗುತ್ತಿರುತ್ತದೆ’. ಸಾಧಕತ್ವ ಇರುವವರ ಪ್ರಭಾವ ಇತರರ ಮೇಲೆ ತಕ್ಷಣ ಆಗುತ್ತದೆ. ಆ ಸಾಧಕರ ನಡತೆ-ಮಾತುಗಳಿಂದ ‘ಚಿಕ್ಕ-ಪುಟ್ಟ ಪ್ರಸಂಗಗಳಲ್ಲಿಯೂ ನಾವು ಸಾಧನೆ ಹೇಗೆ ಮಾಡಬಹುದು ? ಯಾವುದಾದರೊಂದು ಪ್ರಸಂಗದಲ್ಲಿ ಸರಿ ಯಾವುದು ತಪ್ಪು ಯಾವುದು ?’ ಎಂಬುದು ಅವರ ಜೊತೆಗೆ ಸೇವೆ ಮಾಡುವ ಸಾಧಕರಿಗೆ ಕಲಿಯಲು ಸಿಗುತ್ತದೆ. ಆದ್ದರಿಂದ ಅವರ ಸಾಧನೆಯೂ ಚೆನ್ನಾಗಿ ಆಗುತ್ತದೆ. ಆದುದರಿಂದ ಬೌದ್ಧಿಕಶಾಸ್ತ್ರದ ಸ್ಪಂದನಗಳ ಪರಿಣಾಮದಂತೆ (ರೆಝೊನನ್ಸ ಇಫೆಕ್ಟ್ನಂತೆ) ಆ ಸಾಧಕರ ಸಂಪರ್ಕದಲ್ಲಿರುವ ಸಾಧಕರಲ್ಲಿಯೂ ಸಕಾರಾತ್ಮಕ ಬದಲಾವಣೆ ಕಂಡು ಬರುತ್ತದೆ.
‘ವಿಜ್ಞಾನಕ್ಕೆ ಅಧ್ಯಾತ್ಮಶಾಸ್ತ್ರದ ಪ್ರಮಾಣಪತ್ರ ಬೇಕಾಗುವುದಿಲ್ಲ, ಹಾಗಾದರೆ ಅಧ್ಯಾತ್ಮಕ್ಕೆ ವಿಜ್ಞಾನದ ಪ್ರಮಾಣಪತ್ರ ಏತಕ್ಕೆ ?’
– (ಪರಾತ್ಪರ ಗುರು) ಡಾ. ಆಠವಲೆ (೧.೧೦.೨೦೨೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !