ಸಧ್ಯ ರಾಷ್ಟ್ರಘಾತಕ ಶಕ್ತಿಗಳ ಪ್ರಭಾವವು ಹೆಚ್ಚಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅನೇಕ ಬಾರಿ ದೇಶವಿರೋಧಿ ಹೇಳಿಕೆಗಳನ್ನು ನೀಡಲಾಗುತ್ತಿದೆ. ಹೀಗಿದ್ದರೂ, ಅದರ ದುರುಪಯೋಗವೂ ಆಗುತ್ತಿದೆ. ಇದನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಈ ಕಾನೂನಿನಲ್ಲಿನ ಕುಂದುಕೊರತೆಗಳನ್ನು ದೂರ ಮಾಡಿ ಅದನ್ನು ಹೆಚ್ಚೆಚ್ಚು ಪರಿಪೂರ್ಣ ಮಾಡಬೇಕು, ಎಂದು ಜನರ ಅಪೇಕ್ಷೆಯಾಗಿದೆ !
ದೇಶದ್ರೋಹಿ ಕಾನೂನು ಎಂದರೇನು ?ಭಾರತೀಯ ದಂಡ ಸಂಹಿತೆ ಸೆಕ್ಷನ್ ೧೨೪-ಅ ರಲ್ಲಿ ದೇಶದ್ರೋಹಿ ಕಾನೂನನ್ನು ವ್ಯಾಖ್ಯಾನಿಸಿದೆ. ಈ ಕಾನೂನಿನ ಪ್ರಕಾರ ಓರ್ವ ವ್ಯಕ್ತಿಯು ಸರಕಾರದ ವಿರುದ್ಧ ಏನೇ ಬರೆದರೆ ಅಥವಾ ಮಾತನಾಡಿದರೆ ಅಥವಾ ಇಂತಹ ಅಂಶಗಳಿಗೆ ಯಾರಾದರು ಬೆಂಬಲ ನೀಡಿದರೆ ಸಂಬಂಧಪಟ್ಟವರಿಗೆ ಜೀವಾವಧಿ ಶಿಕ್ಷೆ ಅಥವಾ ೩ ವರ್ಷದ ಶಿಕ್ಷೆಯ ಪ್ರಬಂಧ (ಏರ್ಪಾಡು) ಮಾಡಲಾಗಿದೆ. |

ನವ ದೆಹಲಿ – ‘ದೇಶದ್ರೋಹ ಕಾನೂನು’ ಇದು ಬ್ರಿಟಿಷರ ಕಾನೂನು ಆಗಿದೆ. ಬ್ರಿಟಿಷರು ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅದನ್ನು ಉಪಯೋಗಿಸಿದ್ದರು ಅದನ್ನು ಮ. ಗಾಂಧಿ ಮತ್ತು ಲೋಕಮಾನ್ಯ ತಿಲಕ ಇವರ ವಿರುದ್ಧ ಉಪಯೋಗಿಸಲಾಗಿತ್ತು. ೭೫ ವರ್ಷಗಳ ನಂತರವೂ ಕೂಡ ಈ ದೇಶದ್ರೋಹ ಕಾನೂನಿನ ಅವಶ್ಯಕತೆ ಇದೆಯೇ ? ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ಪ್ರಶ್ನಿಸಿದೆ. ಈ ಅರ್ಜಿಯನ್ನು ಮಾಜಿ ಮೇಜರ ಜನರಲ ಎಸ್.ಜಿ. ವೊಂಮಬಟಕೆರೆ ಇವರು ಸಲ್ಲಿಸಿದ್ದಾರೆ. ಇದರಲ್ಲಿ ಅವರು ದೇಶದ್ರೋಹಿ ಚಟುವಟಿಕೆಗಳಿಗಾಗಿ ಅಸ್ತಿತ್ವದಲ್ಲಿರುವ ಭಾ.ದಂ,ಸಂ.ಯ ಸೆಕ್ಷನ್ ೧೨೪-ಅ ಗೆ ಸವಾಲು ಹಾಕಿದ್ದಾರೆ.
ಈ ಅರ್ಜಿಯಲ್ಲಿ ವೊಂಮಬಟಕೆರೆ ಇವರು, ಈ ಕಾನೂನು ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಜನರ ಮೂಲಭೂತ ಅಧಿಕಾರವಾಗಿದೆ. ಈ ಕಾನೂನು ಸಂಪೂರ್ಣವಾಗಿ ಸಂವಿಧಾನದ ವಿರುದ್ಧವಾಗಿದ್ದು ಅದನ್ನು ರದ್ದು ಪಡಿಸಬೇಕು ಎಂದು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇವರು ಮಂಡಿಸಿದ ಅಂಶಗಳು
೧. ಸರಕಾರವು ಅನೇಕ ಕಾನೂನುಗಳನ್ನು ರದ್ದು ಪಡಿಸುತ್ತಿದೆ, ಹಾಗಾದರೇ ಈ ದೇಶದ್ರೋಹದ ಕಾನೂನಿನ ಬಗ್ಗೆ ಏಕೆ ವಿಚಾರ ಮಾಡುತ್ತಿಲ್ಲ ?
