ಒಬ್ಬ ಕಾರ್ಯಕರ್ತನ ಬಂಧನ
ಈಗ ಹಿಂದುದ್ವೇಷದ ಕಾಮಾಲೆಯಾಗಿರುವ ಭೀಮ ಆರ್ಮಿಯ ಮೇಲೆ ಕೇಂದ್ರ ಸರಕಾರವು ನಿರ್ಬಂಧ ಹೇರಬೇಕೆಂದು ಹಿಂದೂಗಳು ಮತ್ತು ಅವರ ಸಂಘಟನೆಗಳು ಬೇಡಿಕೆಯನ್ನು ಮಾಡಬೇಕು !

ಸುಪೌಲ (ಬಿಹಾರ) – ಇಲ್ಲಿನ ಮಹಾದೇವಪಟ್ಟಿ ಊರಿನಲ್ಲಿ ಭೀಮ ಆರ್ಮಿಯ ಇಬ್ಬರು ಕಾರ್ಯಕರ್ತರು ಶಿವನ ದೇವಾಲಯದಲ್ಲಿ ಶಿವಲಿಂಗದ ಮೇಲೆ ಕಾಲಿಟ್ಟುಕೊಂಡು ಛಾಯಾಚಿತ್ರ ತೆಗೆದುಕೊಂಡು ಅದನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿದರು. ಈ ಪ್ರಕರಣದಲ್ಲಿ ಅವರ ವಿರುದ್ಧ ಅಪರಾಧವನ್ನು ನೋಂದಾಯಿಸಲಾಗಿದ್ದು ಶೈಲೇಂದ್ರಕುಮಾರ ರಾಮ ಎಂಬ ಕಾರ್ಯಕರ್ತನನ್ನು ಬಂಧಿಸಲಾಯಿತು. ಹಾಗೂ ಚಂದನಕುಮಾರ ರಾಮ ಎಂಬ ಹೆಸರಿನ ಕಾರ್ಯಕರ್ತನನ್ನು ಪೊಲೀಸರು ಹುಡುಕುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ತು ಪೊಲೀಸರಿಗೆ ಮನವಿ ನೀಡಿದ್ದು ಅದರಲ್ಲಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಹೇಳಿದೆ. ಈ ಇಬ್ಬರು ಆರೋಪಿಗಳು ಹಿಂದೂ ಧರ್ಮದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಪ್ರಸಾರ ಮಾಡಿದ್ದರು.
ಛಾಯಾಚಿತ್ರ ಪ್ರಸಾರವಾದ ತಕ್ಷಣ ಊರಿನವರು ಪಂಚಾಯತನ್ನು ಕರೆದರು. ಅದರಲ್ಲಿ ಅವರಿಬ್ಬರಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಹೇಳಲಾಯಿತು; ಆದರೆ ಅವರು ತಮ್ಮ ತಪ್ಪನ್ನು ಸ್ವೀಕರಿಸಲು ನಿರಾಕರಿಸಿ ಗ್ರಾಮಸ್ಥರನ್ನು ಹೊಡೆದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಯತ್ನಿಸಿದರು.
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ
ಮಹಾರಾಷ್ಟ್ರ: ೪ ತಿಂಗಳಲ್ಲಿ ೨೫೪ ಕೋಟಿ ೫೩ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ! – ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
ಗಂಗಾ ನದಿಯಲ್ಲಿ ದೋಣಿಯಲ್ಲಿ ಮಾಂಸ ಮತ್ತು ಮದ್ಯದ ಪಾರ್ಟಿ ಮಾಡಿದ ಘಟನೆ: ೫ ಹಿಂದೂ ಯುವಕರ ಬಂಧನ
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!