ತಮಿಳುನಾಡಿನಲ್ಲಿ ಅಪರಿಚಿತ ವ್ಯಕ್ತಿಗಳಿಂದ ಪಂಚ ಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾದೇವಿಯ ಮೂರ್ತಿಯ ಧ್ವಂಸ !

ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ಕೆಲವು ತಿಂಗಳಲ್ಲಾದ ದಾಳಿಯಲ್ಲಿ ಇದು ಮೂರನೇ ಘಟನೆ !

* ಹಿಂದೂಗಳ ದೇವಸ್ಥಾನ ಸರಕಾರಿಕರಣವಾದ ನಂತರ ಏನಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದನ್ನು ವಿರೋಧಿಸಿ !

* ನಾಸ್ತಿಕವಾದಿ ದ್ರವಿಡ ಮುನ್ನೆತ್ರ ಕಳಘಮ್ ಸರಕಾರದ ರಾಜ್ಯದಲ್ಲಿ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತವಾಗಿಯೇ ಇರುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ

ಚೆನ್ನೈ (ತಮಿಳುನಾಡು) – ರಾಜ್ಯದ ರಾಣಿಪೇಟದಲ್ಲಿನ ಕೊಂಡಾಪುರಮ್ ಗ್ರಾಮದಲ್ಲಿ ಇರುವ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಅಪರಿಚಿತ ವ್ಯಕ್ತಿಯು ಧ್ವಂಸಗೊಳಿಸಿದ್ದು, ಅದೇ ರೀತಿ ಮೂರ್ತಿಯ ಮೇಲಿನ ಬಟ್ಟೆಯನ್ನೂ ಸುಡಲಾಗಿದೆ. ಅಜ್ಞಾತರು ಇಲ್ಲಿ ಹಸ್ತ ಮೈಥುನ ಮಾಡಿ ಮೂರ್ತಿಯ ಮೇಲೆ ವೀರ್ಯವನ್ನು ಹಾಕಿದ್ದಾರೆ. ಈ ರೀತಿಯಲ್ಲಿ ಅತ್ಯಂತ ಅಸಹ್ಯಕರ ಘಟನೆಯು ನಡೆದಿದೆ. ಇದರ ವಿರುದ್ಧ ಸ್ಥಳಿಯ ಹಿಂದೂಗಳಲ್ಲಿ ಆಕ್ರೋಶವು ವ್ಯಕ್ತವಾಗಿದ್ದು ಅವರು ಪೊಲೀಸರಲ್ಲಿ ಆರೋಪಿಯನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ದೇವಸ್ಥಾನದ ಪಕ್ಕದಲ್ಲಿ ವಾಸಿಸುವ ಕೆಲವು ಮತಾಂಧರು ಈ ಕೃತ್ಯವನ್ನು ಮಾಡಿರಬಹುದೆಂದು ಶಂಕಿಸಲಾಗಿದೆ. ಈ ದೇವಸ್ಥಾನವು ಸರಕಾರಿಕರಣಗೊಂಡಿದೆ. ಕಳೆದ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿನ ಹಿಂದೂಗಳ ದೇವಸ್ಥಾನ ಧ್ವಂಸ ಮಾಡಿರುವ ಘಟನೆಗಳಲ್ಲಿ ಇದು ಮೂರನೆಯದ್ದಾಗಿದೆ. ‘ಈ ದೇವಸ್ಥಾನದ ಮೇಲೆ ಈ ಹಿಂದೆಯೂ ದಾಳಿಗಳಾಗಿದ್ದು ಅನಂತರವೂ ಪೊಲೀಸರು ಭದ್ರತೆಗಾಗಿ ಪ್ರಯತ್ನ ಮಾಡಲಿಲ್ಲ’, ಎಂದು ಹಿಂದೂ ಮುನ್ನಾನಿ ಹಾಗೂ ವಿಶ್ವ ಹಿಂದೂ ಪರಿಷದ್ ಈ ಸಂಘಟನೆಗಳು ಹೇಳಿವೆ.