೨. ಈ ಸೆಕ್ಷನ್ ಅಂದರೆ ಬಡಗಿಗೆ ಮರವನ್ನು ಕತ್ತರಿಸಲು ಗರಗಸ ನೀಡಿದಾಗ ಆತ ಪೂರ್ಣ ಕಾಡನ್ನು ಕತ್ತರಿಸಿದಂತೆ ಆಗಿದೆ.
೩. ಸೆಕ್ಷನ ೧೨೪-ಅ ಯಿಂದ ಪೊಲೀಸರಿಗೆ ಇಷ್ಟು ಅಧಿಕಾರ ಸಿಕ್ಕಿದೆ ಎಂದರೆ, ಅವರು ಜೂಜಾಡುವವರ ಮೇಲೆಯೂ ದೇಶದ್ರೋಹದ ಅಪರಾಧವನ್ನು ದಾಖಲಿಸಬಹುದು.
೪. ಒಂದುವೇಳೆ ಸರಕಾರವು ಅಥವಾ ಪಕ್ಷವು ಯಾವುದೇ ಮಾತನ್ನು ಕೇಳಲು ಬಯಸದಿದ್ದಲ್ಲಿ, ಅವು ಸಂಬಂಧಪಟ್ಟವರ ವಿರುದ್ಧ ಈ ಕಾನೂನನ್ನು ಉಪಯೋಗಿಸುವರು. ಇಷ್ಟು ಕೆಟ್ಟ ಸ್ಥಿತಿ ಉದ್ಭವಿಸಿದೆ.
ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕವೂ ದೇಶದ್ರೋಹದ ಕಾನೂನು ಅಗತ್ಯವಿದೆಯೇ? ಸುಪ್ರೀಂ#SupremeCourt
https://t.co/RmGKQ2rR57— Udayavani (@udayavani_web) July 15, 2021
ಸೆಕ್ಷನ್ ರದ್ದು ಪಡಿಸುವ ಅಗತ್ಯವಿಲ್ಲ !
ಕೇಂದ್ರ ಸರಕಾರದ ವತಿಯಿಂದ ಆಟರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಇವರು ನ್ಯಾಯಾಲಯದಲ್ಲಿ, ಈ ಕಾನೂನನ್ನು ಸಂರ್ಪೂವಾಗಿ ರದ್ದು ಪಡಿಸುವ ಅವಶ್ಯಕತೆಯಿಲ್ಲ; ಆದರೆ ಮಾರ್ಗದರ್ಶಕ ಅಂಶಗಳನ್ನು ನಿರ್ಧರಿಸಲಾಗಬೇಕು. ಹೀಗೆ ಮಾಡುವುದರಿಂದ ಕಾನೂನಿನ ಉದ್ದೇಶವು ಸಫಲವಾಗಬಹುದು.
ಕಳೆದ ೧೦ ವರ್ಷಗಳಲ್ಲಿ ೧೧ ಸಾವಿರ ಜನರ ವಿರುದ್ಧ ದೇಶದ್ರೋಹದ ಅಪರಾಧ ದಾಖಲು !
ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆ ‘ಆರ್ಟಿಕಲ್-೧೪ ಡಾಟ್ ಕಾಮ್’ನ ಈ ವರ್ಷದ ಫೆಬ್ರವರಿ ತಿಂಗಳ ವರದಿಯಲ್ಲಿ, ೨೦೧೦ ರಿಂದ ೨೦೨೦ ಈ ೧೦ ವರ್ಷಗಳಲ್ಲಿ ದೇಶದಲ್ಲಿ ೧೧ ಸಾವಿರ ಜನರ ಮೇಲೆ ೮೧೬ ದೇಶದ್ರೋಹದ ಅಪರಾಧಗಳು ದಾಖಲಾಗಿದೆ. ಅದರಲ್ಲಿ ಶೇ. ೬೫ ರಷ್ಟು ಅಪರಾಧಗಳನ್ನು ೨೦೧೪ ರ ನಂತರ ದಾಖಲಿಸಲಾಗಿದೆ ಎಂದು ಹೇಳಿದೆ.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !