ಮತಾಂಧರ ಈ ಕೃತ್ಯದ ಬಗ್ಗೆ ಕ್ರೈಸ್ತ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ?

ಗಾಂಧಿನಗರ (ಗುಜರಾತ) – ವಡೊದರಾದಲ್ಲಿನ ತರಸಾಲಿ ಪ್ರದೇಶದಲ್ಲಿ ವಾಸಿಸುವ ೨೫ ವರ್ಷದ ಸಮೀರ ಅಬ್ದುಲ್ಭಾಯಿ ಕುರೇಶಿಯು ಇನ್ಸ್ಟಾಗ್ರಾಮ್ನಿಂದ ತನ್ನ ಹೆಸರನ್ನು ‘ಸಾಮ್ ಮಾರ್ಟಿನ್’ ಎಂದು ಹೇಳಿ ಓರ್ವ ಹಿಂದೂ ಯುವತಿಯೊಂದಿಗೆ ಸ್ನೇಹ ಬೆಳೆಸಿದನು. ನಂತರ ಪ್ರತ್ಯಕ್ಷ ಭೇಟಿಯಾಗಿ ಶಾರೀರಿಕ ಸಂಪರ್ಕವಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ. ಆಕೆಯ ಆಕ್ಷೆಪಾರ್ಹ ಸ್ಥಿತಿಯಲ್ಲಿನ ಛಾಯಾಚಿತ್ರಗಳನ್ನು ತೆಗೆದು ಆಕೆಗೆ ಮದುವೆಯಾಗುವಂತೆ ಮಾಡಿದನು. ಮದುವೆಯಾಗದಿದ್ದರೆ ಛಾಯಾಚಿತ್ರವನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಬೆದರಿಕೆಯನ್ನು ಹಾಕಿದ್ದನು. ಕುರೇಶಿಯ ನಿಜವಾದ ಹೆಸರು ತಿಳಿದ ಕೂಡಲೇ ಮಹಿಳೆಯು ಪೊಲೀಸರಲ್ಲಿ ದೂರನ್ನು ನೊಂದಾಯಿಸಿದಳು. ಪೊಲೀಸರು ಆತನ ವಿರುದ್ಧ ಮತಾಂತರವಿರೋಧಿ ಕಾಯ್ದೆಯನ್ವಯ ಅಪರಾಧವನ್ನು ದಾಖಲಿಸಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ಅಪರಾಧಿ ವ್ಯಕ್ತಿಗೆ ೩ ರಿಂದ ೫ ವರ್ಷಗಳ ಸೆರೆಮನೆ ವಾಸ ಮತ್ತು ೨ ಲಕ್ಷ ರೂಪಾಯಿವರೆಗಿನ ದಂಡ ತೆತ್ತಬೇಕಾಗುತ್ತದೆ. ಒಂದುವೇಳೆ ಸಂತ್ರಸ್ಥೆಯು ಅಪ್ರಾಪ್ತೆಯಾಗಿದ್ದರೆ ಅಥವಾ ಪರಿಶಿಷ್ಟ ಜಾತಿ-ಪಂಗಡದವರಾಗಿದ್ದರೆ, ಅಪರಾಧಿ ವ್ಯಕ್ತಿಗೆ ೪ ರಿಂದ ೭ ವರ್ಷ ವರೆಗಿನ ಶಿಕ್ಷೆ ಹಾಗೂ ೩ ಲಕ್ಷದ ತನಕ ದಂಡ ತೆರಬೇಕಾಗುತ್ತದೆ. ಮತಾಂತರದ ಪ್ರಕರಣದಲ್ಲಿ ಯಾವುದಾದರು ಸಂಘಟನೆಯೊಂದಿಗೆ ಸಂಬಂಧವಿದ್ದರೆ, ಈ ಶಿಕ್ಷೆಯು ೩ ರಿಂದ ೧೦ ವರ್ಷಗಳದ್ದಾಗುವ ಸಾಧ್ಯತೆಯಿದೆ.
First FIR in Gujarat under new law: Muslim man pretends to be Christian, blackmails, hurls caste abuse, forces woman to convert to Islam after marriagehttps://t.co/qweXOUXSXq
— OpIndia.com (@OpIndia_com) June 19, 2021
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders