ಇಂತಹ ಧರ್ಮಶಾಸ್ತ್ರವಿರೋಧಿ ಸಂಸ್ಥೆಗಳನ್ನು ಬಹಿಷ್ಕರಿಸಬೇಕು !

೧. ಕಾಂಗ್ರೆಸ್ ರಾಜ್ಯದಲ್ಲಿ ಮತಾಂಧರ ಗೂಂಡಾಗಿರಿಯನ್ನು ತಿಳಿಯಿರಿ !

ಅಲವರ (ರಾಜಸ್ಥಾನ) ದಲ್ಲಿ ಮತಾಂಧರ ಗುಂಪೊಂದು ಯೋಗೀಶ ಜಾಟವ್ ಎಂಬ ದಲಿತ ಯುವಕನನ್ನು ಅಮಾನವೀಯವಾಗಿ ಥಳಿಸಿ ಹತ್ಯೆ ಮಾಡಿತು. ‘ಪೊಲೀಸ್ ಅಧಿಕಾರಿ ಇಲಿಯಾಸ್ ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

೨. ಇಂತಹ ಧರ್ಮಶಾಸ್ತ್ರವಿರೋಧಿ ಸಂಸ್ಥೆಗಳನ್ನು ಬಹಿಷ್ಕರಿಸಬೇಕು !

ಪ್ರಸಿದ್ಧ ಸಂಸ್ಥೆಯಾದ ‘ಮಾನ್ಯವರ್’ ತನ್ನ ಜಾಹೀರಾತಿನಲ್ಲಿ, ಹಿಂದೂಗಳ ಆಚರಣೆಯಾದ ‘ಕನ್ಯಾದಾನ’ ವಿಧಿಯನ್ನು ‘ಹಿಂದುಳಿದ’ ವಿಧಿಯೆಂದು ನಿರ್ಧರಿಸಿದ್ದು ಅದರ ಬದಲು ‘ಕನ್ಯಾಮಾನ’ ಎಂಬ ಪದವನ್ನು ಸೂಚಿಸಿದೆ.

೩. ಈ ಪರಿಸ್ಥಿತಿಯು ‘ಹಿಂದೂ ರಾಷ್ಟ್ರ’ವನ್ನು ಅನಿವಾರ್ಯವಾಗಿಸುತ್ತದೆ !

೨೦೧೫ ರಲ್ಲಿ ಮುಸಲ್ಮಾನರ ಪ್ರತಿ ಮಹಿಳೆಯ ಜನನ ದರವು ೨.೬ ಆಗಿತ್ತು. ಈ ಜನನ ದರವು ಭಾರತದ ಧಾರ್ಮಿಕ ಗುಂಪುಗಳಲ್ಲೇ ಅತ್ಯಧಿಕವಾಗಿದೆ. ಇದನ್ನು ಅಮೇರಿಕಾದ  ‘ಪ್ಯೂ ರೀಸರ್ಚ ಸೆಂಟರ್’ನ ವರದಿಯಲ್ಲಿ ನಮೂದಿಸಲಾಗಿದೆ.

೪. ಜಾತ್ಯತೀತವಾದಿಗಳು ಈಗೆಲ್ಲಿದ್ದಾರೆ ?

ರಾಯಸನ್ (ಮಧ್ಯಪ್ರದೇಶ) ದ ಸರ್ಕಾರಿ ಶಾಲೆಯಲ್ಲಿ ೮ ನೇ ತರಗತಿಯಲ್ಲಿ ಓದುತ್ತಿರುವ ಪವನ್ ಸೇನ್ ಎಂಬವನು ಹಣೆಯಲ್ಲಿ ತಿಲಕವನ್ನಿಟ್ಟು ಶಾಲೆಗೆ ಬರುತ್ತಿರುವುದರಿಂದ ಮತಾಂಧ ಶಿಕ್ಷಕಿ ನಿಶಾತ್ ಬೇಗಮ್ ಅವನನ್ನು ಹೊರಗಡೆಯ ಜನರಿಗೆ ಹೇಳಿ ಅಮಾನವೀಯವಾಗಿ ಹೊಡೆಸಿದ್ದರಿಂದ ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

೫. ಇಟಲಿಯಲ್ಲಿ ಪಾದ್ರಿಯ ಅಪರಾಧಿ ಮನೋಭಾವವನ್ನು ತಿಳಿಯಿರಿ !

ರೋಮ್‌ನ (ಇಟಲಿ) ಪಾದ್ರಿ ಫ್ರಾನ್ಸೆಸ್ಕೊ ಸ್ಪಾಗನೆಸಿ ಎಂಬವನು ಚರ್ಚ್‌ನಿಂದ ೮೬ ಲಕ್ಷ ರೂಪಾಯಿಗಳನ್ನು ಕದ್ದು ಆ ಹಣದಿಂದ ತನ್ನ ಮನೆಯಲ್ಲಿಯೇ ಸಲಿಂಗಕಾಮಿಗಳಿಗಾಗಿ ‘ಲೈಂಗಿಕ ಸಂಬಂಧದ ಕೂಟ’ವನ್ನು ಆಯೋಜಿಸಿದ್ದನು. ಆತ ಅದಕ್ಕಾಗಿ ಮಾದಕ ದ್ರವ್ಯ ಸಹ ಖರೀದಿಸಿದ್ದನು.

೬. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರದ ಅಗತ್ಯವಿದೆ ?

 ಮಹಂತ ನರೇಂದ್ರ ಗಿರಿಯವರ ಅನುಮಾನಾಸ್ಪದ ಮರಣದ ನಂತರ ಸಾಧು-ಸಂತರ ಹತ್ಯೆಯ ವಿಷಯ ಚರ್ಚೆಯಲ್ಲಿದೆ. ಕೇವಲ ಹರಿದ್ವಾರ ಒಂದರಲ್ಲಿ ಕಳೆದ ೩ ದಶಮಾನಗಳಲ್ಲಿ ೨೯ ಸಂತರು ಅನುಮಾನಾಸ್ಪದ ಸ್ಥಿತಿಯಲ್ಲಿ ಮರಣ ಹೊಂದಿದ್ದರೆ ೩ ಸಂತರು ನಾಪತ್ತೆಯಾಗಿದ್ದಾರೆ.

೭. ಪ್ರಗತಿಪರರು (ಅಧೋಗತಿಕರು) ಈಗ ಇದರ ಬಗ್ಗೆ ಮಾತನಾಡುವರೇ ?

ಕೇರಳದ ಥಮಾರಸೇರಿ ನಗರದಲ್ಲಿರುವ ಚರ್ಚ್‌ನ ಕ್ಯಾಟೆಸಿಸ್ ವಿಭಾಗವು ‘ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸಲು ಒಂದು ಕಿರುಪುಸ್ತಕವನ್ನು ಪ್ರಕಟಿಸಿದೆ. ಇದರಲ್ಲಿ ಕ್ರೈಸ್ತ ಯುವತಿಯರನ್ನು ಲವ್ ಜಿಹಾದ್ ಗೆ ಸೆಳೆಯಲು ಮೌಲ್ವಿಗಳು ಮಾಟಮಂತ್ರ ವನ್ನು ಬಳಸುತ್ತಾರೆ ಎಂದು ಅದು ಹೇಳಲಾಗಿದೆ.