ಶ್ರೀನಗರದಲ್ಲಿ ಉಗ್ರರಿಂದ ಪೊಲೀಸ್ ಪೇದೆಯನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನವನ್ನು ನಾಶ ಮಾಡದೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದು ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು 

ಶ್ರೀನಗರ (ಜಮ್ಮು-ಕಾಶ್ಮೀರ) – ಉಗ್ರರು ನವೆಂಬರ್ 7 ರ ರಾತ್ರಿ ಶ್ರೀನಗರದ ಬಟಮಾಲು ಪ್ರದೇಶದಲ್ಲಿನ ಎಚ್.ಡಿ. ಕಾಲೋನಿಯಲ್ಲಿ 29 ವರ್ಷದ ಪೊಲೀಸ್ ಪೇದೆ ತೌಸಿಫನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಪೇದೆ ತೌಸಿಫನನ್ನು ಹತ್ಯೆಗೈದ ನಂತರ ಉಗ್ರರು ಪರಾರಿಯಾದರು. ಈ ಉಗ್ರರನ್ನು ಪತ್ತೆ ಹಚ್ಚಲು ಸ್ಥಳೀಯ ಪೊಲೀಸರು ಮತ್ತು ಸೇನೆಯು ಇಡೀ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

2 ದಿನಗಳ ಹಿಂದೆ ಶ್ರೀನಗರದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಹೊರಗಡೆ ಉಗ್ರರು ಭದ್ರತಾ ಪಡೆಗೆ ಗುರಿಯಾಗಿಸಿ ಗುಂಡು ಹಾರಿಸಿದ್ದರು; ಆದರೆ ಈ ಗುಂಡಿನ ದಾಳಿಯಲ್ಲಿ ಭದ್ರತಾ ಪಡೆಯ ಸೈನಿಕರಿಗೆ ಯಾವುದೇ ಗಾಯಗಳಾಗಲಿಲ್ಲ.