ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಸನಾತನದ ಆಯುರ್ವೇದಿಕ ಔಷಧಿಗಳು (ಪ್ರಾತಿನಿಧಿಕ ಛಾಯಾಚಿತ್ರ)

ಸದ್ಯ ಕೊರೊನಾ ರೂಪದಲ್ಲಿ ಆಪತ್ಕಾಲದ ತುಣುಕನ್ನು ಅನುಭವಿಸುತ್ತಿದ್ದೇವೆ. ‘ಚಿಕಿತ್ಸಾಲಯಕ್ಕೆ ಹೋಗಬೇಕೆಂದರೆ ಬಹಳ ಜನದಟ್ಟಣೆ ಇರುತ್ತದೆ. ಔಷಧಾಲಯದಲ್ಲಿ ಔಷಧಿಗಳು ಲಭ್ಯವಿರುವುದಿಲ್ಲ, ಆನ್‌ಲೈನ್ ಔಷಧಿಗಳನ್ನು ತರಿಸಿದರೂ, ಸಂಚಾರ ನಿರ್ಬಂಧದ ಕಾರಣದಿಂದ ಸರಿಯಾದ ಸಮಯಕ್ಕೆ ಅವು ತಲುಪುವುದಿಲ್ಲ, ಔಷಧಿಗಳ ಕೊರತೆಯಿರುವುದರಿಂದ ಅವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ, ಇತ್ಯಾದಿ ಅನೇಕ ಕೆಟ್ಟ ಅನುಭವಗಳನ್ನು ಅನೇಕ ಜನರು ಪಡೆದಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ. ಈ ಔಷಧಿಗಳು ಬೇಗನೆ ಉಪಲಬ್ಧವಾಗಲಿದೆ. ಈ ಔಷಧಗಳ ಕುರಿತು ಮಾಹಿತಿಯನ್ನು ನಾವು ಒಂದೊಂದಾಗಿ ತಿಳಿದುಕೊಳ್ಳುವವರಿದ್ದೇವೆ.

೬. ಸನಾತನ ತುಂಗೆ ಗಡ್ಡೆ (ನಾಗರಮೋತಾ) ಚೂರ್ಣ

೬ ಅ. ಗುಣಧರ್ಮ ಮತ್ತು ಸಂಭವನೀಯ ಉಪಯೋಗ : ಈ ಔಷಧಿಯು ತಂಪು ಗುಣಧರ್ಮವನ್ನು ಹೊಂದಿದ್ದು, ಪಿತ್ತ ಮತ್ತು ಕಫ ನಾಶಕವಾಗಿದೆ. ಈ ಚೂರ್ಣದಿಂದ ಕಾಯಿಲೆಗಳಲ್ಲಿನ ಸಂಭವನೀಯ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗೆ ಇತರ ಕಾಯಿಲೆಗಳಿಗೆ ಅನುಗುಣವಾಗಿ ಉಪಚಾರಗಳಲ್ಲಿ ಬದಲಾವಣೆಯಾಗಬಹುದು. ಇದರಿಂದ ಔಷಧಿಯನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕು.

೬ ಆ. ಸೂಚನೆ : ೩ ರಿಂದ ೭ ವರ್ಷದವರು ವಯಸ್ಕರ ಪ್ರಮಾಣದ ಕಾಲು ಚಮಚ ಮತ್ತು ೮ ರಿಂದ ೧೪ ವರ್ಷದವರು ವಯಸ್ಕರ ಪ್ರಮಾಣದ ಅರ್ಧ ಚಮಚ ಪ್ರಮಾಣದಲ್ಲಿ ಚೂರ್ಣವನ್ನು ಸೇವಿಸಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೧.೬.೨೦೨೧)      

(ಮುಂದುವರಿಯುವುದು)