ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ ನೇ ಜನ್ಮೋತ್ಸವದ ನಿಮಿತ್ತ …

‘ಜ್ಞಾನಿಗಳ ರಾಜ, ಗುರು ಮಹಾರಾಜ’ ಎಂದು ವರ್ಣಿಸಬಹುದಾದ ವ್ಯಕ್ತಿತ್ವವೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ! ಧರ್ಮ, ಕಲೆ, ಭಾಷೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ವಿಪುಲ ಗ್ರಂಥಗಳನ್ನು ಬರೆದಿರುವ ಅವರು ‘ಜ್ಞಾನಗುರು’ ಆಗಿದ್ದಾರೆ. ಶೀಘ್ರ ಈಶ್ವರಪ್ರಾಪ್ತಿಗಾಗಿ ‘ಗುರುಕೃಪಾಯೋಗ’ ಎಂಬ ಸುಲಭ ಸಾಧನಾಮಾರ್ಗವನ್ನು ನಿರ್ಮಿಸಿ ಸಾಧಕರಿಗೆ ಕಾಲಾನುಸಾರ ಯೋಗ್ಯ ಸಾಧನೆಯನ್ನು ಕಲಿಸುವ ಅವರು ‘ಮೋಕ್ಷಗುರು’ ಆಗಿದ್ದಾರೆ ! ಇತ್ತೀಚಿನ ದಿನಗಳಲ್ಲಿ ‘ವಿಶ್ವ ಕಲ್ಯಾಣಕ್ಕಾಗಿ ಸತ್ತ್ವಗುಣವುಳ್ಳ ಜನರ ‘ಈಶ್ವರೀ ರಾಜ್ಯ’ (ಹಿಂದೂ ರಾಷ್ಟ್ರ, ಸನಾತನ ಧರ್ಮ ರಾಜ್ಯ) ಅತ್ಯಗತ್ಯ’ ಎಂದು ಮೊದಲು ಘೋಷಿಸಿದ ಅವರು ‘ರಾಷ್ಟ್ರಗುರು’ ಆಗಿದ್ದಾರೆ. ಹಿಂದೂ ಸಮಾಜ, ರಾಷ್ಟ್ರ ಮತ್ತು ಧರ್ಮದ ಉನ್ನತಿಯ ದುರ್ದಮ್ಯ ಧ್ಯೇಯವಾದ ಅವರ ವಿಚಾರ ಮತ್ತು ಕೃತಿಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಂಡು ಬರುತ್ತದೆ. ಇದಕ್ಕಾಗಿಯೇ ಅನೇಕ ಹಿಂದುತ್ವವಾದಿಗಳು ಮತ್ತು ಸಂತರು ಅವರನ್ನು ‘ಧರ್ಮ ಗುರು’ ಎಂದು ಪರಿಗಣಿಸುತ್ತಾರೆ. ದೇಶ-ವಿದೇಶಗಳ ವಿವಿಧ ಪಂಥದವರಿಗೆ ಹಿಂದೂ ಧರ್ಮದ ಮಹತ್ವ ಮತ್ತು ಸಾಧನೆ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡುವ ಅವರು ‘ಜಗದ್ಗುರು’ ಆಗಿದ್ದಾರೆ. ಸೂಕ್ಷ್ಮ ಜಗತ್ತಿನ ಬಗ್ಗೆ ಅವರಷ್ಟು ಅಧ್ಯಯನ ಮಾಡಿದವರು ಬಹುಶಃ ಜಗತ್ತಿನಲ್ಲಿ ಸಿಗಲಾರರು. ಹಾಗಾಗಿ ಒಂದರ್ಥದಲ್ಲಿ ‘ಸೂಕ್ಷ್ಮ-ಜಗತ್ತು ಸಂಶೋಧನಾಗುರು’ ಆಗಿದ್ದಾರೆ ! ಅಂತಹ ಪರಾತ್ಪರ ಗುರು ಡಾ. ಆಠವಲೆಯವರ ಜೀವನಚರಿತ್ರೆಯ ಕೆಲವು ಭಾಗ ಕಳೆದ ಸಂಚಿಕೆಯಲ್ಲಿ ನೋಡಿದೆವು. ಇಂದು ಅದರ ಮುಂದಿನ ಭಾಗ ನೋಡೋಣ.
ಭಾಗ – ೩
೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ
೪ ಅ. ‘ವ್ಯಷ್ಟಿ ಸಾಧನೆ’ ಮತ್ತು ‘ಸಮಷ್ಟಿ ಸಾಧನೆ’ ಎಂದರೇನು ?
‘ಸಾಧನೆ’ ಎಂದರೆ ಈಶ್ವರಪ್ರಾಪ್ತಿಗಾಗಿ ಪ್ರತಿದಿನ ಮಾಡುವ ಪ್ರಯತ್ನಗಳು ! ‘ಗುರುಕೃಪಾಯೋಗ’ ಈ ಸಾಧನಾಮಾರ್ಗಕ್ಕನುಸಾರ ಮಾಡಬೇಕಾದ ಸಾಧನೆಯಲ್ಲಿ ‘ವ್ಯಷ್ಟಿ ಸಾಧನೆ’ ಮತ್ತು ‘ಸಮಷ್ಟಿ ಸಾಧನೆ’ ಎಂದು ಎರಡು ವಿಧಗಳಿವೆ. ‘ವ್ಯಷ್ಟಿ ಸಾಧನೆ’ ಎಂದರೆ ‘ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನಗಳು’, ಉದಾ. ನಾಮಜಪ ಮಾಡುವುದು. ‘ಸಮಷ್ಟಿ ಸಾಧನೆ’ ಎಂದರೆ ‘ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನಗಳು’, ಉದಾ. ಸಮಾಜಕ್ಕೆ ಹೋಗಿ ನಾಮದ ಪ್ರಸಾರ ಮಾಡುವುದು, ಧರ್ಮಜಾಗೃತಿ ಮಾಡುವುದು. ಕಾಲಮಹಿಮೆಯ ಪ್ರಕಾರ ಸದ್ಯದ ಕಲಿಯುಗದಲ್ಲಿ ವ್ಯಷ್ಟಿ ಸಾಧನೆಗೆ ಶೇ. ೩೫ ರಷ್ಟು ಮತ್ತು ಸಮಷ್ಟಿ ಸಾಧನೆಗೆ ಶೇ. ೬೫ ರಷ್ಟು ಮಹತ್ವವಿದೆ.
