ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿ ನವೆಂಬರ್ ೩ ರಿಂದ ನಡೆಯುವ ದೀಪೋತ್ಸವದಲ್ಲಿ ಶರಯೂ ನದಿಯ ದಡದಲ್ಲಿ ಪ್ರತಿದಿನ ೯ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅದರ ಜೊತೆಗೆ ಅಯೋಧ್ಯೆಯಲ್ಲಿನ ಪ್ರಾಚೀನ ಮಠ-ಮಂದಿರಗಳಲ್ಲಿ ಮತ್ತು ಕಲ್ಯಾಣಿಗಳಲ್ಲಿ(ಪುಷ್ಕರಿಣಿ) ೩ ಲಕ್ಷಕ್ಕಿಂತಲೂ ಹೆಚ್ಚಿನ ದೀಪಗಳನ್ನು ಬೆಳಗಿಸಲಾಗುವುದು. ಈ ದೀಪೋತ್ಸವವು ನವೆಂಬರ್ ೨ ರ ಧನತ್ರಯೋದಶಿಯಂದು ಪ್ರಾರಂಭವಾಗಿದೆ.
(ಸೌಜನ್ಯ : India TV)
ಉತ್ತರ ಪ್ರದೇಶ ಸರ್ಕಾರವು ನವೆಂಬರ್ 1 ರಿಂದ ಬೃಹತ್ ಪ್ರಮಾಣದಲ್ಲಿ ಆಯೋಜಿಸುತ್ತಿರುವ ಈ ದೀಪೋತ್ಸವ ನವೆಂಬರ್ 5 ರವರೆಗೆ ಇರುತ್ತದೆ. #AyodhyaDiwali #trustnews18kannada https://t.co/aXV9G8WaA8
— News18 Kannada (@News18Kannada) November 1, 2021
೧. ಶ್ರೀರಾಮ ಜನ್ಮಭೂಮಿಯಲ್ಲಿ ತಾತ್ಕಾಲಿಕ ಸ್ವರೂಪದಲ್ಲಿ ಕಟ್ಟಲಾಗಿರುವ ಶ್ರೀರಾಮ ಮಂದಿರವನ್ನು ೩೦ ಸಾವಿರ ದೀಪಗಳಿಂದ ಬೆಳಗಿಸಲಾಗುವುದು. ಹಾಗೂ ರಾಮಲಲ್ಲಾ ಎದುರು ಶುದ್ಧ ತುಪ್ಪದ ೫೧ ದೀಪಗಳನ್ನು ಬೆಳಗಿಸಲಾಗುವುದು.
೨. ಪ್ರಾಚೀನ ಹನುಮಂತಗಢಿಯಲ್ಲಿ ಕಾರ್ತಿಕ ಕೃಷ್ಣ ಚತುರ್ದಶಿಯಂದು ಹನುಮಂತ ಜಯಂತಿ ಆಚರಿಸುವ ಪ್ರಾಚೀನ ಪರಂಪರೆಯಿದೆ. ನವಂಬರ್ ೩ ರಂದು ಹನುಮಂತ ಜಯಂತಿಯಿದೆ. ಮಂದಿರದ ಗರ್ಭಗುಡಿಯಲ್ಲಿ ದೇವರನ್ನು ಬಂಗಾರ-ಬೆಳ್ಳಿ ಮತ್ತು ವಜ್ರಗಳಿಂದ ಅಲಂಕರಿಸಲಾಗುವುದು.

ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