ಲವ್ ಜಿಹಾದ್ ಮತ್ತು ನಾರ್ಕೋಟಿಕ್ ಜಿಹಾದ್ ಇವುಗಳ ವಿರುದ್ಧ ಧ್ವನಿಯೆತ್ತಿದ ಬಿಷಪ್ ರ ವಿರುದ್ಧ ಮತಾಂಧ ಸಂಘಟನೆಗಳ ಪ್ರತಿಭಟನೆ

ಬಿಷಪರು ನೇರವಾಗಿ ಮತಾಂಧರ ಮೇಲೆ ಟೀಕೆ ಮಾಡಿದ್ದರಿಂದ ಅವರಿಗೆ ಮೆಣಸು ಹಿಂಡಿದಂತಾಗಿದೆ, ಇದರಿಂದಾಗಿ ಮತಾಂಧರು ಅವರನ್ನು ವಿರೋಧಿಸಿದರು ! ಇದನ್ನೇ ‘ಕಳ್ಳನ ಮನಸ್ಸು ಹುಳ್ಳಹುಳ್ಳಗೆ’ ಎಂದು ಹೇಳುತ್ತಾರೆ! – ಸಂಪಾದಕರು

‘ನಾರ್ಕೋಟಿಕ್ ಜಿಹಾದ್’ ಅಂದರೆ ಏನು ?

ಮುಸಲ್ಮಾನೇತರ ಯುವಕ-ಯುವತಿಯರಿಗೆ ಅಮಲು ಪದಾರ್ಥಗಳ ಸೇವನೆಯ ವ್ಯಸನ ತಗುಲಿಸಿ ಅವರ ಜೀವನವನ್ನು ಹಾಳು ಮಾಡುವುದು. ಈ ರೀತಿಯಲ್ಲಿ ಶಸ್ತ್ರಗಳಿಲ್ಲದೆ ಮುಸಲ್ಮಾನೇತರರ ಯುವಪೀಳಿಗೆಯು ನಾಶವಾಗುತ್ತದೆ. ಇದು ಜಿಹಾದಿನ ಅಂದರೆ ಇಸ್ಲಾಮಿ ಧರ್ಮಯುದ್ಧದ ಒಂದು ಭಾಗವಾಗಿದೆ.

ಕೊಟ್ಟಾಯಂ (ಕೇರಳ) – ಇಲ್ಲಿನ ಸಾಯಾರೋ ಮಲಬಾರ ಚರ್ಚಿನ ಬಿಷಪರಾದ ಮಾರ ಜೋಸೆಫ್ ಕಲ್ಲಾರನಗಟ್ಟ ಇವರು ‘ಕ್ರೈಸ್ತರನ್ನು ‘ಲವ್ ಜಿಹಾದ್’ ಮತ್ತು’ನಾರ್ಕೋಟಿಕ್ ಜಿಹಾದ್’ಗಳ ಜಾಲದಲ್ಲಿ ಸೆಳೆಯಲಾಗುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದನ್ನು ವಿರೋಧಿಸಲು ಮುಸಲ್ಮಾನರು ಬಿಷಪ (ನಲ್ಲಿ ಮೇಲಿನ ಶ್ರೇಣಿಯಲ್ಲಿ ಕಾರ್ಯನಿರತವಾಗಿರುವ ಪಾದ್ರಿ) ಕಲ್ಲಾರನಗಟ್ಟ ಇವರ ಮನೆಯ ಹೊರಗೆ ಪ್ರತಿಭಟನೆಗಳನ್ನು ನಡೆಸಿದರು. ‘ಕೊಟ್ಟಾಯಂ ಮಹಲ ಮುಸ್ಲಿಮ ಕೋ ಆರ್ಡಿನೇಷನ್ ಕಮಿಟಿ’ಯ 200ಕ್ಕೂ ಹೆಚ್ಚಿನ ಮತಾಂಧರು ಇದರಲ್ಲಿ ಸಹಭಾಗಿಯಾಗಿದ್ದರು. ಹಾಗೆಯೇ ಬಿಷಪರ ವಿರುದ್ಧ ಪೊಲೀಸರಲ್ಲಿ ದೂರನ್ನು ನೊಂದಾಯಿಸಲಾಗಿದೆ.