೪ ಆ. ಡಾ. ಆಠವಲೆಯವರ ವ್ಯಷ್ಟಿ ಸಾಧನೆ
೪ ಆ ೧. ನಾಮಜಪ-ಸಾಧನೆ : ‘ಮೊದಲು ಜಿಜ್ಞಾಸೆಯಿಂದ ನಾನು ‘ಅಧ್ಯಾತ್ಮ’ ಈ ವಿಷಯದ ಮೇಲಿನ ಕೆಲವು ಗ್ರಂಥಗಳನ್ನು ಅಧ್ಯಯನ ಮಾಡಿದೆ ಮತ್ತು ‘ನಾಮಜಪ’ವನ್ನು ವ್ಯಷ್ಟಿ ಸಾಧನೆಯಾಗಿ ಮಾಡಿ ನೋಡಿದೆ.’ – ಡಾ. ಆಠವಲೆ (೧೯.೪.೨೦೧೯)
೪ ಆ ೧ ಅ. ನಾಮಜಪದ ಜೊತೆಗೆ ಅದನ್ನು ಬರೆಯುವುದು : ‘ವರ್ಷ ೧೯೮೬ ರಲ್ಲಿ ಕಣಕವಲಿ (ಸಿಂಧುದುರ್ಗ ಜಿಲ್ಲೆ) ಇಲ್ಲಿನ ಶ್ರೀ ಗಣಪತ ಡೋಂಗ್ರೆಗುರೂಜಿ ಅವರನ್ನು ನಾನು ಭೇಟಿಯಾದೆನು. ಆಗ ಅವರು ೧೩ ಕೋಟಿಗಿಂತ ಹೆಚ್ಚು ನಾಮಜಪಿಸಿದ್ದರ್ತು. ‘ನಾನು ನಾಮಜಪಿಸುವ ಜೊತೆಗೆ ಅದನ್ನು ಬರೆಯಬೇಕು’ ಎಂದು ಅವರ ಅಪೇಕ್ಷೆಯಿತ್ತು. ಇದಕ್ಕಾಗಿ ನಾನು ೧೬.೭.೧೯೮೬ ರಿಂದ ೧೯೮೭ ರ ವರೆಗಿನ ಅವಧಿಯಲ್ಲಿ ಸಾಕಷ್ಟು ನಾಮಜಪ ಬರೆದೆ, ಹಾಗೆಯೇ ನಾನು ಡೋಂಗ್ರೆಗುರೂಜಿಯವರಿಗೆ ಬರೆದ ಪತ್ರಗಳ ಮೇಲಿನ ಖಾಲಿ ಜಾಗದಲ್ಲಿಯೂ ನಾಮಜಪ ಬರೆಯುತ್ತಿದ್ದೆ. ವರ್ಷ ೧೯೮೭ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ನನಗೆ ಗುರುಮಂತ್ರವನ್ನು ನೀಡಿ ಅಖಂಡ ನಾಮಸ್ಮರಣೆಯನ್ನು ಹೇಳಿದಾಗಿನಿಂದ ನನ್ನ ನಾಮಜಪ ಬರೆಯುವಿಕೆ ನಿಂತಿತು.’ – ಡಾ. ಆಠವಲೆ (ವರ್ಷ ೨೦೧೩)
೪ ಆ ೨. ಕೇವಲ ಅನುಭವ ಪಡೆಯುವುದಕ್ಕಾಗಿ ಮಾಡಿದ ಇತರ ಸಾಧನೆ
೪ ಆ ೨ ಅ. ಆಸನಗಳು, ತ್ರಾಟಕ, ಪ್ರಾಣಾಯಾಮ ಇತ್ಯಾದಿಗಳನ್ನು ಮಾಡುವುದು : ‘ನಾನು ವರ್ಷ ೧೯೮೭ – ೮೮ ರಲ್ಲಿ ಪ.ಪೂ. ಅಣ್ಣಾ ಕರಂದೀಕರ (ಡಹಾಣು, ಪಾಲ್ಘರ್, ಠಾಣೆ) ಅವರಲ್ಲಿ ಅಧ್ಯಾತ್ಮವನ್ನು ಕಲಿಯಲು ಹೋಗುತ್ತಿದ್ದೆ. ‘ಅಧ್ಯಾತ್ಮದ ಪ್ರತಿಯೊಂದು ವಿಷಯವನ್ನು ಸ್ವತಃ ಅನುಭವಿಸಬೇಕು’ ಎಂದು ಅವರು ಹೇಳುತ್ತಿದ್ದರು. ಅದರಂತೆ ಮುಂದಿನ ವಿಷಯಗಳನ್ನು ನಾನು ಸ್ವತಃ ಮಾಡಿ ನೋಡಿದೆ. ಆಗ ಅನುಭವಕ್ಕೆ ಬಂದ ಅಂಶವನ್ನು ನಾನು ಸನಾತನದ ‘ಆಧ್ಯಾತ್ಮಿಕ ಉನ್ನತಿಗಾಗಿ ಹಠಯೋಗ (೨ ಖಂಡಗಳು)’, ಈ ಗ್ರಂಥದಲ್ಲಿ ನೀಡಿದ್ದೇನೆ.
೧. ಆಸನಗಳು, ಬಂಧ ಮತ್ತು ಮುದ್ರೆ : ಪ್ರತಿದಿನ ಸುಮಾರು ಒಂದು ಗಂಟೆಯಂತೆ ಆರು ತಿಂಗಳು ಮಾಡಿದೆ.
೨. ತ್ರಾಟಕ : ಪ್ರತಿದಿನ ಸುಮಾರು ಅರ್ಧ ಗಂಟೆಯಂತೆ ಆರು ತಿಂಗಳು ಮಾಡಿದೆ.
೩. ಪ್ರಾಣಾಯಾಮ : ಪ್ರತಿದಿನ ಸುಮಾರು ಅರ್ಧ ಗಂಟೆಯಂತೆ ಆರು ತಿಂಗಳು ಮಾಡಿದೆ.
೪ ಆ ೨ ಆ. ನವರಾತ್ರಿಯಲ್ಲಿ ಉಪವಾಸ ಮಾಡುವುದು : ಉಪವಾಸದ ಅನುಭವ ಪಡೆಯಲು ನಾನು ವರ್ಷ ೧೯೯೦ ರಲ್ಲಿ ನವರಾತ್ರಿಯಲ್ಲಿ ಒಂಬತ್ತು ದಿನ ಬೆಳಗ್ಗೆ ಮತ್ತು ಸಂಜೆ ಕೇವಲ ಒಂದೊಂದು ಲೋಟ (ಗ್ಲಾಸ್) ಲಸ್ಸಿ ಕುಡಿದೆ.’
೫ ಆ ೨ ಇ. ದೇಹಧಾರಿ ಗುರುಗಳ ಪ್ರತ್ಯಕ್ಷ ಸೇವೆ ಮಾಡುವುದು : ‘ವರ್ಷ ೧೯೯೧ ರ ವರೆಗೆ ನಾನು ಚಿತ್ತಶುದ್ಧಿಗಾಗಿ ಸಗುಣದ, ಅಂದರೆ ಪ್ರಮುಖವಾಗಿ ದೇಹಧಾರಿ ಗುರುಗಳ ಪ್ರತ್ಯಕ್ಷ ಸೇವೆ ಮಾಡಿದೆ. ನಂತರ ವರ್ಷ ೧೯೯೫ ರಲ್ಲಿ ಗುರುಗಳ ಕೊನೆಯ ಅನಾರೋಗ್ಯದ ಸಮಯದಲ್ಲಿ ೮ ತಿಂಗಳು ಅವರ ಜೊತೆಗಿದ್ದು ಅವರ ಸೇವೆ ಮಾಡಿದೆ.’ – ಡಾ. ಆಠವಲೆ (ವರ್ಷ ೨೦೦೮)
೪ ಇ. ಡಾ. ಆಠವಲೆಯವರ ಸಮಷ್ಟಿ ಸಾಧನೆ
೪ ಇ ೧. ಗುರುಪ್ರಾಪ್ತಿಗಿಂತ ಮೊದಲು ಮಾಡಿದ ಸಮಷ್ಟಿ ಸಾಧನೆ : ಸಾಧನೆಯ ಮಹತ್ವ ತಿಳಿದ ನಂತರ ಡಾ. ಆಠವಲೆಯವರು ತಮ್ಮ ಬಳಿ ಬರುವ ರೋಗಿಗಳಿಗೆ ಸಾಧನೆ ಹೇಳಲು ಪ್ರಾರಂಭಿಸಿದರು. ಡಾ. ಆಠವಲೆಯವರು ಇತರ ಡಾಕ್ಟರುಗಳಿಗಾಗಿ ಸಂಮೋಹನಶಾಸ್ತ್ರದ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಿದ್ದರು. ಆ ಉಪನ್ಯಾಸಗಳಿಂದಲೂ ಅವರು ‘ಸಂಮೋಹನಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ’ ಈ ವಿಷಯವನ್ನು ಮಂಡಿಸಲು ಪ್ರಾರಂಭಿಸಿದರು. ವರ್ಷ ೧೯೮೬ ರಿಂದ ಅವರು ತಮ್ಮ ಚಿಕಿತ್ಸಾಲಯದಲ್ಲಿ ಅಧ್ಯಾತ್ಮದ ಅಭ್ಯಾಸವರ್ಗಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಮಾರ್ಚ್ ೧೯೮೭ ರಲ್ಲಿ ಅವರು ಅಧ್ಯಾತ್ಮಶಾಸ್ತ್ರದ ಬಗೆಗಿನ ಗ್ರಂಥಗಳನ್ನು ಸಂಕಲನ ಅದನ್ನು ಸಾಧಕರಿಗೆ ಲಭ್ಯವಾಗುವಂತೆ ಮಾಡಿದರು.
