ಪುಣೆ – 1971 ರಲ್ಲಿ ನಡೆದಿರುವ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮದಿಂದಾಗಿ ಶತ್ರುಗಳನ್ನು ಸದೆಬಡಿದರು. ಈ ನಿರ್ಣಾಯಕ ಯುದ್ಧದಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗಿದ್ದರು. ಇದು ಜಗತ್ತಿನ ಇತಿಹಾಸದಲ್ಲಿ ನೋಂದಾಯಿಸಲ್ಪಟ್ಟಿದೆ, ಎಂದು ದಕ್ಷಿಣ ಕಮಾಂಡ್ ಪ್ರಮುಖ ಲೆಫ್ಟಿನೆಂಟ್ ಜನರಲ್ ಜೆ ಎಸ್ ನೈನ್ ಇವರು ಹೇಳಿದರು. 1971 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ವಿಜಯಕ್ಕೆ ಮತ್ತು ಬಾಂಗ್ಲಾದೇಶ ನಿರ್ಮಾಣಕ್ಕೆ 50 ವರ್ಷ ಪೂರ್ಣವಾಯಿತು. ಈ ವರ್ಷವನ್ನು ‘ಸ್ವರ್ಣಿಮ್ ವಿಜಯ ವರ್ಷ’ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ‘ವಿಜಯ ಮಶಾಲ್’ ದಕ್ಷಿಣ ಕಮಾಂಡ್ ಕ್ಷೇತ್ರದಿಂದ ಹೊರಡಿಸಲಾಯಿತು. ವಿಜಯ ಮಾಶಲವನ್ನು ಲೆಫ್ಟಿನೆಂಟ್ ಜನರಲ್ ಜೆ.ಸ್. ನೈನ್ ಇವರು ಪುಣೆಯಲ್ಲಿ ಅಕ್ಟೋಬರ್ 1 ರಂದು ಸ್ವಾಗತಿಸಿದರು. ‘ವಿಜಯ ಮಶಾಲ್’ ಸ್ವಾಗತಕ್ಕಾಗಿ ಆಯೋಜಿಸಲಾದ ಸಮಾರಂಭದಲ್ಲಿ ಮಾಜಿ ಸೈನಿಕರು ಹಾಗೂ ಬಾಂಗ್ಲಾದೇಶದ ಉಪ ಉಚ್ಚಾಯುಕ್ತ ರೆಹಮಾನ್ ಉಪಸ್ಥಿತ ಇದ್ದರು. ಪುಣೆಯಲ್ಲಿ ‘ವಿಜಯ ಮಶಾಲ್’ನ ಮುಕ್ಕಾಂ ಹೂಡಿ ಅಕ್ಟೋಬರ್ 31 ರಂದು ಈ ಮಶಾಲ್ ನಾಶಿಕ್ಗೆ ತೆರಳಲಿದೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಮಹಾರಾಷ್ಟ್ರ > ಭಾರತೀಯ ಸೈನಿಕರು 1971 ರ ಯುದ್ಧದಲ್ಲಿ ಪಡೆದಿದ್ದ ವಿಜಯವು ಜಗತ್ತಿನ ಇತಿಹಾಸದಲ್ಲಿ ನೋಂದಣಿ !
ಭಾರತೀಯ ಸೈನಿಕರು 1971 ರ ಯುದ್ಧದಲ್ಲಿ ಪಡೆದಿದ್ದ ವಿಜಯವು ಜಗತ್ತಿನ ಇತಿಹಾಸದಲ್ಲಿ ನೋಂದಣಿ !
ಸಂಬಂಧಿತ ಲೇಖನಗಳು
- HC Slammed Pinarayi Vijayan: ಪಿಣರಾಯಿ ವಿಜಯನ್ ಸರಕಾರಕ್ಕೆ ಕೇರಳ ಹೈಕೋರ್ಟ್ ನಿಂದ ಛೀಮಾರಿ !
- Yogi Adityanath Statement : ಭಾರತಕ್ಕೆ ಶ್ರೀ ಕೃಷ್ಣನ ‘ಮುರಳಿ’ ಅಲ್ಲ, ‘ಸುದರ್ಶನ ಚಕ್ರ’ ಕೂಡ ಅಗತ್ಯವಿದೆ ! – ಯೋಗಿ ಆದಿತ್ಯನಾಥ
- ನಾವು ಮುಸ್ಲಿಮರಿಗೆ ಈದ್ ಮೆರವಣಿಗೆಯನ್ನು ತೆಗೆಯಲು ಬಿಡುವುದಿಲ್ಲ ! – ಹಿಂದೂಗಳಿಂದ ತಕ್ಕ ಪ್ರತ್ಯುತ್ತರ
- ಗಣೇಶ ವಿಸರ್ಜನೆಯ ವೇಳೆ ಗುಲಾಲ್ ತಾಗಿದ್ದರಿಂದ ಹೌಹಾರಿದ ಮುಸಲ್ಮಾನರು; ಹಿಂದೂ ಮಹಿಳೆಯರನ್ನು ಕೆಸರಿಗೆ ತಳ್ಳಿ ಥಳಿತ
- ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮೇಲೆ ಭಯೋತ್ಪಾದಕರ ಕರಿನೆರಳು
- ಎರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ! – ಕೇಜ್ರಿವಾಲ್