1. ಭಾಜಪವು ಬಿಷಪರ ಹೇಳಿಕೆಯನ್ನು ಸಮರ್ಥಿಸಿದೆ. ಭಾಜಪದ ಕೇರಳ ಪ್ರದೇಶ ಅಧ್ಯಕ್ಷರಾದ ಕೆ. ಸುರೇಂದ್ರನ್ ಇವರು ‘ಇದು ಒಂದು ಗಂಭೀರ ವಿಷಯವಾಗಿದ್ದು ಇದರ ಮೇಲೆ ಸಮಾಜವು ಚರ್ಚೆ ಮಾಡಬೇಕು’ ಎಂದು ಹೇಳಿದ್ದಾರೆ. (ಭಾಜಪವು ಕೇಂದ್ರ ಸರಕಾರಕ್ಕೆ ಈ ಬಗ್ಗೆ ಹೇಳಿ ಇದರ ಸವಿಸ್ತಾರವಾದ ವಿಚಾರಣೆ ಮಾಡಿ ಜವಾಬ್ದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)

2. ಕ್ಯಾಥೋಲಿಕ್ ಸಂಸ್ಥೆಗಳು ಬಿಷಪರ ಹೇಳಿಕೆಯನ್ನು ಸಮರ್ಥಿಸಿವೆ. ಕ್ರೈಸ್ತರು ‘ನಾರ್ಕೋಟಿಕ್ ಜಿಹಾದ’ನಿಂದಾಗಿ ಕ್ರೈಸ್ತ ತರುಣರ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮವಾಗುತ್ತಿದೆ. ಅವರು ಅಮಲು ಪದಾರ್ಥಗಳ ವ್ಯಸನವನ್ನು ಆರಂಭಿಸಿದ್ದಾರೆ. ಹೋಟೆಲ್ ಮತ್ತು ಜ್ಯೂಸ್ ಸೆಂಟರಗಳ ಮಾಧ್ಯಮದಿಂದ ‘ನಾರ್ಕೋಟಿಕ್ ಜಿಹಾದ್’ ನಡೆಯುತ್ತಿದೆ. ಇದರ ಹಿಂದೆ ಕಟ್ಟರತಾವಾದಿ ಜಿಹಾದಿಗಳಿದ್ದಾರೆ’ ಎಂದು ಹೇಳಿದ್ದಾರೆ.

3. ‘ಡೆಮೊಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ’ ದ ಎ.ಎ. ರಹೀಮ್ ಇವರು ಬಿಷಪರ ಹೇಳಿಕೆಯು ‘ದುರ್ದೈವಿ ಮತ್ತು ಯೋಗ್ಯ ಮಾಹಿತಿಯಿಲ್ಲದೆ ನೀಡಿರುವ ಹೇಳಿಕೆಯಾಗಿದೆ’ ಎಂದು ಹೇಳಿದ್ದಾರೆ.

4. ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಪಿ.ಟಿ. ಥಾಮಸ್ ಇವರು ಟೀಕಿಸುವಾಗ ‘ಇಂತಹ ಹೇಳಿಕೆಗಳು ಸಮಾಜದಲ್ಲಿನ ವಾತಾವರಣವನ್ನು ಕೆಡಿಸಬಹುದು’ ಎಂದು ಹೇಳಿದ್ದಾರೆ. (‘ಸಮಾಜದಲ್ಲಿ ನಡೆಯುತ್ತಿರುವುದನ್ನು ಸ್ಪಷ್ಟವಾಗಿ ಮಂಡಿಸುವುದರಿಂದ ವಾತಾವರಣ ಕೆಡುತ್ತದೆ ಎಂದು ಕಾಂಗ್ರೆಸ್ ಗೆ ಅನಿಸುತ್ತಿದ್ದರೆ, ಅದರ ಅರ್ಥ ‘ಸಮಾಜವು ಅನ್ಯಾಯವನ್ನು ಸಹಿಸಬೇಕು’ ಎಂದು ಕಾಂಗ್ರೆಸ್ ಗೆ ಅನಿಸುತ್ತದೆಯೇ? ಥಾಮಸರು ಕ್ರೈಸ್ತರಾಗಿದ್ದರೂ ಬಿಷಪರ ಹೇಳಿಕೆಯೊಂದಿಗೆ ಅವರ ಸಹಮತಿ ಇಲ್ಲದಿರುವುದಕ್ಕೆ ಅವರು ಕಾಂಗ್ರೆಸ್ ನಲ್ಲಿ ಇರುವುದೇ ಕಾರಣವಾಗಿದೆ ಎಂದು ಜನತೆಗೆ ಅನಿಸುತ್ತದೆ ! -ಸಂಪಾದಕರು)