೪ ಇ ೨. ಗುರುಪ್ರಾಪ್ತಿಯ ನಂತರ ಮಾಡಿದ ಸಮಷ್ಟಿ ಸಾಧನೆ
೪ ಇ ೨ ಅ. ಗುರು ಪ.ಪೂ. ಭಕ್ತರಾಜ ಮಹಾರಾಜರು ಡಾ. ಆಠವಲೆ ಯವರಿಗೆ ಸಮಷ್ಟಿ ಸಾಧನೆಯನ್ನು ಹಂತಹಂತವಾಗಿ ಮಾಡಲು ಕಲಿಸುವುದು : ‘ಗುರುಪ್ರಾಪ್ತಿಯ ನಂತರ ನನ್ನ ಸಮಷ್ಟಿ ಸಾಧನೆ ಬಹಳಷ್ಟು ಹೆಚ್ಚಾಯಿತು. ನಾನು ‘ಗುರುಕೃಪಾಯೋಗ’ಕ್ಕನುಸಾರ ಸಾಧನೆ ಮಾಡುವಾಗ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಈ ರಾಜ್ಯಗಳಿಗೆ ಹೋಗಿ ಸಾಧಕರಿಗೆ ಸಮಾಜದಲ್ಲಿ ಸತ್ಸಂಗ ತೆಗೆದುಕೊಂಡು ಸಾಧನೆಯನ್ನು ಪ್ರಸಾರ ಮಾಡಲು ಹೇಳುತ್ತಿದ್ದೆ.
ಆಗ ನನಗೆ ಇತರ ಸಂತರು ವ್ಯಷ್ಟಿ ಸಾಧನೆಯನ್ನು ಹೇಳುತ್ತಾರೆ, ಆದರೆ ನಾನು ಸಾಧಕರಿಂದ ಸಮಷ್ಟಿ ಸಾಧನೆಯನ್ನು ಮಾಡಿಸುತ್ತೇನೆ ಎಂದು ಅನಿಸುತ್ತಿತ್ತು ! ಇಂದು ನನಗೆ ನೆನಪಾಗುತ್ತದೆ, ಪ.ಪೂ. ಭಕ್ತರಾಜ ಮಹಾರಾಜರು ನನಗೆ ೧೯೯೨ ನೇ ವರ್ಷದಲ್ಲಿ ‘ಈಗ ಮಹಾರಾಷ್ಟ್ರದಾದ್ಯಂತ ಅಧ್ಯಾತ್ಮದ ಪ್ರಸಾರ ಮಾಡಿ’ ಮತ್ತು ೧೯೯೩ ರಲ್ಲಿ ‘ಈಗ ಭಾರತದಾದ್ಯಂತ ಅಧ್ಯಾತ್ಮದ ಪ್ರಸಾರ ಮಾಡಿ’ ಎಂದಿದ್ದರು. – (ಪರಾತ್ಪರ ಗುರು) ಡಾ. ಆಠವಲೆ
ಆಗ ನನ್ನ ಚತುಷ್ಚಕ್ರ ವಾಹನ ಹಳೆಯದಾಗಿದ್ದರಿಂದ ಅವರು ನನಗೆ ಪ್ರಸಾರಕ್ಕಾಗಿ ಅವರ ಚತುಶ್ಚಕ್ರ ವಾಹನವನ್ನು ನೀಡಿದರು ಮತ್ತು ನನ್ನ ಬಳಿ ಪೆಟ್ರೋಲ್ಗೆ ಹಣ ಇಲ್ಲದ ಕಾರಣ ಹಣವನ್ನೂ ನೀಡಿದರು. ಮುಂದೆ ೧೯೯೫ ರಲ್ಲಿ ಅವರು, ‘ಈಗ ಜಗತ್ತಿನಾದ್ಯಂತ ಅಧ್ಯಾತ್ಮ ಪ್ರಸಾರ ಮಾಡಿ !’ ಎಂದು ಹೇಳಿದರು. ಈ ರೀತಿ ಅವರೇ ನನಗೆ ಸಮಷ್ಟಿ ಸಾಧನೆ ಮಾಡಲು ಕಲಿಸಿದರು ಮತ್ತು ಸಮಷ್ಟಿ ಸಾಧನೆಗೆ ಆಶೀರ್ವಾದವನ್ನೂ ಮಾಡಿದರು.
ನಾನು ಸ್ಥಾಪಿಸಿದ ಸಂಸ್ಥೆಗಳು, ಸಂಕಲನ ಮಾಡಿದ ಗ್ರಂಥಗಳು, ನಿರ್ಮಿಸಿದ ಆಶ್ರಮಗಳು ಮತ್ತು ಧರ್ಮಜಾಗೃತಿಪರ ಪ್ರಸಾರಸಾಹಿತ್ಯ, ನಾನು ಮಾಡಿದ ಆಧ್ಯಾತ್ಮಿಕ ಸಂಶೋಧನೆ, ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಯತ್ನ ಇತ್ಯಾದಿ ಸಮಷ್ಟಿ ಕಾರ್ಯಗಳ ವಿವೇಚನೆಯನ್ನು ಪ್ರಸ್ತುತ ಗ್ರಂಥದಲ್ಲಿ ಆಯಾ ಪ್ರಕರಣಗಳಲ್ಲಿ ಮಾಡಲಾಗಿದ್ದು, ಈ ಎಲ್ಲ ಕಾರ್ಯವೂ ನನ್ನ ಸಮಷ್ಟಿ ಸಾಧನೆಯೇ ಆಗಿದೆ ಮತ್ತು ಅದು ಗುರುಗಳ ಕೃಪಾಶೀರ್ವಾದದಿಂದಲೇ ಆಗುತ್ತಿದೆ.’ – (ಪರಾತ್ಪರ ಗುರು) ಡಾ. ಆಠವಲೆ (೨೬.೩.೨೦೨೫)
೪ ಇ ೨ ಆ. ಗುರುಗಳು ನೀಡಿದ ರಾಮನಾಮದ ಗುರುಮಂತ್ರದಿಂದ ಡಾ. ಆಠವಲೆಯವರ ಮನಸ್ಸಿನಲ್ಲಿ ರಾಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಯ ವಿಚಾರಗಳು ಬರುವುದು: ‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ನನಗೆ, ”ಪ.ಪೂ. ಬಾಬಾರವರು (ಪ.ಪೂ. ಭಕ್ತರಾಜ ಮಹಾರಾಜರು) ನನಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಗುರುಮಂತ್ರವನ್ನು ನೀಡಿದರು. ಆದ್ದರಿಂದ ನಾನು ‘ಹಿಂದೂ ರಾಷ್ಟ್ರದ ಸ್ಥಾಪನೆ’ ಮಾಡಬೇಕಾಗಿದೆ, ಅಂದರೆ ಸಮಾಜದಲ್ಲಿನ ರಜ-ತಮ ಕಡಿಮೆ ಮಾಡಿ ಸತ್ತ್ವಗುಣದ ಸ್ಥಾಪನೆ ಮಾಡಬೇಕಾಗಿದೆ’’ ಎಂದು ಹೇಳಿದರು. – (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (ಮೇ ೨೦೧೭)
(‘ಪ್ರಭು ಶ್ರೀರಾಮಚಂದ್ರ ಎಂದರೆ ಧರ್ಮಸಂಸ್ಥಾಪನೆಯ ಸಾಕ್ಷಾತ್ ಮೂರ್ತಿಮಂತ ಉದಾಹರಣೆ! ಪ. ಪೂ. ಬಾಬಾರವರು ತಮ್ಮ ಶಿಷ್ಯ ಡಾ. ಆಠವಲೆಯವರಿಂದ ಭವಿಷ್ಯತ್ ಕಾಲದಲ್ಲಿ ಆಗುವ ಧರ್ಮಸಂಸ್ಥಾಪನೆಯ ಕಾರ್ಯವನ್ನು ಗುರುತಿಸಿಯೇ ಅವರಿಗೆ ಶ್ರೀರಾಮನ ಗುರುಮಂತ್ರವನ್ನು ನೀಡಿದ್ದರು. ಪ.ಪೂ. ಬಾಬಾರವರ ಸಂಕಲ್ಪ, ಡಾ. ಆಠವಲೆಯವರು ಭಾವಪೂರ್ಣ ವಾಗಿ ಮಾಡಿದ ನಾಮಜಪ ಮತ್ತು ಸಮರ್ಪಿತ ಭಾವದಿಂದ ಮಾಡಿದ ಸಮಷ್ಟಿ ಸಾಧನೆ, ಇವುಗಳಿಂದ ಅವರಲ್ಲಿ ಶ್ರೀರಾಮತತ್ತ್ವ ಕಾರ್ಯನಿರತವಾಯಿತು. ಆದ್ದರಿಂದ ಅವರು ರಾಮರಾಜ್ಯದ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವ ಮಹಾನ್ ಕಾರ್ಯವನ್ನು ಮಾಡುತ್ತಿದ್ದಾರೆ. ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಶ್ರೀರಾಮನ ಅಂಶವಿದೆ. ಅವರೇ ಈ ಭೂಮಿಯ ಮೇಲೆ ರಾಮರಾಜ್ಯವನ್ನು (ಹಿಂದೂ ರಾಷ್ಟ್ರವನ್ನು) ಸ್ಥಾಪಿಸಲಿದ್ದಾರೆ’, ಎಂದು ೩.೨.೨೦೨೧ ಈ ದಿನದಂದು ಆದ ಸಪ್ತರ್ಷಿ ಜೀವನಾಡಿಪಟ್ಟಿ ವಾಚನದಲ್ಲಿ ಸ್ಪಷ್ಟವಾಯಿತು.’ – [ಪೂ.] ಶ್ರೀ ಸಂದೀಪ ಆಳಶಿ, ೧೦.೧೦.೨೦೨೨)
೫. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೆಲವು ವೈಶಿಷ್ಟ್ಯಗಳು
ಸಂತರ ‘ಸಂತತ್ವ’ವು ಅವರ ವೈಶಿಷ್ಟ್ಯಗಳಿಂದ ತಿಳಿದುಬರು ತ್ತದೆ. ಪ್ರಸ್ತುತ ಪ್ರಕರಣದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವ) ಅವರ ಕೆಲವು ಆಯ್ದ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಇದರಿಂದ ಅವರ ಸಂತತ್ವದ ಸಾಕ್ಷಿ ಮನಸ್ಸಿಗೆ ಮನದಟ್ಟಾಗುತ್ತದೆ. ಗುರುದೇವರ ದೇಹದಲ್ಲಿ, ಅವರು ಸ್ಪರ್ಶಿಸಿದ ವಸ್ತುಗಳಲ್ಲಿ ಮತ್ತು ಅವರು ವಾಸಿಸುತ್ತಿದ್ದ ವಾಸಸ್ಥಾನದಲ್ಲಿ ನಡೆಯುತ್ತಿರುವ ವಿವಿಧ ಬುದ್ಧಿಗೆ ನಿಲುಕದ ಬದಲಾವಣೆಗಳನ್ನು ತಿಳಿದುಕೊಂಡ ನಂತರ, ಗುರುದೇವರ ಮಹತ್ವವು ಪ್ರಜ್ಞಾ ಪೂರ್ವಕವಾಗಿ ಮನಸ್ಸಿಗೆ ಬರುತ್ತದೆ. ಸೂಕ್ಷ್ಮಜಗತ್ತಿನ ಒಂದು ನೂತನ ಮುಖವನ್ನು ಪರಿಚಯಿಸುವ ಈ ವಿವೇಚನೆಯೇ ಈ ಪ್ರಕರಣದ ವಿಶೇಷತೆಯಾಗಿದೆ.
೫ ಅ. ಸಾಧಕರು ವ್ಯಕ್ತಿನಿಷ್ಠೆಯಲ್ಲಿ ಸಿಲುಕದೇ ತತ್ತ್ವನಿಷ್ಠರಾಗಿರಲು ಕಲಿಸುವುದು: ‘ಸಾಧಕರು ಗುರುಗಳ ಸಗುಣ ರೂಪದಲ್ಲಿ (ದೇಹಧಾರಿ) ಸಿಲುಕಬಾರದು; ಆದ್ದರಿಂದ ಪ.ಪೂ. ಡಾಕ್ಟರು ಸಾಧಕರಿಗೆ ಹೇಳುತ್ತಾರೆ, ‘ನನ್ನ ದೇಹದಲ್ಲಿ ಸಿಲುಕಬೇಡಿ; ಶ್ರೀಕೃಷ್ಣನ ಕಡೆಗೆ ಹೋಗಿ. ಶ್ರೀಕೃಷ್ಣನ ಭಕ್ತಿ ಮಾಡಿ. ‘ಕಾಲಾನುಸಾರ ಧರ್ಮಸಂಸ್ಥಾಪನೆಯ ಕಾರ್ಯವಾಗುವುದು ಆವಶ್ಯಕವಾಗಿದ್ದರಿಂದ, ಧರ್ಮಸಂಸ್ಥಾಪನೆಯ ದೇವತೆಯಾಗಿ ಭಗವಾನ್ ಶ್ರೀಕೃಷ್ಣನನ್ನು ಆರಾಧಿಸಲು ಪ.ಪೂ. ಡಾಕ್ಟರರು ಹೇಳಿದ್ದಾರೆ. ಕೊನೆಗೆ ಮೋಕ್ಷ ಪಡೆಯಲು ಗುರುಗಳ ಆಧಾರ ಮತ್ತು ಕೋಲನ್ನು ಬಿಡಬೇಕಾಗುತ್ತದೆ. ಆದ್ದರಿಂದ ಆರಂಭದಿಂದ ಸಗುಣದಲ್ಲಿನ ಗುರುಗಳ ಆಧಾರವನ್ನು ಪಡೆಯದೆ ನಿರ್ಗುಣದಲ್ಲಿರುವ ಈಶ್ವರನ ಆಧಾರವನ್ನು ಪಡೆಯಲು ಪ.ಪೂ. ಡಾಕ್ಟರರು ಕಲಿಸಿದ್ದಾರೆ.’ – ಡಾ. ವಸಂತ ಬಾಳಾಜಿ ಆಠವಲೆ (ಈಗಿನ ಸದ್ಗುರು [ದಿವಂಗತ] ಡಾ. ವಸಂತ ಬಾಳಾಜಿ ಆಠವಲೆ, ಗುರುದೇವರ ಹಿರಿಯ ಸಹೋದರ), ಚೆಂಬೂರು, ಮುಂಬೈ. (೨೩.೯.೨೦೧೧)
೫ ಆ. ಪ್ರಸಂಗಾನುಸಾರ ಆಧ್ಯಾತ್ಮಿಕ ಭಾವದ ವಿವಿಧ ಸ್ಥಿತಿಗಳಲ್ಲಿರುವುದು: ‘ಪ.ಪೂ. ಡಾಕ್ಟರ್ ಅವರಲ್ಲಿ ಪ್ರಸಂಗಾನುಸಾರ ಬೇರೆ ಬೇರೆ ಭಾವಗಳು ವ್ಯಕ್ತವಾಗುತ್ತವೆ.