‘ಒಂದು ಸಮಸ್ಯೆಗಾಗಿ ಒಂದು ಧರ್ಮವನ್ನು ಗುರಿಯಾಗಿಸಲು ಸಾಧ್ಯವಿಲ್ಲ !’ – ಕೇರಳದ ಮುಖ್ಯಮಂತ್ರಿ

ಕೇರಳದಲ್ಲಿನ ಸಾಮ್ಯವಾದಿ ಪಕ್ಷದ ಸರಕಾರದ ಮುಖ್ಯಮಂತ್ರಿಯಿಂದ ಇದಕ್ಕಿಂತಲೂ ಬೇರೆ ಇನ್ನೇನು ಅಪೇಕ್ಷಿಸಬಹುದು ? ಈಗಲಾದರೂ ಕ್ರೈಸ್ತ ಸಮಾಜವು ಸಾಮ್ಯವಾದಿಗಳ ನಿಜವಾದ ಸ್ವರೂಪವನ್ನು ಅರಿಯುವುದೇ?- ಸಂಪಾದಕರು

ಮುಖ್ಯಮಂತ್ರಿ ಪಿನರಯಿ ವಿಜಯನ್

ಕೇರಳದ ಮುಖ್ಯಮಂತ್ರಿ ಪಿನರಯಿ ವಿಜಯನ್ ಇವರು ಬಿಷಪ ಮಾರ ಜೋಸೆಫ್ ಕಲ್ಲಾರನಗಟ್ಟರವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ‘ಬಿಷಪರು ಓರ್ವ ಪ್ರಭಾವಿ ಮತ್ತು ಧಾರ್ಮಿಕ ವಿದ್ವಾಂಸರಾಗಿದ್ದಾರೆ. ನಾವು ಮೊದಲ ಬಾರಿಗೆ ‘ನಾರ್ಕೋಟಿಕ್ ಜಿಹಾದ’ಎಂಬ ಶಬ್ದವನ್ನು ಕೇಳುತ್ತಿದ್ದೇವೆ. ಅಮಲು ಪದಾರ್ಥಗಳ ಸಮಸ್ಯೆಗಾಗಿ ಒಂದು ಧರ್ಮವನ್ನು ಗುರಿಯಾಗಿಸಲು ಸಾಧ್ಯವಿಲ್ಲ. ಹೀಗೆ ಮಾಡುವುದು ಸಂಪೂರ್ಣ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನೂ ಬೀರುವಂತಹದ್ದಾಗಿದೆ. ಆದುದರಿಂದ ನಾವು ಚಿಂತೆಗೊಳಗಾಗಿದ್ದೇವೆ. ಜವಾಬ್ದಾರಿಯುತ ಪದವಿಯಲ್ಲಿನ ವ್ಯಕ್ತಿಯು ಇಂತಹ ಹೇಳಿಕೆಗಳನ್ನು ನೀಡುವಾಗ ಸತರ್ಕತೆಯಿಂದ ಇರಬೇಕು. ಧರ್ಮದ ಆಧಾರದಲ್ಲಿ ವಿಭಜನೆಯಾಗುವ ಹೇಳಿಕೆಗಳನ್ನು ನೀಡಬಾರದು’ ಎಂದು ಹೇಳಿದರು. (ಬಿಷಪರು ಮಾಡಿರುವ ಹೇಳಿಕೆಯ ವಿಚಾರಣೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿಲ್ಲ, ಎಂಬುದನ್ನು ಗಮನದಲ್ಲಿಡಿ ! -ಸಂಪಾದಕರು)