೫ ಆ ೧. ಬಾಲಕ ಭಾವ : ಸಹಜಾವಸ್ಥೆಯಲ್ಲಿ ಮುಗ್ಧತೆಯಿಂದ ವರ್ತಿಸುವುದು
೫ ಆ ೨. ಗೌರವಭಾವ : ವಯೋವೃದ್ಧರು, ಜ್ಞಾನವೃದ್ಧರು ಮತ್ತು ತಪೋವೃದ್ಧ ವ್ಯಕ್ತಿಗಳು ಹಾಗೂ ಎಲ್ಲಾ ಸಂತರು ಮತ್ತು ಕುಟುಂಬದವರೊಂದಿಗೆ ಗೌರವಭಾವದಿಂದ ವರ್ತಿಸುವುದು
೫ ಆ ೩. ಸೇವಾಭಾವ : ಸೇವೆ ಮಾಡುವಾಗ ‘ಇದು ಗುರುಗಳ ಕಾರ್ಯವಾಗಿದೆ’ ಎಂಬ ಭಾವ ಮನಸ್ಸಿನಲ್ಲಿರುವುದು
೫ ಆ ೪. ಕೃತಜ್ಞತಾಭಾವ : ಸನಾತನ ಸಂಸ್ಥೆಗೆ ಸಹಾಯ ಮಾಡುವ ಮತ್ತು ಧರ್ಮಕಾರ್ಯದಲ್ಲಿ ಭಾಗವಹಿಸುವ ಎಲ್ಲಾ ಸಂತರ ಬಗ್ಗೆ ಕೃತಜ್ಞತಾಭಾವವಿರುವುದು
೫ ಆ ೫. ಭಕ್ತಿಭಾವ ಮತ್ತು ಶರಣಾಗತಭಾವ : ಗುರು, ದೇವತೆ ಮುಂತಾದವರ ಬಗ್ಗೆ ಭಕ್ತಿಭಾವ ಮತ್ತು ಶರಣಾಗತ ಭಾವವಿರುವುದು
೫ ಆ ೬. ಶಿಷ್ಯಭಾವ : ಪ.ಪೂ. ಭಕ್ತರಾಜ ಮಹಾರಾಜ, ಪ.ಪೂ.ರಾಮಾನಂದ ಮಹಾರಾಜ ಹಾಗೂ ಆಶ್ರಮಕ್ಕೆ ಬರುವ ಸಂತರ ಬಗ್ಗೆ ಅವರ ಮನಸ್ಸಿನಲ್ಲಿ ಶಿಷ್ಯಭಾವವಿರುವುದು
೫ ಆ ೭. ಸಮಷ್ಟಿ ಭಾವ : ಸಮಷ್ಟಿಗಾಗಿ ಕಲ್ಯಾಣಕಾರಿಭಾವ, ಉದಾ. ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸಾಧಕರು ಮತ್ತು ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ ಮಾಡುವುದು
೫ ಆ ೮. ನಿರಪೇಕ್ಷ ಪ್ರೇಮಭಾವ (ಪ್ರೀತಿ) : ಸಾಧಕರು, ಸಸ್ಯಗಳು ಮತ್ತು ಪ್ರಾಣಿ-ಪಕ್ಷಿ ಸೇರಿದಂತೆ ಎಲ್ಲಾ ಜೀವಿಗಳ ಬಗ್ಗೆ ಪ್ರೀತಿ ಇರುವುದು
೫ ಆ ೯. ಸಾಕ್ಷಿಭಾವ: ಬಾಹ್ಯ ಪ್ರಸಂಗಗಳನ್ನು ‘ಗುರುವಿನ ಇಚ್ಛೆ ಅಥವಾ ಈಶ್ವರೇಚ್ಛೆ’ ಎಂದು ಸಾಕ್ಷಿಭಾವದಿಂದ ನೋಡುವುದು
೫ ಇ. ಮನೋಲಯದ ಸ್ಥಿತಿಯನ್ನು ಅನುಭವಿಸುವುದು : ಸಾಧನೆಯಿಂದ ಪ.ಪೂ. ಡಾಕ್ಟರರ ಮನೋಲಯವಾಗಿರುವುದರಿಂದ ಅವರ ಮನಸ್ಸಿನಲ್ಲಿ ತಮಗೆ ಸಂಬಂಧಿಸಿದ ವಿಚಾರಗಳಿರುವುದಿಲ್ಲ. ಅವರ ಮನಸ್ಸಿಗೆ ಬರುವ ವಿಚಾರಗಳು ವಿಶ್ವಮನಸ್ಸಿನಿಂದ ಸ್ವೀಕರಿಸಲ್ಪಟ್ಟಿರುತ್ತವೆ. ವಿಶ್ವಮನಸ್ಸು ಎಂದರೆ ಈಶ್ವರನ ಮನಸ್ಸು. ಅವರ ಮನಸ್ಸಿಗೆ ವಿಚಾರಗಳು ಬಂದರೆ, ಅವು ವಿಶ್ವಕಲ್ಯಾಣಕ್ಕೆ (ಸಾಧಕರ ಆಧ್ಯಾತ್ಮಿಕ ಉನ್ನತಿ ಹಾಗೂ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ಬಗ್ಗೆ) ಸಂಬಂಧಿಸಿದವುಗಳಾಗಿರುತ್ತವೆ. ಇಲ್ಲದಿದ್ದರೆ ಹೆಚ್ಚು ಸಮಯ ಅವರು ನಿರ್ವಿಚಾರ ಸ್ಥಿತಿಯಲ್ಲಿರುತ್ತಾರೆ.
೫ ಈ. ವಿಶ್ವಬುದ್ಧಿಯಿಂದ ನಿರ್ಣಯ ತೆಗೆದುಕೊಳ್ಳುವುದು : ಪ.ಪೂ. ಡಾಕ್ಟರ್ ಅವರ ಸಾಧನೆಯಿಂದ ಬುದ್ಧಿಲಯವಾಗಿರುವುದರಿಂದ ಅವರು ತಮ್ಮ ಸ್ವಂತ ಬುದ್ಧಿಯಿಂದಲ್ಲ, ವಿಶ್ವಬುದ್ಧಿಯಿಂದ ನಿರ್ಣಯ ತೆಗೆದುಕೊಳ್ಳುತ್ತಾರೆ. ವಿಶ್ವಬುದ್ಧಿ ಎಂದರೆ ಈಶ್ವರನ ಬುದ್ಧಿ. ಪ.ಪೂ. ಡಾಕ್ಟರ್ ಅವರ ಬುದ್ಧಿಯು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುವುದರಿಂದ ಅವರ ಉತ್ತರ ಮತ್ತು ವಿಶ್ವ ಬುದ್ಧಿಯು ನೀಡಿದ ಉತ್ತರ ಒಂದೇ ಆಗಿರುತ್ತದೆ. ಬಹಳಷ್ಟು ಸಾಧಕರಿಗೆ ತಮಗೆ ಪ.ಪೂ. ಡಾಕ್ಟರ್ ನೀಡಿದ ಉತ್ತರ ಮತ್ತು ಶ್ರೀಕೃಷ್ಣನು ಸೂಕ್ಷ್ಮದಿಂದ ನೀಡಿದ ಉತ್ತರ ಒಂದೇ ಆಗಿರುತ್ತದೆ, ಎಂಬ ಅನುಭವ ಬಂದಿದೆ.’
– ಡಾ. ವಸಂತ ಬಾಳಾಜಿ ಆಠವಲೆ (ಈಗಿನ ಸದ್ಗುರು [ದಿವಂಗತ] ಡಾ. ವಸಂತ ಬಾಳಾಜಿ ಆಠವಲೆ), ಚೆಂಬೂರು, ಮುಂಬೈ. (ವರ್ಷ ೨೦೧೩)
೫ ಈ ೧. ಗುರುದೇವರು ಹೇಳಿದಂತೆ ವರ್ಷ ೨೦೧೩ ರಲ್ಲಿ ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಅವರು ನೇಪಾಳಕ್ಕೆ ಭೇಟಿ ನೀಡುವುದು ಮತ್ತು ಮುಂದೆ ಅದರ ಕಾರ್ಯಕಾರಣಭಾವ ತಿಳಿಯುವುದು : ‘ವರ್ಷ ೨೦೧೩ ರಲ್ಲಿ ಪರಾತ್ಪರ ಗುರು ಡಾ. ಆಠವಲೆ ಅವರು ಸದ್ಗುರು (ಸೌ.) ಅಂಜಲಿ ಗಾಡಗೀಳ (ಈಗಿನ ಶ್ರೀಚಿತ್ಶಕ್ತಿ [ಸೌ.] ಅಂಜಲಿ ಗಾಡಗೀಳ) ಅವರಿಗೆ ನೇಪಾಳಕ್ಕೆ ಭೇಟಿ ನೀಡಲು ಹೇಳಿದರು. ಆ ಸಮಯದಲ್ಲಿ ಅವರು ಸದ್ಗುರು (ಸೌ.) ಗಾಡಗೀಳ ಅವರಿಗೆ, ”ಮುಂದೆ ಆಪತ್ಕಾಲ ಬರುತ್ತದೆ. ಅದಕ್ಕೂ ಮುನ್ನ ನೀವು ನೇಪಾಳಕ್ಕೆ ಹೋಗಿ ಅಲ್ಲಿನ ದೇವಸ್ಥಾನಗಳು, ಐತಿಹಾಸಿಕ ಕಟ್ಟಡಗಳು ಇತ್ಯಾದಿಗಳ ಚಿತ್ರೀಕರಣ ಮಾಡಿ. ‘ಆಪತ್ಕಾಲದಲ್ಲಿ ಈ ಎಲ್ಲಾ ದೇವಸ್ಥಾನಗಳು ಇತ್ಯಾದಿಗಳು ಇರುತ್ತವೆಯೋ ಇಲ್ಲವೋ ?’ ಎಂಬುದು ನಿಶ್ಚಿತ ಇಲ್ಲ’ ಎಂದು ಹೇಳಿದರು.
ಗುರುದೇವರು ಹೇಳಿದಂತೆ ಸದ್ಗುರು (ಸೌ.) ಗಾಡಗೀಳ ಮತ್ತು ಕೆಲವು ಸಾಧಕರು ಮಾರ್ಚ್ ೨೦೧೩ ರಲ್ಲಿ ನೇಪಾಳಕ್ಕೆ ಹೋಗಿ ಅಲ್ಲಿನ ದೇವಸ್ಥಾನಗಳು, ದೈವೀ ಕ್ಷೇತ್ರಗಳು ಮತ್ತು ಐತಿಹಾಸಿಕ ಸ್ಮಾರಕಗಳ ಚಿತ್ರೀಕರಣ ಮಾಡಿದರು. ನಂತರ ಏಪ್ರಿಲ್ ೨೦೧೫ ರಲ್ಲಿ ನೇಪಾಳದಲ್ಲಿ ದೊಡ್ಡ ಭೂಕಂಪವಾಯಿತು ಮತ್ತು ಅಲ್ಲಿನ ಅನೇಕ ದೇವಸ್ಥಾನಗಳು ಮತ್ತು ಐತಿಹಾಸಿಕ ಸ್ಮಾರಕಗಳು ನಾಶವಾದವು. ಆ ಸಮಯದಲ್ಲಿ ೯ ಸಾವಿರ ಜನರು ಮರಣ ಹೊಂದಿದರು ಮತ್ತು ೩೫ ಲಕ್ಷ ಜನರು ನಿರಾಶ್ರಿತರಾದರು.’ – ಶ್ರೀ. ವಿನಾಯಕ ಶಾನಭಾಗ (ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರೊಂದಿಗೆ ಸೇವೆ ಮಾಡುವ ಸನಾತನದ ಸಾಧಕ), ಚೆನ್ನೈ, ತಮಿಳುನಾಡು. (೬.೨.೨೦೧೯)
(ನೇಪಾಳದಲ್ಲಿ ಭೂಕಂಪವಾಗುವ ೨ ವರ್ಷಗಳ ಮೊದಲೇ ಗುರುದೇವರ ಮನಸ್ಸಿಗೆ ನೇಪಾಳಕ್ಕೆ ಭೇಟಿ ನೀಡುವ ವಿಚಾರ ಬಂತು.ಇದರಿಂದ ನೇಪಾಳದಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಯಿತು. ‘ಗುರುದೇವರಿಗೆ ವಿಶ್ವಬುದ್ಧಿಯಿಂದ ಎಲ್ಲವೂ ತಿಳಿಯುತ್ತದೆ’ ಎಂಬುದಕ್ಕೆ ಇದೊಂದು ಸುಂದರ ಉದಾಹರಣೆಯಾಗಿದೆ.)
೫ ಉ. ಸೂಕ್ಷ್ಮದಲ್ಲಿ ತಿಳಿಯುವ ಸಾಮರ್ಥ್ಯ
೫ ಉ ೧. ದೈನಿಕ ‘ಸನಾತನ ಪ್ರಭಾತ’ದ ಬರಹಗಳ ಮೇಲೆ ಸುಮ್ಮನೆ ದೃಷ್ಟಿ ಹಾಯಿಸಿದಾಗ ೨-೩ ನಿಮಿಷಗಳಲ್ಲಿಯೇ ೧೦-೧೨ ತಪ್ಪುಗಳು ಗಮನಕ್ಕೆ ಬರುವುದು : ‘ವರ್ಷ ೧೯೯೯ ರಲ್ಲಿ ದೈನಿಕ ‘ಸನಾತನ ಪ್ರಭಾತ’ ಪ್ರಾರಂಭವಾಗಿತ್ತು. ದೈನಿಕದ ಪ್ರತಿಯೊಂದು ಪುಟ ಸಿದ್ಧವಾದ ನಂತರ ನಾವು ಅದನ್ನು ಪರಾತ್ಪರ ಗುರು ಡಾ. ಆಠವಲೆ ಅವರಿಗೆ ತೋರಿಸುತ್ತಿದ್ದೆವು. ಒಂದು ‘ಎ-೩’ ಅಥವಾ ‘ಎ-೪’ ಗಾತ್ರದ ಕಾಗದದ ಮೇಲೆ ಎಲ್ಲಾ ಬರಹಗಳು ಇರುತ್ತಿದ್ದವು. ಅವರಿಗೆ ತೋರಿಸಿದ ನಂತರ ಅವರು ಆ ಕಾಗದದ ಮೇಲೆ ವೇಗವಾಗಿ ದೃಷ್ಟಿ ಹಾಯಿಸುತ್ತಿದ್ದರು ಮತ್ತು ಮುಂದಿನ ೨-೩ ನಿಮಿಷಗಳಲ್ಲಿ ಅದರಲ್ಲಿ ಕಡಿಮೆಯೆಂದರೂ ೧೦ ರಿಂದ ೧೨ ತಪ್ಪುಗಳನ್ನು ತೋರಿಸುತ್ತಿದ್ದರು. ಒಮ್ಮೆ ನಾನು ಅವರಿಗೆ, ”ಎಲ್ಲಾ ಬರಹಗಳನ್ನು ಓದದೇ ಅದರಲ್ಲಿನ ತಪ್ಪುಗಳು ನಿಮ್ಮ ಗಮನಕ್ಕೆ ಹೇಗೆ ಬರುತ್ತವೆ ?’’ ಎಂದು ಕೇಳಿದೆ. ಅದಕ್ಕೆ ಅವರು, ”ಯಾವ ಯಾವ ಸ್ಥಳದಲ್ಲಿ ತಪ್ಪು ಇರುತ್ತದೆಯೋ, ಅದೇ ಸ್ಥಳದಲ್ಲಿ ನನ್ನ ದೃಷ್ಟಿ ಹೋಗಿ ನಿಲ್ಲುತ್ತದೆ’’ ಎಂದು ಹೇಳಿದರು.’ – ಆಧುನಿಕ ವೈದ್ಯ (ಡಾ.) ಪಾಂಡುರಂಗ ಮರಾಠೆ, ಫೋಂಡಾ, ಗೋವಾ. (೨೨.೪.೨೦೧೭)
೫ ಉ ೨. ಸಮಾಜದ ವಿವಿಧ ಕ್ಷೇತ್ರಗಳ ಸಂತರನ್ನು ಗುರುತಿಸಿ ಅವರನ್ನು ಸನ್ಮಾನಿಸುವುದು : ಗುರುದೇವರು ಇಲ್ಲಿಯವರೆಗೆ ಕೇವಲ ಬಾಲಕ-ಸಂತರು ಮತ್ತು ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ಸಂತ ಪದವಿಯವರೆಗೆ ಉನ್ನತಿ ಹೊಂದಿದ ಸಾಧಕರಿಗೆ ಮಾತ್ರ ಸನ್ಮಾನಿಸಿಲ್ಲ, ಸಮಾಜದಲ್ಲಿ ವಿವಿಧ ಯೋಗಮಾರ್ಗಗಳಿಂದ ಆಧ್ಯಾತ್ಮಿಕ ಉನ್ನತಿ ಹೊಂದಿ ಸಂತ ಪದವಿಯನ್ನು ತಲುಪಿದ ವ್ಯಕ್ತಿಗಳ ‘ಸಂತತ್ವ’ವನ್ನು ಗುರುತಿಸಿ ಅವರನ್ನು ಸನ್ಮಾನಿಸಿದ್ದಾರೆ. ಈ ಸಂತರು ಸಹಜ ಸ್ಥಿತಿಯಲ್ಲಿರುವುದರಿಂದ ಸಮಾಜಕ್ಕೆ ಅವರ ಸಂತತ್ವವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ‘ಈ ಸಂತರ ಮಾರ್ಗದರ್ಶನ ಮತ್ತು ಚೈತನ್ಯದ ಲಾಭ ಸಮಾಜಕ್ಕೆ ಸಿಗಲಿ’ ಎಂದು ಗುರುದೇವರು ಇಂತಹವರ ಸಂತತ್ವವನ್ನು ಬಹಿರಂಗಪಡಿಸಿ ಸನಾತನದ ವತಿಯಿಂದ ಅವರನ್ನು ಸನ್ಮಾನಿಸುತ್ತಾರೆ. ಮಾರ್ಚ್ ೨೦೨೫ ರವರೆಗೆ ಸಮಾಜದ ವಿವಿಧ ಕ್ಷೇತ್ರಗಳ ಇಂತಹ ೪೧ ಸಂತರತ್ನರಿಗೆ ಸನ್ಮಾನಿಸಲಾಗಿದೆ.
ಇತರ ಸಂತರು ಹೆಚ್ಚಾಗಿ ತಮ್ಮ ಸಂಪ್ರದಾಯದ ಶಿಷ್ಯರನ್ನು ಮಾತ್ರ ‘ಸಂತ’ ಎಂದು ಘೋಷಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮೇಲಿನ ಉದಾಹರಣೆಯಿಂದ ಗುರುದೇವರ ವ್ಯಾಪಕತೆಯು ಗಮನಕ್ಕೆ ಬರುತ್ತದೆ.
೫ ಎ. ಸರ್ವಜ್ಞತೆ
೫ ಎ ೧. ಇತರರ ಮನಸ್ಸಿನ ವಿಚಾರಗಳನ್ನು ತಿಳಿದುಕೊಂಡು ಅವರೊಂದಿಗೆ ಮಾತನಾಡುವುದು : ‘ಒಂದು ದಿನ ನನಗೆ ಗುರುದೇವರದ್ದು ತುಂಬ ನೆನಪಾಗಿ ನನ್ನ ಭಾವಜಾಗೃತವಾಯಿತು. ನಾನು ಗುರುದೇವರನ್ನು ಮನಃಪೂರ್ವಕವಾಗಿ ಕರೆದೆ, ‘ಓ ದೇವರೇ, ನೀನು ನನ್ನನ್ನು ಮರೆತಿದ್ದೀಯಾ ?’ ನಂತರ ಅರ್ಧ ಗಂಟೆಯ ನಂತರ ‘ನನ್ನನ್ನು ರಾಮನಾಥಿ ಆಶ್ರಮಕ್ಕೆ ಕರೆದಿದ್ದಾರೆ’ ಎಂಬ ದೂರವಾಣಿ ಸಂದೇಶ ಬಂದಿತು. ನಂತರ ನಾನು ಆಶ್ರಮಕ್ಕೆ ಹೋದೆ. ಆಗ ಒಂದು ಸೇವೆಗಾಗಿ ನಾನು ಗುರುದೇವರ ಕೋಣೆಗೆ ಪ್ರವೇಶಿಸಿದಾಗ ಅವರು ನನಗೆ, ‘ನಾನು ನಿಮ್ಮನ್ನು ಮರೆತಿಲ್ಲ !’ ಎಂದು ಹೇಳಿದರು. ನನ್ನ ಮನಸ್ಸಿನ ಮಾತನ್ನು ತಿಳಿದುಕೊಂಡು ಅವರು ಮಾತನಾಡಿದ್ದರಿಂದ ಕ್ಷಣಕಾಲ ನಾನು ಗೊಂದಲಕ್ಕೊಳಗಾದೆ ಮತ್ತು ಆ ಸಮಯದಲ್ಲಿ ‘ಏನು ಮಾತನಾಡಬೇಕು ?’ ಎಂದು ನನಗೆ ತಿಳಿಯಲಿಲ್ಲ.’ – (ಪೂ.) ಶ್ರೀಮತಿ ಸುಮನ ನಾಯ್ಕ, ಕಪಿಲೇಶ್ವರಿ, ಫೋಂಡಾ, ಗೋವಾ. (೨೯.೮.೨೦೨೧)
೫ ಐ. ಪಂಚಮಹಾಭೂತಗಳ ಮೇಲೆ ನಿಯಂತ್ರಣವಿರುವುದು
೫ ಐ ೧. ಗುರುದೇವರು ಹೇಳಿದಂತೆ ೪ ಗಂಟೆಗಳ ಕಾಲ ಮಳೆ ಬರದಿದ್ದರಿಂದ ಗುರುಸೇವೆಯಲ್ಲಿ ಅಡಚಣೆಯಾಗದೆ ಸೇವೆ ಸುಗಮವಾಗಿ ನಡೆಯುವುದು : ‘ವರ್ಷ ೧೯೯೫ ರಲ್ಲಿ ಇಂದೋರ್ನಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭವ್ಯ ಅಮೃತ ಮಹೋತ್ಸವ ನಡೆಯಲಿತ್ತು. ಮಹೋತ್ಸವದ ಸ್ಥಳದಲ್ಲಿ ಡಫಲಿಯ ಆಕಾರದ ದೊಡ್ಡ ಪ್ರವೇಶದ್ವಾರವನ್ನು ನಿರ್ಮಿಸಬೇಕಿತ್ತು. ಈ ದೃಷ್ಟಿಯಿಂದ ಶೀವ ಸೇವಾಕೇಂದ್ರದ ಕಟ್ಟಡದ ಮಾಳಿಗೆಯಲ್ಲಿ ಶ್ರೀ. ರೋಹನ್ ಭೋಜನೆ (ಈಗಿನ ದಿ. ರೋಹನ್ ಭೋಜನೆ) ಮತ್ತು ಶ್ರೀ. ಸದಾನಂದ ಪಾಂಚಾಳ ಅವರು ಇತರ ಸಾಧಕರೊಂದಿಗೆ ಡಫಲಿಯ ಆಕಾರದ ಪ್ರವೇಶದ್ವಾರವನ್ನು ಸಿದ್ಧಪಡಿಸುವ ಸೇವೆಯನ್ನು ಮಾಡುತ್ತಿದ್ದರು. ರೋಹನ್ ಭೋಜನೆ ಅವರಿಗೆ ಭಾನುವಾರ ರಜೆ ಇರುವುದರಿಂದ ಅವರು ಆ ದಿನ ಹೆಚ್ಚು ಸೇವೆ ಮಾಡುತ್ತಿದ್ದರು; ಆದರೆ ಮಳೆಯ ದಿನಗಳಾಗಿದ್ದರಿಂದ ಒಮ್ಮೆ ಬೆಳಿಗ್ಗೆಯೇ ಮಳೆ ಪ್ರಾರಂಭವಾಯಿತು. ಆಗ ಅವರಿಗೆ ‘ಈಗ ಸೇವೆ ಹೇಗೆ ಮಾಡುವುದು?’ ಎಂಬ ಪ್ರಶ್ನೆ ಉದ್ಭವಿಸಿತು. ಅವರು ಈ ಬಗ್ಗೆ ಗುರುದೇವರಿಗೆ ಕೇಳಿದರು. ಆಗ ಗುರುದೇವರು ಅವರಿಗೆ, ”ನೀವು ಸೇವೆ ಮಾಡಲು ಎಷ್ಟು ಗಂಟೆಗಳು ಬೇಕಾಗುತ್ತವೆ?’’ ಎಂದು ಕೇಳಿದರು. ಅದಕ್ಕೆ ರೋಹನ್ ಭೋಜನೆ ಅವರು, ”೪ ಗಂಟೆಗಳು ಬೇಕಾಗುತ್ತವೆ’ ಎಂದು ಹೇಳಿದರು. ಆಗ ಗುರುದೇವರು, ”೪ ಗಂಟೆಗಳ ಕಾಲ ಮಳೆ ಬರುವುದಿಲ್ಲ. ನಾವು ಅದಕ್ಕೆ ಹೇಳೋಣ’’ ಎಂದರು. ಆಶ್ಚರ್ಯವೆಂದರೆ ಮಳೆ ನಿಂತು ೪ ಗಂಟೆಗಳ ಕಾಲ ಮಳೆ ಬರಲಿಲ್ಲ. ಆಗ ನಾವೆಲ್ಲರೂ ಕೈಜೋಡಿಸಿ ಮನಸ್ಸಿನಲ್ಲಿ ಗುರುಚರಣಗಳಿಗೆ ಕೃತಜ್ಞತೆ ಸಲ್ಲಿಸಿದೆವು.’
– ಶ್ರೀ. ವಿಷ್ಣು ಕದಂ, ಆರೆ, ದೇವಗಡ ತಾಲೂಕು, ಸಿಂಧುದುರ್ಗ ಜಿಲ್ಲೆ. (೧೫.೨.೨೦೨೪)
(ಮುಂದುವರಿಯುವುದು)
ಗುರುದೇವರಲ್ಲಿನ ಚೈತನ್ಯದಿಂದ ಅವರ ಸಾನ್ನಿಧ್ಯದಲ್ಲಿ ಪ್ರಾಣಿ-ಪಕ್ಷಿಗಳು ಧ್ಯಾನದಲ್ಲಿ ತೊಡಗುವುದು‘ಗುರುದೇವರ ಸಾನ್ನಿಧ್ಯದಲ್ಲಿ ನಾಯಿ, ಗಿಳಿ ಮುಂತಾದ ಪ್ರಾಣಿ-ಪಕ್ಷಿಗಳು ಧ್ಯಾನದಲ್ಲಿ ತೊಡಗಿದಂತೆ ಶಾಂತವಾಗುತ್ತವೆ. ಇದು ಗುರುದೇವರಲ್ಲಿರುವ ಚೈತನ್ಯದಿಂದ ಆಗುತ್ತದೆ. ಇದರ ಬಗ್ಗೆ ಎರಡು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ. ![]() ೧. ರಾಮನಾಥಿ ಆಶ್ರಮಕ್ಕೆ ಬಂದ ಒಂದು ಗಿಳಿ ಗುರುದೇವರ ಚರಣಗಳ ಬಳಿ ಬಂದಾಗ, ಅದು ತನ್ನ ಗರಿಗಳಲ್ಲಿ ಕೊಕ್ಕನ್ನು ಇಟ್ಟುಕೊಂಡು ಒಂದು ಕಾಲಿನ ಮೇಲೆ ಧ್ಯಾನ ಮಾಡಿದಂತೆ ಶಾಂತವಾಗಿ ನಿಂತಿತ್ತು. (ಚಿತ್ರ ೧ ನೋಡಿ) ![]() ೨. ‘ಖಂಡ್ಯಾ’ ಎಂಬ ನಾಯಿ ಗುರುದೇವರ ಚರಣಗಳ ಬಳಿ ಧ್ಯಾನ ಮಾಡಿದಂತೆ ೩೦ ನಿಮಿಷಗಳ ಕಾಲ ಶಾಂತವಾಗಿ ಕುಳಿತಿತ್ತು.’ (ವರ್ಷ ೨೦೨೧) (ಚಿತ್ರ ೨ ನೋಡಿ) |
ಗುರುಗಳು ಡಾ. ಆಠವಲೆಯವರ ಆಧ್ಯಾತ್ಮಿಕ ಅಧಿಕಾರದ ಬಗ್ಗೆ ಆಗಾಗ ವ್ಯಕ್ತಪಡಿಸಿದ ಗೌರವ ನುಡಿ !![]() ಶಿಷ್ಯ ಡಾ. ಆಠವಲೆಯವರ ಬಗ್ಗೆ ಪ.ಪೂ. ಭಕ್ತರಾಜ ಮಹಾರಾಜರು ಆಗಾಗ ವ್ಯಕ್ತಪಡಿಸಿದ ನುಡಿಗಳನ್ನು ಮುಂದೆ ನೀಡಲಾಗಿದೆ. ಈ ನುಡಿಗಳು ಡಾ. ಆಠವಲೆಯವರ ಆಧ್ಯಾತ್ಮಿಕ ಅಧಿಕಾರವನ್ನು ತೋರಿಸುತ್ತವೆ. ವರ್ಷ ೧೯೯೧ (ಸಾಧಕರೇ,) ಡಾಕ್ಟರು ಹೇಳಿದಂತೆ ಮಾಡಿ. ಜನ್ಮದ ಕಲ್ಯಾಣವಾಗುತ್ತದೆ ! ‘ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾರವರ) ಅನ್ನಸಂತರ್ಪಣೆಗೆ ಪ. ಪೂ. ಡಾಕ್ಟರರೊಂದಿಗೆ ನಾವು ಕೆಲವು ಸಾಧಕರು ಹೋಗುತ್ತಿದ್ದೆವು. ಅನ್ನಸಂತರ್ಪಣೆಯಾದ ನಂತರ ಪ.ಪೂ. ಡಾಕ್ಟರರು ಮುಂಬೈಗೆ ವಾಪಸ್ಸಾಗುತ್ತಿದ್ದರು. ನಾವು ಕೆಲವು ಸಾಧಕರು ಅನ್ನಸಂತರ್ಪಣೆಯ ನಂತರದ ಸ್ವಚ್ಛತಾ ಸೇವೆಗಾಗಿ ೩-೪ ದಿನ ಆ ಸ್ಥಳದಲ್ಲಿಯೇ ಇರುತ್ತಿದ್ದೆವು. ಪ.ಪೂ. ಡಾಕ್ಟರರು ಮುಂಬೈಗೆ ವಾಪಸ್ಸು ಹೋಗುವ ಮೊದಲು ಪ.ಪೂ. ಬಾಬಾರವರ ದರ್ಶನಕ್ಕೆ ಹೋದಾಗ ಪ.ಪೂ. ಬಾಬಾರವರಿಗೆ ”ಮಕ್ಕಳನ್ನು ಇಲ್ಲಿ ಸೇವೆಯ ಸಲುವಾಗಿ ಇರಿಸಿದ್ದೇವೆ’ ಎಂದು ಹೇಳುತ್ತಿದ್ದರು. ಆಗ ಪ.ಪೂ. ಬಾಬಾರವರು ‘ಡಾಕ್ಟರರೇ, ಈ ಎಲ್ಲಾ ಮಕ್ಕಳು ನಿಮ್ಮವರು. ನೀವೇ ಅವರನ್ನು ನೋಡಿಕೊಳ್ಳಬೇಕು” ಎನ್ನುತ್ತಿದ್ದರು. ೩-೪ ದಿನಗಳ ನಂತರ ಸೇವೆ ಪೂರ್ಣವಾದ ಮೇಲೆ ನಾವು ಮುಂಬೈಗೆ ವಾಪಸ್ಸು ಹೋಗಲು ಹೊರಡುವ ಮೊದಲು ಪ.ಪೂ. ಬಾಬಾರವರ ದರ್ಶನಕ್ಕೆ ಹೋಗುತ್ತಿದ್ದೆವು. ಆಗ ಪ.ಪೂ. ಬಾಬಾರವರು ”ಡಾಕ್ಟರು ಹೇಳಿದಂತೆ ಮಾಡಿ. ಜನ್ಮದ ಕಲ್ಯಾಣವಾಗುತ್ತದೆ. ಈಗ ಹೋಗಿ’ ಎನ್ನುತ್ತಿದ್ದರು. – ಶ್ರೀ. ಸತ್ಯವಾನ ಕದಮ್ (ಈಗಿನ ಸದ್ಗುರು ಸತ್ಯವಾನ ಕದಮ್) ಮತ್ತು ಶ್ರೀ ದಿನೇಶ ಶಿಂದೆ, ಸನಾತನ ಆಶ್ರಮ, ರಾಮನಾಥಿ, ಗೋವಾ. |